ಹನೂರು: ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ
![ಹನೂರು: ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಹನೂರು: ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ](https://www.varthabharati.in/sites/default/files/images/articles/2018/02/5/IMG_20180205_112631 (1).jpg)
ಹನೂರು,ಫೆ.05 : ಹನೂರು ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಹೊರ ತಂದಿರುವ 2018 ನೇ ಸಾಲಿನ ಕ್ಯಾಲೆಂಡರ್, ಶಿಕ್ಷಕರಿಗೆ ಅಗತ್ಯವಾದ ಎಲ್ಲಾ ಶೈಕ್ಷಣಿಕ ವಿವರಗಳನ್ನು ಒಳಗೂಂಡಿದೆ ಎಂದು ಹನೂರು ಶೈಕ್ಷಣಿಕ ವಲಯದ ಶಿಕ್ಷಾಣಾಧಿಕಾರಿಗಳಾದ ಟಿ.ಆರ್ ಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಕೊಠಡಿಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಹನೂರು ಶೈಕ್ಷಣಿಕ ವಲಯ 2018ರ ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ಯಾಲೆಂಡರ್ ವಿಶೇಷತೆಗಳನ್ನು ಪ್ರಶಂಸಿಸಿ, ಶಿಕ್ಷಕರಿಗೆ ಈ ಕ್ಯಾಲೆಂಡರ್ ಕೈಗನ್ನಡಿಯಾಗಿದೆ. ಕ್ಯಾಲೆಂಡರ್ ಪ್ರತಿಯೊಬ್ಬನ ಅಗತ್ಯದ ಸಾಧನಗಳಲ್ಲಿ ಒಂದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನೂತನ ಕ್ಯಾಲೆಂಡರ್ ಕೊಡುಗೆ ನೀಡಿದ ಹಾಗೂ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಜಯಪ್ರಕಾಶ್ ವಕೀಲರಿಗೆ ಹನೂರು ಶೈಕಣಿಕ ವಲಯದ ಶಿಕ್ಷಾಣಾಧಿಕಾರಿಗಳಾದ ಟಿ.ಆರ್ ಸ್ವಾಮಿ ಮತ್ತು ಹನೂರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಸನ್ಮಾನ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷರಾದ ಜಾನ್ಬ್ರಿಟೋ, ಮುಖ್ಯ ಶಿಕ್ಷಕರ ಸಂಘದ ಅದ್ಯಕ್ಷ ನಂಜುಂಡಸ್ವಾಮಿ, ಉಪಾದ್ಯಕ್ಷ ಶಿವಮಲ್ಲು, ಉಪಾದ್ಯಕ್ಷೆ ಮರಿಯಮ್ಮ, ಖಜಾಂಚಿ ಮಾದೇಶ್ , ಗಿರೀಶ್, ಸಹ ಕಾರ್ಯದರ್ಶಿ ಬಿಆರ್ಸಿ ಕ್ಯಾತ, ಬಿಆರ್ಪಿ ಸತೀಶ್, ಸಿಆರ್ಪಿ ಶ್ರೀನಿವಾಸ್, ಶ್ವೇತಾ, ಪ್ರೀತಮ್ ಪದಾಧಿಕಾರಿಗಳಾದ ರೂಪಶ್ರಿ ಇನ್ನಿತರರು ಹಾಜರಿದ್ದರು