ಅನ್ನಪೂರ್ಣೇಶ್ವರಿ ಚೆಸ್ ಪಂದ್ಯಾವಳಿ: ಗ್ರಾಂಡ್ ಮಾಸ್ಟರ್ ತೇಜು ಕುಮಾರ್ ಚಾಂಪಿಯನ್
![ಅನ್ನಪೂರ್ಣೇಶ್ವರಿ ಚೆಸ್ ಪಂದ್ಯಾವಳಿ: ಗ್ರಾಂಡ್ ಮಾಸ್ಟರ್ ತೇಜು ಕುಮಾರ್ ಚಾಂಪಿಯನ್ ಅನ್ನಪೂರ್ಣೇಶ್ವರಿ ಚೆಸ್ ಪಂದ್ಯಾವಳಿ: ಗ್ರಾಂಡ್ ಮಾಸ್ಟರ್ ತೇಜು ಕುಮಾರ್ ಚಾಂಪಿಯನ್](https://www.varthabharati.in/sites/default/files/images/articles/2018/02/5/chess pandya.jpg)
ಮೂಡಿಗೆರೆ, ಫೆ.5: ಹೊರನಾಡಿನಲ್ಲಿ ನಡೆದ ರಾಜ್ಯ ಮುಕ್ತ ಚೆಸ್ ಪಂದ್ಯಾವಳಿಯಲ್ಲಿ ರೈಲ್ವೇಸ್ ತಂಡವನ್ನು ಪ್ರತಿನಿಧಿಸಿದ ಗ್ರಾಂಡ್ ಮಾಸ್ಟರ್ ಮೈಸೂರಿನ ತೇಜುಕುಮಾರ್ 9.5 ಅಂಕ ಗಳಿಸಿ ಚಾಂಪಿಯನ್ ಆಗಿದ್ದಾರೆ.
ಬೆಂಗಳೂರಿನವರಾದ ಡಿ.ಯಶಸ್ 9 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದರೆ, ಇಂಟರ್ ನ್ಯಾಷಿನಲ್ ಮಾಸ್ಟರ್ ರವಿ ಹೆಗಡೆ 8 ಅಂಕ ಗಳಿಸುವ ಮೂಲಕ ತೃತೀಯ ಸ್ಥಾನ, ಎಚ್.ಎನ್.ನಿಶಾಂತ್ ಮತ್ತು ಹಾಸನದ ಎಂ.ಪಿ.ತ್ಯಾಗರಾಜ್ ತಲಾ 8 ಅಂಕದೊಂದಿಗೆ 4 ಮತ್ತು 5 ನೇ ಸ್ಥಾನ ಪಡೆದಿದ್ದಾರೆ.
ಶ್ರಯಾಂಕ 1800 ವಿಭಾಗದಲ್ಲಿ ಪ್ರಥಮ ಸ್ಥಾನ ವೈ.ಎಸ್.ಪನ್ನಗ, ದ್ವಿತೀಯ ಕೆ.ಎಂ.ಪ್ರಜ್ವಲ್, ತೃತಿಯ ಸ್ಥಾನವನ್ನು ಶ್ರಯಾಕ್ ಯಶ್ಮಯ ಪಡೆದರು.
1600 ವಿಭಾಗದಲ್ಲಿ ಪ್ರಥಮ ನಚಿಕೇತ್ ಅಡಿಗ, ದ್ವಿತೀಯ ಕಾರ್ತಿಕ್ ಬಾರದ್ವಜ್, ತೃತೀಯ ಸ್ಥಾನ ಸುದನ್ವ ಶಬರಾಯ ಪಡೆದರು.
1400 ವಿಭಾಗದಲ್ಲಿ ಪ್ರಥಮ ಅರುಣ್ ದಿನಕರ್, ದ್ವಿತೀಯ ಸಸ್ಮಿತ ಎ.ಸುವರ್ಣ, ತೃತೀಯ ಸ್ಥಾನ ಅರ್ಜುನ್ ರಾವ್ ಪಡೆದರೆ, 1200 ವಿಭಾಗದಲ್ಲಿ ಪ್ರಥಮ ಮಂಜುನಾಥ್, ದ್ವಿತೀಯ ರುಥ್ವಿಕ್ ಶ್ರೀಕಾಂತ್, ತೃತೀಯ ಸ್ಥಾನ ಗಗನ ಪಡೆದುಕೊಂಡರು.
ಶ್ರಯಾಂಕ ರಹಿತ ವಿಭಾಗದಲ್ಲಿ ಪ್ರಥಮ ರವಿ ಹೆಗಡೆ, ದ್ವಿತೀಯ ಸ್ಥಾನ ಎಚ್.ಕೆ.ಅರ್ಷಿತ ಪಡೆದರು. 50 ವರ್ಷ ಮೇಲ್ಪಟ್ಟ ಹಿರಿಯರ ವಿಭಾಗದಲ್ಲಿ ಪ್ರಥಮ ಮಂಜುನಾಥಗೌಡ, ದ್ವಿತೀಯ ಸ್ಥಾನ ಹಾಲೇಶ್ವರಯ್ಯ ಹೊನ್ನಾಳಿ ಪಡೆದರು.18 ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗದಲ್ಲಿ ಪ್ರಥಮ ಯು.ಹನಿಗೌಡ, ದ್ವಿತೀಯ ಸ್ಥಾನ ಶುಭಾಶಿನಿ ಪಡೆದುಕೊಂಡರು.
15 ವರ್ಷ ಬಾಲಕರ ವಿಭಾಗದಲ್ಲಿ ಕ್ಷಿತೀಜ್, 13 ವರ್ಷ ವಿಭಾಗದಲ್ಲಿ ಸಾಲಿಯಾನ್ ಲಕ್ಷಿತ್, 11 ವರ್ಷ, ಧನುಷ್ ರಾಮ್, 9 ವರ್ಷ ಎಂ.ಜಿ.ಪ್ರೇರಣ್, 7 ವರ್ಷ ವಿಭಾಗದಲ್ಲಿ ಧರ್ಶಭಟ್ ಪ್ರಥಮ ಸ್ಥಾನ ಗಿಟ್ಟಿಸಿಕೊಂಡರು.
ಬಾಲಕೀಯರ ವಿಭಾಗದಲ್ಲಿ 15 ವರ್ಷದಲ್ಲಿ ದೀಪ್ತಿ ಲಕ್ಷ್ಮಿ, 13 ವರ್ಷ, ಸುಹೇನಾ ಸುಮಾ ಧರ್ಶನ್, 11 ವರ್ಷ, ಕುಂಜಲ್ ವಿನಾಯಕ ರಾಸ್ಕರ್, 9 ವರ್ಷ, ಅರುಶಿ ಸೆವರಿನ್ ಎಲೆನ್ ಡಿಸೋಜಾ, 7 ವರ್ಷ ವಿಭಾಗದಲ್ಲಿ ತೀರ್ಥ ಅಮಂದ ಗೊನ್ಸಾಲ್ವೆಸ್ ಪ್ರಥಮ ಸ್ಥಾನ ಪಡೆದರು.
ಚಿಕ್ಕಮಗಳೂರು ವಿಭಾಗದಲ್ಲಿ ಚಾಂಪಿಯನ್ ಆಗಿ ಎಂ.ಪಿ.ಪ್ರಶಾಂತ್, ವಿವಿಧ ವಿಭಾಗಗಳಲ್ಲಿ ಮಹೇಂದರ್, ಎಂ.ಶೈಲಾ, ಶ್ರೀರಂಗ ಬಾರದ್ವಾಜ್, ಅವನಿ ಆಚಾರ್ಯ, ಎಂ.ಪಿ.ಪ್ರಜಿತ, ಈಶ್ವರಿ ಶ್ರೀಗಂಧ, ಸನತ್ಕುಮಾರ್ ಪ್ರಥಮ ಸ್ಥಾನ ಗಳಿಸಿದ್ದಾರೆ.