Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸಿಡಿಲಿನ ಸಂದರ್ಭ ಏಕಾಏಕಿ 50,000...

ಸಿಡಿಲಿನ ಸಂದರ್ಭ ಏಕಾಏಕಿ 50,000 ಫ್ಯಾ.ಹೀಟ್‌ವರೆಗಿನ ಉಷ್ಣತೆ ಹೇಗೆ ಸೃಷ್ಟಿಯಾಗುತ್ತದೆ?

ವಿಸ್ಮಯಕ್ಕೆ ವಿಜ್ಞಾನದ ಉತ್ತರ

ವಾರ್ತಾಭಾರತಿವಾರ್ತಾಭಾರತಿ7 Feb 2018 4:51 PM IST
share
ಸಿಡಿಲಿನ ಸಂದರ್ಭ ಏಕಾಏಕಿ 50,000 ಫ್ಯಾ.ಹೀಟ್‌ವರೆಗಿನ ಉಷ್ಣತೆ ಹೇಗೆ ಸೃಷ್ಟಿಯಾಗುತ್ತದೆ?

ವಿಸ್ಮಯಕ್ಕೆ ವಿಜ್ಞಾನದ ಉತ್ತರ

ಸಿಡಿಲು ಅನಿಲಗಳಿಂದ ವಿಸರ್ಜನೆಗೊಳ್ಳುವ ವಿದ್ಯುಚ್ಛಕ್ತಿಯಾಗಿದೆ. ಮೋಡಗಳು ರೂಪುಗೊಳ್ಳುವಾಗ ಮತ್ತು ಪ್ರತ್ಯೇಕಗೊಳ್ಳುವಾಗ ಕೆಲವು ಮೋಡಗಳು ಇಲೆಕ್ಟ್ರಾನ್‌ಗಳನ್ನು ಕಳೆದುಕೊಂಡು ಧನ ವಿದ್ಯುತ್ ಆವೇಶವನ್ನು ಮತ್ತು ಇತರ ಮೋಡಗಳು ಇಲೆಕ್ಟ್ರಾನ್‌ಗಳನ್ನು ಸಂಗ್ರಹಿಸಿ ಋಣ ವಿದ್ಯುತ್ ಆವೇಶವನ್ನು ಪಡೆಯುತ್ತವೆ.

ಒಂದೇ ವಿಧದ ವಿದ್ಯುತ್ ಆವೇಶಗಳ ವಿದ್ಯುತ್‌ಸ್ಥಾಯಿ ವಿಕರ್ಷಣೆಯಿಂದಾಗಿ ಮೋಡಗಳ ಮೇಲ್ಮೈ ವಲಯಗಳಲ್ಲಿ ಸ್ಥಾಯಿ ವಿದ್ಯುತ್ ಸಾಂದ್ರಗೊಳ್ಳುತ್ತದೆ. ಮಳೆಗಾಲದಲ್ಲಿ ಮೋಡಗಳು ವೇಗವಾಗಿ ಚಲಿಸಿ ಪರಸ್ಪರ ಘರ್ಷಿಸುತ್ತಿರುತ್ತವೆ. ಧನ ವಿದ್ಯುತ್ ಆವೇಶ ಹೊಂದಿರುವ ಮೋಡಗಳು ಮತ್ತು ಋಣ ವಿದ್ಯುತ್ ಆವೇಶ ಹೊಂದಿರುವ ಮೋಡಗಳು ಪರಸ್ಪರ ಘರ್ಷಿಸಿದಾಗ ಆ ಜಾಗದಲ್ಲಿ ಕೆಪಾಸಿಟರ್ ಅಥವಾ ಧಾರಕಗಳು ರೂಪುಗೊಳ್ಳುತ್ತವೆ. ಧಾರಕವು ತನ್ನ ಗರಿಷ್ಠ ಸಂಗ್ರಹ ಸಾಮರ್ಥ್ಯವನ್ನು ತಲುಪಿದಾಗ ತನ್ನೊಳಗೆ ಶೇಖರವಾಗಿರುವ ವಿದ್ಯುತ್ತನ್ನು ಹೊರಹಾಕುತ್ತದೆ. ಈ ವಿಸರ್ಜನ ಕ್ರಿಯೆಯು ದಿಢೀರ್ ಆಗಿ ಕೆಲವೇ ಕ್ಷಣಗಳ ಕಾಲ ನಡೆಯುತ್ತದೆ. ಈ ಸಂದರ್ಭದಲ್ಲಿ ವಿದ್ಯುತ್ ಶಕ್ತಿಯು ಉಷ್ಣತೆಯಾಗಿ ಪರಿವರ್ತನೆಗೊಳ್ಳುತ್ತದೆ. ವಿದ್ಯುತ್ ವಿಸರ್ಜನೆ ಅಲ್ಪ ಅವಧಿಯದಾಗಿದ್ದರೂ ವೋಲ್ಟೇಜ್ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಹೀಗೆ ಉತ್ಪತ್ತಿಯಾದ ಉಷ್ಣತೆಯ ಪ್ರಮಾಣ ಸಾವಿರಾರು ಡಿಗ್ರಿ ಫ್ಯಾರನ್‌ಹೀಟ್‌ಗಳಷ್ಟು ಇರುತ್ತದೆ.

ಈ ಉಷ್ಣತೆ ಸೂರ್ಯನ ಮೇಲ್ಮೈಯಲ್ಲಿ ಇರುವ ಉಷ್ಣತೆ(10,000 ಡಿ.ಫ್ಯಾ.)ಗಿಂತಲೂ ಅಧಿಕವಾಗಿರುತ್ತದೆ. ಹೀಗೆ ಬಿಡುಗಡೆಗೊಂಡ ಉಷ್ಣತೆಯು ಮೋಡಗಳ ವಿದ್ಯುತ್ ವಿಸರ್ಜಿತ ಭಾಗಗಳ ಅಣುಗಳನ್ನು ಧ್ವಂಸಗೊಳಿಸಿ ಪ್ಲಾಸ್ಮಾದ ರೂಪಕ್ಕೆ ಪರಿವರ್ತಿಸುತ್ತದೆ ಮತ್ತು ಈ ಪ್ಲಾಸ್ಮಾ ಮಿಂಚನ್ನು ಹೊರಸೂಸುತ್ತದೆ ಮತ್ತು ವಾತಾವರಣದಲ್ಲಿ ತೀವ್ರ ಒತ್ತಡದ ಏರಿಳಿತಗಳ ಮೂಲಕ ಭಾರೀ ಶಬ್ದಕ್ಕೆ ಕಾರಣವಾಗುತ್ತದೆ.

ಸಿಡಿಲಿನ ಸಂದರ್ಭದಲ್ಲಿ ಚಾರ್ಜ್ಡ್ ಕೆಪಾಸಿಟರ್(ಮೋಡ)ಗಳ ಮೂಲಕ ವಿದ್ಯುತ್ ವಿಸರ್ಜನೆಯು ಏಕಾಏಕಿ ಆಗುವುದರಿಂದ ಮತ್ತು ಅದರ ಪ್ರವಾಹ ಹಾಗು ವೋಲ್ಟೇಜ್ ಅಧಿಕವಾಗಿರುವುದರಿಂದ ಸೃಷ್ಟಿಯಾಗುವ ಉಷ್ಣತೆಯು ದಿಢೀರ್‌ನೆ 50,000 ಡಿ.ಫ್ಯಾರನ್‌ಹೀಟ್‌ವರೆಗೆ ತಲುಪುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X