ಮಂಡ್ಯ: ಹೆಜ್ಜೇನು ದಾಳಿ; 15 ಮಂದಿಗೆ ತೀವ್ರ ಗಾಯ
![ಮಂಡ್ಯ: ಹೆಜ್ಜೇನು ದಾಳಿ; 15 ಮಂದಿಗೆ ತೀವ್ರ ಗಾಯ ಮಂಡ್ಯ: ಹೆಜ್ಜೇನು ದಾಳಿ; 15 ಮಂದಿಗೆ ತೀವ್ರ ಗಾಯ](https://www.varthabharati.in/sites/default/files/images/articles/2018/02/9/9MDY-7.jpg)
ಮಂಡ್ಯ, ಫೆ.9 ಹೆಜ್ಜೇನು ದಾಳಿಯಿಂದಾಗಿ ಸುಮಾರು 15 ಮಂದಿ ತೀವ್ರ ಗಾಯಗೊಂಡಿರುವ ಘಟನೆ ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದ ಆವರಣದಲ್ಲಿ ನಡೆದಿದೆ.
ಅಂಬೇಡ್ಕರ್ ಭವನದಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಆಗಮಿಸಿದ್ದ ನೇಣೂರು ಗ್ರಾಮದ ಮಹದೇವಸ್ವಾಮಿ, ಸಾದರಹಳ್ಳಿ ಶ್ರಿನಿವಾಸ್, ಬಳ್ಳಗೆರೆ ಶಿವರಾಜಮ್ಮ, ಇಂದ್ರಮ್ಮ, ಶೆಟ್ಟಹಳ್ಳಿ ಚಿಕ್ಕತಾಯಮ್ಮ, ಗೌಡಗೆರೆ ರಕ್ಷಿತ, ಬಾಣಸಮುದ್ರ ಚಿಕ್ಕಸಿದ್ದಮ್ಮ, ಶೆಟ್ಟಹಳ್ಳಿ ರಾಜೇಶ್ ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಗಾಯಳುಗಳನ್ನು ತಾಲೂಕು ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
Next Story