Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಪ್ಯಾಡ್ ಮ್ಯಾನ್ : ಈಗ ನಮ್ಮ ದೇಶಕ್ಕೆ...

ಪ್ಯಾಡ್ ಮ್ಯಾನ್ : ಈಗ ನಮ್ಮ ದೇಶಕ್ಕೆ ಬೇಕಾದ ನಿಜವಾದ ಸೂಪರ್ ಮ್ಯಾನ್

ಚಿತ್ರ ವಿಮರ್ಶೆ

ವಾರ್ತಾಭಾರತಿವಾರ್ತಾಭಾರತಿ10 Feb 2018 11:16 AM IST
share
ಪ್ಯಾಡ್ ಮ್ಯಾನ್ : ಈಗ ನಮ್ಮ ದೇಶಕ್ಕೆ ಬೇಕಾದ ನಿಜವಾದ ಸೂಪರ್ ಮ್ಯಾನ್

‘ಔರತೋಂ ಕೆ ಲಿಯೆ ಸಬ್ಸೆ ಬಡಿ ಬೀಮಾರಿ ಹೈ ಶರಮ್' ( ಮಹಿಳೆಯರನ್ನು ಕಾಡುವ ಅತಿ ದೊಡ್ಡ ರೋಗವೆಂದರೆ ನಾಚಿಕೆ)  ಅಕ್ಷಯ್ ಕುಮಾರ್ ಅಭಿನಯದ  ‘ಪ್ಯಾಡ್ ಮ್ಯಾನ್'  ಚಿತ್ರದಲ್ಲಿ ಕೇಳಿ ಬರುವ ಈ ಮಾತು ಅಕ್ಷರಶಃ ನಿಜ. ಮಹಿಳೆಯರು ಯಾವತ್ತೂ ಕಳಚಲು  ಸಾಧ್ಯವೇ ಇಲ್ಲದಂತಹ ಪರದೆಯ ಅಡಿಯಲ್ಲಿರಬೇಕಾದಂತಹ ಒತ್ತಡದಲ್ಲಿರುವುದನ್ನು ಇದು ಸೂಚಿಸುತ್ತದೆ. ಆದರೆ  ತಮ್ಮ 'ಪ್ಯಾಡ್ ಮ್ಯಾನ್' ಮೂಲಕ ನಿರ್ದೇಶಕ ಆರ್ ಬಲ್ಕಿ ಸಮಾಜಕ್ಕೆ ಈ ಸಂದೇಶ ನೀಡಲು ಬಯಸುತ್ತಿಲ್ಲವೆಂಬುದು ಸ್ತುತ್ಯಾರ್ಹ.

ಸಾಮಾಜಿಕ ಕಾರ್ಯಕರ್ತ ಅರುಣಾಚಲಂ ಮುರುಗನಾಥಂ ಜೀವನ ವೃತ್ತಾಂತವನ್ನು ಬಿಂಬಿಸುವ 'ಪ್ಯಾಡ್ ಮ್ಯಾನ್' ದೇಶದ ವಿವಿಧೆಡೆಗಳಲ್ಲಿ ಈ ಆಧುನಿಕ ಕಾಲದಲ್ಲಿಯೂ ಮುಟ್ಟಿನ ಬಗ್ಗೆ ಇರುವ ಅಂಧಶ್ರದ್ಧೆಗಳನ್ನು, ಗೌಪ್ಯತೆ ಹಾಗೂ ತಪ್ಪು ಅಭಿಪ್ರಾಯಗಳನ್ನು ಹೋಗಲಾಡಿಸುವ ಪ್ರಯತ್ನ ನಡೆಸಿದೆ. ತಮ್ಮ ಚಿತ್ರದಲ್ಲಿ ಬಲ್ಕಿ ನೇರವಾಗಿ ತಾವು ಹೇಳಬೇಕಾದ ಅಂಶದತ್ತವೇ  ಬರುತ್ತಾರೆ. ಲಕ್ಷ್ಮೀಕಾಂತ್ (ಅಕ್ಷಯ್ ಕುಮಾರ್) ಒಬ್ಬ ಒಳ್ಳೆಯ ಪತಿಯಾಗಿದ್ದು ತನ್ನ  ಪತ್ನಿ ಗಾಯತ್ರಿ (ರಾಧಿಕಾ ಆಪ್ಟೆ) ಯಾವುದೇ ರೀತಿಯ ತೊಂದರೆಯೆದುರಿಸದಂತೆ  ನೋಡಿಕೊಳ್ಳುತ್ತಾನೆ. ಆಕೆ ಕಷ್ಟವನ್ನನುಭವಿಸದೇ ಇರುವುದಕ್ಕೆ ಆತ ಯಾವುದೇ ಮಟ್ಟಕ್ಕೂ ಹೋಗಲು ಸಿದ್ಧನಿರುತ್ತಾನೆ.

ಆದರೆ   ತಿಂಗಳ 'ಆ ದಿನಗಳಲ್ಲಿ' ತನ್ನ ಪತ್ನಿಯನ್ನು ಮನೆಯಿಂದ  ಆಚೆಗೆ ಇಡಲಾಗುತ್ತಿರುವುದನ್ನು  ಹಾಗೂ ಆಕೆ ಕೊಳೆ ಬಟ್ಟೆಗಳನ್ನು  ಉಪಯೋಗಿಸುವುದನ್ನು ಆತ ನೋಡಿದಾಗ ಕಳವಳಗೊಳ್ಳುತ್ತಾನೆ. ಆಕೆ ಇಂತಹ ಕಷ್ಟಗಳನ್ನು ಅನುಭವಿಸದೇ ಇರಲಿ ಎಂದು ಆಕೆಗೆ ಉಪಯೋಗಿಸಿದ ನಂತರ ಬಿಸಾಡಬಹುದಾದಂತಹ ಸ್ಯಾನಿಟರಿ ನ್ಯಾಪ್ ಕಿನ್ ಖರೀದಿಸಿ  ತರುತ್ತಾನೆ. ಆದರೆ ಅದು ದುಬಾರಿಯೆಂದು ತಿಳಿದಾಗ ಅದನ್ನು  ಉಪಯೋಗಿಸುವುದಕ್ಕೆ ಆಕೆ ವಿರೋಧ ವ್ಯಕ್ತಪಡಿಸುತ್ತಾಳೆ.  ಮುಂದೆ ಲಕ್ಷ್ಮಿಕಾಂತ್ ಜೀವನದ ಸ್ಫೂರ್ತಿದಾಯಕ ಪಯಣ ಆರಂಭಗೊಳ್ಳುತ್ತದೆ.

ಚಿತ್ರ ನಿರ್ದೇಶಕ ಬಲ್ಕಿ ಹಾಗೂ ಚಿತ್ರಕಥಾಕಾರ ಸ್ವಾನಂದ್ ಕಿರ್ಕಿರೆ  ಚಿತ್ರದಲ್ಲಿ ನವಿರಾದ ಹಾಸ್ಯ ಉಪಯೋಗಿಸಿ ಮಾತುಗಳಲ್ಲಿ ಹೇಳಲಾರದ್ದನ್ನು  ಹೇಳುವ ಪ್ರಯತ್ನ  ನಡೆಸಿದ್ದು ಪ್ರಶಂಸಾರ್ಹ. ಆದರೆ ಚಿತ್ರದಲ್ಲಿ ಒಂದೇ ವಿಷಯ ಮತ್ತೆ ಮತ್ತೆ ಮರುಕಳಿಸುತ್ತದೆಯಾದರೂ  ಬದಲಾವಣೆ ಅಷ್ಟು ಸುಲಭ ಕಾರ್ಯವಲ್ಲವೆಂಬುದನ್ನು ಅದು ಸೂಚಿಸುತ್ತದೆ.

ಮುರುಗನಾಥಮ್ ಕೊಯಂಬತ್ತೂರು ಮೂಲದವನಾಗಿದ್ದರೆ ಈ ಚಿತ್ರದ ಕಥಾ ನಾಯಕ ಭಾರತದ ಪ್ರಮುಖ ಪ್ರದೇಶದವನಾಗಿರುತ್ತಾನೆ. ಮುಟ್ಟಿನ ಬಗ್ಗೆ ಮೌನ ವಹಿಸುವ ಬದಲು ಆತ  ಇಲ್ಲಿಯ ತನಕ ನಿಷಿದ್ಧವಾಗಿದ್ದ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಾನೆ. ಚಿತ್ರದ ಪ್ರಥಮಾರ್ಧದಲ್ಲಿ ರಾಧಿಕಾ ಆಪ್ಟೆ ಹಾಗೂ ದ್ವಿತೀಯಾರ್ಧದಲ್ಲಿ ಪರಿ (ಸೋನಮ್ ಕಪೂರ್) ಬೆಂಬಲದೊಂದಿಗೆ ಚಿತ್ರದುದ್ದಕ್ಕೂ ಅಕ್ಷಯ್ ಮಿಂಚುತ್ತಾರೆ.

ಅಮಿತ್ ತ್ರಿವೇದಿ ಅವರ ಸಂಗೀತ ಮನಮುಟ್ಟುತ್ತದೆ. ಅಕ್ಷಯ್ ಕುಮಾರ್ ಅವರನ್ನು 'ಪ್ಯಾಡ್ ಮ್ಯಾನ್' ಮೂಲಕ ಸೂಪರ್ ಹೀರೋ ಆಗಿಸಿದ  ನಿರ್ದೇಶಕ ಆರ್ ಬಲ್ಕಿ ಅವರಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X