3 ಲಕ್ಷ ರೂ. ಮೌಲ್ಯ ಚಿನ್ನಾಭರಣ ಕಳವು
ಶಂಕರನಾರಾಯಣ, ಫೆ.11: ಸಿದ್ಧಾಪುರ ಗ್ರಾಮದ ವಾರಾಹಿ ರಸ್ತೆಯ ಮನೆ ಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಡಿ.17ರಿಂದ ಫೆ.9ರ ಮಧ್ಯಾವಧಿಯಲ್ಲಿ ವಾರಾಹಿ ರಸ್ತೆಯ ಅಶೊಕ ಕುಮಾರ್ ಶೆಟ್ಟಿ ಎಂಬವರ ಮನೆಗೆ ನುಗ್ಗಿದ ಕಳ್ಳರು, ಮನೆಯಲ್ಲಿದ್ದ ಚಿನ್ನದ ಸರ, ಹವಳದ ಸರ, ಚಿನ್ನದ ಬಳೆ, ಸಣ್ಣ ಚಿನ್ನದ ಸರ ಸೇರಿದಂತೆ ಒಟ್ಟು 11 ಪವನ್ ತೂಕದ ಚಿನ್ನದ ಆಭರಣಗಳನನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 3 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story





