ಹಿರಿಯಡ್ಕ, ಫೆ.11: ದನ ಕಳವಿಗೆ ಯತ್ನಿಸುತ್ತಿದ್ದ ಮೂವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಶಿರೂರು ಮಠದ ಎದುರು ಫೆ.10 ರಂದು ಸಂಜೆ ವೇಳೆ ನಡೆದಿದೆ.
ಬಂಧಿತರನ್ನು ಮೂಡಬಿದ್ರೆಯ ಜಾಬೀರ್, ವಿಜಯ ಶೆಟ್ಟಿ, ಮುದ್ರಾಡಿಯ ಅಂಗಾರ ಎಂದು ಗುರುತಿಸಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.