Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಇನ್ನು ಮುಂದೆ ಇಲ್ಲಿ ಅತ್ತೆ –ಸೊಸೆ...

ಇನ್ನು ಮುಂದೆ ಇಲ್ಲಿ ಅತ್ತೆ –ಸೊಸೆ ಹೊಡೆದಾಡಿಕೊಳ್ಳಲ್ಲ !

ಶುರುವಾಗಿದೆ ಹೊಸ ಅಭಿಯಾನ

ವಾರ್ತಾಭಾರತಿವಾರ್ತಾಭಾರತಿ11 Feb 2018 11:14 PM IST
share
ಇನ್ನು ಮುಂದೆ ಇಲ್ಲಿ ಅತ್ತೆ –ಸೊಸೆ ಹೊಡೆದಾಡಿಕೊಳ್ಳಲ್ಲ !

ಅಹ್ಮದಾಬಾದ್, ಫೆ.11: ಪಾಟಿದಾರ್ ಮೀಸಲಾತಿ ಚಳವಳಿಯಿಂದ ದೇಶದ ಗಮನ ಸೆಳೆದಿದ್ದ ಗುಜರಾತ್‌ನಲ್ಲಿ ಈಗ ಮತ್ತೊಂದು ವಿಶಿಷ್ಟ ಅಭಿಯಾನ ಆರಂಭವಾಗಿದೆ. ‘ಪರಸ್ಪರರನ್ನು ಇಷ್ಟಪಡೋಣ’ ಎಂಬ ಧ್ಯೇಯವಾಕ್ಯದೊಡನೆ ಪಾಟಿದಾರ್ ಸಮುದಾಯದ ಅತ್ತೆ ಸೊಸೆಯರು ತಮ್ಮೆಳಗಿನ ಅಭಿಪ್ರಾಯಬೇಧಗಳನ್ನು ಬದಿಗಿಟ್ಟು ಪರಸ್ಪರರನ್ನು ಗೌರವಿಸಿ ಆದರಿಸುವ ಅಭಿಯಾನವನ್ನು ಆರಂಭಿಸಿದ್ದಾರೆ.

   ಈ ಹಿನ್ನೆಲೆಯಲ್ಲಿ ಜನವರಿ 29ರಂದು ರಾಜ್‌ಕೋಟ್‌ನಲ್ಲಿ ನಡೆದ ಬೃಹತ್ ಮಹಿಳಾ ರ್ಯಾಲಿಯಲ್ಲಿ 30,000ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡು ಅತ್ತೆ ಸೊಸೆಯರ ಒಗ್ಗಟ್ಟಿನ ಮಂತ್ರಕ್ಕೆ ಸಾಕ್ಷಿಯಾದರು.

     ಪರಿವಾರದೊಳಗೆ ನಡೆಯುವ ಕಲಹದಲ್ಲಿ ಶೇ.25ರಷ್ಟು ಅತ್ತೆ-ಸೊಸೆಯರ ನಡುವಿನ ಕಲಹವಾಗಿದೆ ಎಂದು ರಾಜ್ಯಸರಕಾರ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿರುವ ಹಿನ್ನೆಲೆಯಲ್ಲಿ ಇದೀಗ ರಾಜ್ಯದ ಅತ್ತೆ- ಸೊಸೆಯಂದಿರು ಒಗ್ಗೂಡಲು ನಿರ್ಧರಿಸಿದ್ದಾರೆ. ಅಲ್ಲದೆ ಗುಜರಾತ್ ರಾಜ್ಯದ ಸ್ತ್ರೀ-ಪುರುಷ ಅನುಪಾತದಲ್ಲೂ ತೀವ್ರ ಕುಸಿತ ಕಂಡಿದ್ದು 1000 ಪುರುಷರಿಗೆ 919 ಮಹಿಳೆಯರಿದ್ದಾರೆ. ಈ ಕಾರಣದಿಂದಲೇ ಕಳೆದೊಂದು ದಶಕದಿಂದ ಪಾಟಿದಾರ್ ಸಮುದಾಯದಲ್ಲಿ ‘ಬೇಟಿ ಬಚಾವೊ’ ಅಭಿಯಾನ ಆರಂಭವಾಗಿದೆ.

 ಅತ್ತೆ ಸೊಸೆಯರ ಮಧ್ಯೆ ಪರಸ್ಪರ ಗೌರವ, ಆದರದ ಭಾವನೆಯಿದ್ದರೆ ವರದಕ್ಷಿಣೆ, ಹೆಣ್ಣು ಭ್ರೂಣಹತ್ಯೆಯಂತಹ ಸಾಮಾಜಿಕ ಅನಿಷ್ಟಗಳನ್ನು ದೂರಗೊಳಿಸಲು ಸಾಧ್ಯ ಎಂಬ ವಿಶ್ವಾಸದಲ್ಲಿ ಪಾಟಿದಾರ್ ಸಮುದಾಯದ ಮಹಿಳೆಯರು ಈ ಅಭಿಯಾನಕ್ಕೆ ಜೊತೆಯಾಗಿದ್ದಾರೆ. ಪ್ರಸಿದ್ಧ ಸಾಹಿತಿ ಜಯ್ ವಾಸವ್ದ , ಸರಕಾರದ ಅಧಿಕಾರಿಗಳು, ಸರಕಾರದ ಅಧೀನದ ಮಹಿಳಾ ಹೆಲ್ಪ್‌ಲೈನ್ -ಅಭಯಂ ಮುಂತಾದ ಸಂಘಟನೆಗಳು ಇವರಿಗಾಗಿ ಸಮಾಲೋಚನಾ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.

 ಅತ್ತೆ ಸೊಸೆಯರು ಮನಸ್ತಾಪ ಮರೆತರೆ ಉಭಯರಿಗೂ ಲಾಭವಿದೆ. ಇದರಿಂದ ಸೊಸೆಗೆ ಮನೆಯಲ್ಲಿ ದೊರಕಬೇಕಾದ ಗೌರವ ದೊರೆಯುತ್ತದೆ ಹಾಗೂ ಆಕೆಯ ಹಕ್ಕನ್ನು ಮೊಟಕುಗೊಳಿಸಲು ಪುರುಷರು ನಡೆಸುವ ಕೃತ್ಯಕ್ಕೆ ಅತ್ತೆಯ ಸಹಕಾರ ದೊರಕುವುದಿಲ್ಲ. ಅಲ್ಲದೆ ಅತ್ತೆಯರು ಸೊಸೆಯಂದಿರ ಪ್ರೀತಿ ವಿಶ್ವಾಸ ಗಳಿಸುವ ಕಾರಣ ಅವರು ವೃದ್ಧಾಪ್ಯದಲ್ಲಿ ವೃದ್ಧಾಶ್ರಮ ಸೇರಿಕೊಳ್ಳುವ ಸಾಧ್ಯತೆ ದೂರವಾಗುತ್ತದೆ ಎಂದು ಪಟೇಲ್ ಸೇವಾ ಸಮಾಜದ ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಾಬೆನ್ ಪಟೇಲ್ ಹೇಳಿದ್ದಾರೆ.

ಅತ್ತೆ ತನ್ನೊಂದಿಗೆ ಇದ್ದಾರೆ ಎಂಬ ಧೈರ್ಯದಿಂದ ಸೊಸೆಯಂದಿರ ಆತ್ಮವಿಶ್ವಾಸ ಹೆಚ್ಚಿ ಅವರು ಮನೆಯಲ್ಲಿ ಹಾಗೂ ಸಮಾಜದಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ಬಾಳಲು ಸಾಧ್ಯವಾಗುತ್ತದೆ. ಅಲ್ಲದೆ ಬದುಕಿನಲ್ಲಿ ಎದುರಾಗುವ ಯಾವುದೇ ಸವಾಲನ್ನೂ ಎದುರಿಸುವ ಶಕ್ತಿಯನ್ನು ಪಡೆಯುತ್ತಾಳೆ ಎಂದು ವಿಜಯಾಬೆನ್ ಪಟೇಲರ ಸೊಸೆ ಕಿಂಜಲ್ ಹೇಳಿದ್ದಾರೆ.

   ಜ.29ರ ಮಹಿಳಾ ಅಭಿಯಾನದ ಯಶಸ್ಸಿನಿಂದ ಪ್ರೇರಿತಗೊಂಡು ಇದೀಗ ಮಹಿಳಾ ವಿಭಾಗದವರು ‘ಸಮಸ್ಯೆ ನಿವಾರಣೆ ವೇದಿಕೆ’ ಯನ್ನು ಆರಂಭಿಸಿದ್ದಾರೆ. ಇದು ತಿಂಗಳಿಗೆ ಎರಡು ಬಾರಿ ಸಭೆ ಸೇರಲಿದ್ದು ಇಲ್ಲಿ ಕುಟುಂಬದ ಸದಸ್ಯರು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ವಿಜಯಾಬೆನ್ ತಿಳಿಸಿದ್ದಾರೆ. ಒಂದು ರ್ಯಾಲಿ ನಡೆದರಷ್ಟೇ ಸಾಲದು. ಆಗಬೇಕಾದ ಕಾರ್ಯ ಇನ್ನೂ ಬಹಳವಿದೆ. ಆದರೆ ‘ಉತ್ತಮ ಆರಂಭ ಪಡೆಯುವ ಕಾರ್ಯ ಅರ್ಧ ಯಶಸ್ವಿಯಾದಂತೆ’ ಎಂಬ ನಾಣ್ಣುಡಿಯಂತೆ ನಮ್ಮ ಅಭಿಯಾನಕ್ಕೆ ಬೆಂಬಲ ದೊರೆತಿದೆ. ರಾಜ್‌ಕೋಟ್‌ನ ಹಲವು ಗಣ್ಯ ಕುಟುಂಬದವರೂ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ ಎಂದು ಈ ಅಭಿಯಾನದ ಸ್ಥಾಪಕರಲ್ಲಿ ಓರ್ವರಾದ ಮನೀಷ್ ಚಂಗೇಲಾ ಹರ್ಷ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಈ ಅಭಿಯಾನವನ್ನು ಮುಂದೆ ಸಾಗಿಸಿಕೊಂಡು ಹೋಗುತ್ತೇವೆ ಎಂದವರು ಹೇಳಿದ್ದಾರೆ.

ಇದೊಂದು ಸಂಪೂರ್ಣ ಸಾಮಾಜಿಕ ಅಭಿಯಾನವಾಗಿದ್ದು ರಾಜಕೀಯಕ್ಕೆ ಅವಕಾಶವಿಲ್ಲ.ರಾಜ್‌ಕೋಟ್ ಕಾರ್ಯಕ್ರಮದಲ್ಲಿ ಭಾಷಣ ಮಾಡಿದವರನ್ನು ಹೊರತುಪಡಿಸಿದರೆ ಯಾವುದೇ ರಾಜಕೀಯ, ಧಾರ್ಮಿಕ ಅಥವಾ ಸಮುದಾಯದ ನಾಯಕರು ಪಾಲ್ಗೊಂಡಿರಲಿಲ್ಲ ಎಂದು ಚಂಗೇಲಾ ಹೇಳಿದ್ದಾರೆ.

ಕುಟುಂಬದಲ್ಲಿ ಮಹಿಳಾ ಸದಸ್ಯರೊಳಗೆ ಒಗ್ಗಟ್ಟು ಮೂಡಿಸುವ ವಿಷಯದ ಬಗ್ಗೆ ಪ್ರಮುಖ ಸಾಹಿತಿಗಳು ಬರೆದಿರುವ ಲೇಖನಗಳನ್ನು ಒಳಗೊಂಡಿರುವ ಪುಸ್ತಕಗಳನ್ನು ಮನೆಮನೆಗೆ ತಲುಪಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅಭಿಯಾನಕ್ಕೆ ಬೆಂಬಲ ನೀಡಿರುವ ‘ಅಭಯಂ’ನ ಪ್ರಾದೇಶಿಕ ಮುಖ್ಯಸ್ಥ ತುಷಾರ್ ಬವರವ ಹೇಳಿದ್ದಾರೆ.

ಈ ಹಿಂದಿನ ತಲೆಮಾರಿನಲ್ಲಿ ಅತ್ತೆ ಸೊಸೆಯರ ಜಗಳ ಚರ್ಚೆಯ ವಿಷಯವಾಗಿರಲಿಲ್ಲ. ಆಗ ಮನೆಯ ಹಿರಿಯರ ಮಾತಿಗೆ ಗೌರವವಿತ್ತು. ಆದರೆ ಈಗಿನ ತಲೆಮಾರಿಗೆ ಎಲ್ಲವೂ ಬದಲಾಗಿದೆ. ಈಗ ವೈಯಕ್ತಿಕ ಹಕ್ಕಿನ ಕುರಿತು ಎಲ್ಲರೂ ಆಲೋಚಿಸುತ್ತಿದ್ದಾರೆ. ಈಗ ಅತ್ತೆಯಂದಿರೂ ಸೊಸೆಯ ಅಭಿಪ್ರಾಯ ಕೇಳಲು ಬಯಸುವುದಿಲ್ಲ. ಈ ಮನಃಸ್ಥಿತಿ ಬದಲಾಗಬೇಕಿದ್ದು ಸೌಹಾರ್ದಮಯ ವಾತಾವರಣ ನೆಲೆಸುವ ಅಗತ್ಯವಿದೆ ಎಂದು ವಿಜಯಾಬೆನ್ ಪಟೇಲ್ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X