Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮನವೆಂಬ ಮರ್ಕಟ

ಮನವೆಂಬ ಮರ್ಕಟ

ವಾರ್ತಾಭಾರತಿವಾರ್ತಾಭಾರತಿ13 Feb 2018 12:26 AM IST
share
ಮನವೆಂಬ ಮರ್ಕಟ

ಮನವೆಂಬ ಮರ್ಕಟನು ತನುವೆಂಬ ವೃಕ್ಷವನೇರಿ, ಇಂದ್ರಿಯಗಳೆಂಬ ಶಾಖೆಶಾಖೆಗೆ ಹಾರಿ,
ವಿಷಯಗಳೆಂಬ ಹಣ್ಣು ಫಲಂಗಳ ಗ್ರಹಿಸಿ,
ಭವದತ್ತ ಮುಖವಾಗಿ ಹೋಗುತ್ತಿದೆ ನೋಡಾ!
ಈ ಮನವೆಂಬ ಮರ್ಕಟವ ನಿಮ್ಮ ನೆನಹೆಂಬ ಪಾಶದಲ್ಲಿ ಕಟ್ಟಿ,
ಎನ್ನನುಳುಕೊಳ್ಳಯ್ಯ ಅಖಂಡೇಶ್ವರಾ.
                              -ಜೇವರ್ಗಿ ಷಣ್ಮುಖಸ್ವಾಮಿ

‘ಕಪಿಗೆ ಚಪಲತೆ ಸಹಜಂ’ ಎಂದು ರನ್ನ ಹೇಳುತ್ತಾನೆ. ಷಣ್ಮುಖಸ್ವಾಮಿಗಳು ಚಪಲತೆಯ ಸಂಕೇತವಾದ ಮಂಗನನ್ನು ಮನಸ್ಸಿಗೆ ಹೋಲಿಸಿದ್ದಾರೆ. ಮನಸ್ಸೆಂಬ ಮಂಗ ಸುಮ್ಮನೆ ಕೂಡುವಂಥದ್ದಲ್ಲ. ಅದನ್ನು ಹಿಡಿದು ನಿಲ್ಲಿಸುವುದು ಬಹಳ ಕಷ್ಟದ ಕೆಲಸ. ಅದು ಶರೀರವೆಂಬ ಮರವನ್ನು ಹತ್ತುತ್ತಲೇ ಇರುತ್ತದೆ. ಈ ಮರಕ್ಕೆ ಇಂದ್ರಿಯಗಳೆಂಬ ಟೊಂಗೆಗಳಿವೆ. ಈ ಮನಸ್ಸುರೂಪಿ ಮಂಗ ಟೊಂಗೆಯಿಂದ ಟೊಂಗೆಗೆ ಜಿಗಿಯುತ್ತಲೇ ಇರುತ್ತದೆ. ಜಿಗಿದು ಜಿಗಿದು ಕಿವಿ, ನಾಲಗೆ, ಕಣ್ಣು, ಮೂಗು ಮತ್ತು ಚರ್ಮದಂಥ ಕರ್ಮೇಂದ್ರಿಯಗಳ ಹಣ್ಣು ಹಂಪಲಗಳನ್ನು ಸಂಗ್ರಹಿಸುತ್ತದೆ. ಕೆಟ್ಟದ್ದನ್ನು ಕೇಳುತ್ತ, ಕೆಟ್ಟದ್ದನ್ನು ಸವಿಯುತ್ತ, ಕೆಟ್ಟದ್ದನ್ನು ನೋಡುತ್ತ, ಕೆಟ್ಟದ್ದನ್ನೇ ಮೂಸುತ್ತ ಮತ್ತು ತಟ್ಟುತ್ತ ಕಾಮೇಂದ್ರಿಯ ಸುಖವನ್ನು ಸವಿಯುತ್ತ ಅಧೋಮುಖಿಯಾಗಿ ಸಾಗುತ್ತದೆ. ಹೀಗೆ ಸಾಗುವಾಗ ವಸ್ತುಮೋಹದ ಬದುಕಲ್ಲೇ ಬಿದ್ದು ಹೊರಳಾಡುತ್ತಿರುತ್ತದೆ ಎಂದು ಷಣ್ಮುಖಸ್ವಾಮಿಗಳು ಲೌಕಿಕದಲ್ಲೇ ಮುಳುಗಿದವರ ಮನೋ ವಿಶ್ಲೇಷಣೆ ಮಾಡುತ್ತಾರೆ. ಆ ಮೂಲಕ ನಮ್ಮನ್ನು ತಬ್ಬಿಬ್ಬುಗೊಳಿಸುತ್ತಾರೆ. ಆದರೆ ಅದಕ್ಕೆ ಪರಿಹಾರವನ್ನೂ ಸೂಚಿಸುತ್ತಾರೆ.

ಭೌತಿಕ ಸುಖದ ಲೋಲುಪತೆಯಿಂದ ಹೊರಬರಬೇಕಾದರೆ ಮನಸ್ಸೆಂಬ ಕೋಡಗವನ್ನು ಧ್ಯಾನಪಾಶದಲ್ಲಿ ಕಟ್ಟಬೇಕು. ಅದು ಮಿಸುಗಾಡದಂತೆ ನೋಡಿಕೊಳ್ಳಬೇಕು. ಆಗ ನಾವು ಚಂಚಲಸ್ವಭಾವದಿಂದ ಹೊರಬಂದು ಏಕಾಗ್ರತೆಯ ಆನಂದವನ್ನು ಅನುಭವಿಸಲು ಸಾಧ್ಯ.

ಈ ಮನಸ್ಸೆಂಬ ಮರ್ಕಟನನ್ನು ಕಟ್ಟಿಹಾಕಿದ ಮೇಲೆ ಅದನ್ನು ಓಂಕಾರ ವೃಕ್ಷಕ್ಕೆ ಏರಿಸುವುದನ್ನು ಕಲಿಯಬೇಕು. ಷಣ್ಮುಖಸ್ವಾಮಿಗಳ ಈ ಓಂಕಾರ ವೃಕ್ಷದ ಪರಿಕಲ್ಪನೆ ಮನಸ್ಸಿನಲ್ಲಿ ಸುಂದರ ರೂಪಕವಾಗಿ ನಿಲ್ಲುತ್ತದೆ. ‘‘ಓಂಕಾರವೆಂಬ ಮರಕ್ಕೆ ಷಟ್‌ಕೃತಿಯೆಂಬ ಶಾಖೆ ಪಸರಿಸಿ, ಷಡಕ್ಷರಗಳೆಂಬ ತಳಿರು ಕೊನರಿ, ಷಟ್‌ಸ್ಥಲಗಳೆಂಬ ಕುಸುಮಂಗಳಾಗಿ, ಷಡುಲಿಂಗಗಳೆಂಬ ಮೋಕ್ಷದ ಮಧುರ ಫಲಂಗಳು ತಳೆದಿರ್ಪುದು ನೋಡಾ’’ ಎಂದು ಇನ್ನೊಂದು ವಚನದಲ್ಲಿ ಹೇಳುತ್ತಾರೆ.

ಕಲಬುರ್ಗಿ ಜಿಲ್ಲೆ ಜೇವರ್ಗಿಯ ಷಣ್ಮುಖಸ್ವಾಮಿಗಳು (1630-1711) ಮಲ್ಲಶೆಟ್ಟೆಪ್ಪ - ದೊಡ್ಡಮಾಂಬೆಯ ಮಗ. ಭಕ್ತವರ್ಗದಿಂದ ಬಂದು ಜೇವರ್ಗಿ ವಿರಕ್ತಮಠದ ಸ್ವಾಮಿಗಳಾಗಿದ್ದರು. ಇವರ 717 ವಚನಗಳು ಸಿಕ್ಕಿವೆ. ಅಖಂಡೇಶ್ವರ ಜೋಗುಳಪದ, ಪಂಚಸಂಜ್ಞೆಗಳ ಪದ ಮತ್ತು ನಿರಾಳ ಸದ್ಗುರುಸ್ತೋತ್ರ ಇವು ಅವರ ಇತರ ಕೃತಿಗಳು. ‘‘ಬಸವಾಕ್ಷರವೆಂಬ ಹಡಗನೇರಿ ಬಸವ ಬಸವ ಬಸವಾ ಎಂದು ಭವಸಾಗರ ದಾಟಿದೆ’’ ಎಂದು ಹೇಳುವ ಮೂಲಕ ಅವರು ಬಸವನಿಷ್ಠೆಯನ್ನು ವ್ಯಕ್ತಪಡಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X