ಮೈಸೂರು: ನೀರಿನ ವಿಚಾರಕ್ಕೆ ಗಲಾಟೆ: ವಾಟರ್ ಮ್ಯಾನ್ ಗೆ ಚಾಕುವಿನಿಂದ ಇರಿತ
![ಮೈಸೂರು: ನೀರಿನ ವಿಚಾರಕ್ಕೆ ಗಲಾಟೆ: ವಾಟರ್ ಮ್ಯಾನ್ ಗೆ ಚಾಕುವಿನಿಂದ ಇರಿತ ಮೈಸೂರು: ನೀರಿನ ವಿಚಾರಕ್ಕೆ ಗಲಾಟೆ: ವಾಟರ್ ಮ್ಯಾನ್ ಗೆ ಚಾಕುವಿನಿಂದ ಇರಿತ](https://www.varthabharati.in/sites/default/files/images/articles/2018/02/13/download.jpg)
ಮೈಸೂರು,ಫೆ.13: ನೀರಿನ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ವಾಟರ್ ಮ್ಯಾನ್ ಒಬ್ಬನಿಗೆ ಚಾಕುವಿನಿಂದ ಇರಿದ ಘಟನೆ ಮೈಸೂರು ತಾಲೂಕು ಬೆಲವೆತ್ತ ಗ್ರಾಮದಲ್ಲಿ ನಡೆದಿದೆ.
ವಾಟರ್ ಮ್ಯಾನ್ ಮಂಜುನಾಥ್(35) ಚೂರಿ ಇರಿತಕ್ಕೆ ಒಳಗಾದವನು. ಬೆಲವೆತ್ತ ಗ್ರಾಮದ ಶಿವಕುಮಾರ್ ಹಾಗೂ ವಾಟರ್ ಮ್ಯಾನ್ ಮಂಜುನಾಥ್ ನಡುವೆ ನೀರಿ ವಿಚಾರಕ್ಕೆ ಗಲಾಟೆ ನಡೆದು ವಿಕೋಪಕ್ಕೆ ತಿರುಗಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಶಿವಕುಮಾರ್ ಬಳಿ ಇದ್ದ ಚಾಕುವಿನಿಂದ ಮಂಜುನಾಥ್ಗೆ ಇರಿದಿದ್ದು, ಮಂಜುನಾಥ್ ತೀವ್ರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಈ ಸಂಬಂಧ ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶಿವಕುಮಾರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Next Story