ರಾಜಕೀಯ ಪ್ರವೇಶಿಸಿದ ನಂತರ ಸಿನೆಮಾದತ್ತ ಇಲ್ಲ: ಕಮಲ್ ಹಾಸನ್
ವಾಷಿಂಗ್ಟನ್, ಫೆ.14: ತೀವ್ರ ಹಿಂದುತ್ವ ದೇಶಕ್ಕೆ ಬೆದರಿಕೆಯಾಗಿದೆ.ಇದರ ಕುರಿತು ದೂರುತ್ತ ಕೂರುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ಪ್ರಸಿದ್ಧ ನಟ ಕಮಲ್ ಹಾಸನ್ ಹೇಳಿದರು. ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತನ್ನ ಅಭಿಪ್ರಾಯವನ್ನು ಕಮಲ್ ಹಾಸನ್ ತಿಳಿಸಿದ್ದಾರೆ.
ಮುಂದಕ್ಕೆ ಬಿಡುಗಡೆಗೊಳ್ಳಲಿರುವ ಎರಡು ಸಿನೆಮಾಗಳ ಬಳಿಕ ಸಿನೆಮಾಗಳ ತಾನು ನಟಿಸುವುದಿಲ್ಲ ಎಂದು ಕಮಲ್ ಹೇಳಿದರು. ಸತ್ಯಸಂಧವಾಗಿ ಬದಕಲು ಏನಾದರೂ ಮಾಡಬೇಕಿದೆ. ಅದರಲ್ಲಿ ಸೋಲುಂಡಿಲ್ಲ ಎಂದು ನಾನು ಭಾವಿಸಿದ್ದೇನೆ. ಚುನಾವಣೆಯಲ್ಲಿ ಸೋತ ಬಳಿಕವೂ ನೀವು ರಾಜಕೀಯದಲ್ಲಿ ಮುಂದುವರಿಯುವಿರಾ ಎನ್ನು ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.
ರಾಜಕೀಯಕ್ಕೆ ಹೊಸ ಮುಖವಾಗಿದ್ದರೂ ಕಳೆದ 37ವರ್ಷಗಳಿಂದ ಸಮಾಜ ಸೇವೆ ಮಾಡುತ್ತಿರುವ ಒಬ್ಬ ವ್ಯಕ್ತಿ ತಾನು. ಸುಮಾರು ಹತ್ತು ಲಕ್ಷ ನಂಬಿಕಸ್ಥ ಸದಸ್ಯರನ್ನು ಜೊತೆಸೇರಿಸಲು ತನಗೆ ಸಾಧ್ಯವಾಗಿದೆ. ತನ್ನ ನಿರ್ದೇಶದಂತೆ ಹೆಚ್ಚೆಚ್ಚು ಯುವಕರನ್ನು ಇವರು ತಮ್ಮ ಕೂಟಕ್ಕೆ ಸೇರ್ಪಡೆಗೋಳಿಸುತ್ತಿದ್ದಾರೆ. ಇವರೆಲ್ಲರೂ ಪಾರ್ಟಿಯ ಸ್ವಯಂಸೇವಕರಾಗಿದ್ದಾರೆ ಎಂದು ಕಮಲ್ ತಿಳಿಸಿದರು.
ಸಿನೆಮಾ ಜೀವನದಿಂದ ಬಹಳಷ್ಟು ಹಣ ಸಂಪಾದಿಸಿರುವೆ. ರಾಜಕೀಯ ಪ್ರವೇಶಿಸುತ್ತಿರುವುದು ಹಣಗಳಿಕೆಗೆ ಅಲ್ಲ