ಶುಐಬ್ ಹತ್ಯೆ: ಕಾಂಗ್ರೆಸ್ ನಾಯಕನಿಂದ ಕಲೆಕ್ಟರೇಟ್ ಎದುರು ಉಪವಾಸ ಸತ್ಯಾಗ್ರಹ
ಕಣ್ಣೂರು (ಕೇರಳ), ಫೆ.14: ಯುವ ಕಾಂಗ್ರೆಸ್ ನಾಯಕ ಎಸ್.ವಿ. ಶುಐಬ್ ಹತ್ಯೆಯನ್ನು ಪ್ರತಿಭಟಿಸಿ ಕಾಂಗ್ರೆಸ್ ನಾಯಕ ಸಿಸಿಸಿ ಅಧ್ಯಕ್ಷ ಸತೀಶನ್ ಪಾಚ್ಚೇನಿ ಕೇರಳ ಕಲಕ್ಟರೇಟ್ ಮುಂಭಾಗದಲ್ಲಿ 24 ಗಂಟೆಗಳ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಶುಐಬ್ ಹತ್ಯೆವಿರುದ್ಧ ಯುಡಿಎಫ್ ತೀವ್ರ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದು, ನೈಜ ಆರೋಪಿಗಳನ್ನು ಹಿಡಿಯದೆ ಪೊಲೀಸರು ನಿರ್ಲಕ್ಷ್ಯವೆಸಗುತ್ತಿದ್ದಾರೆ ಎಂದು ಸಿಸಿಸಿ ಅಧ್ಯಕ್ಷ ಸತೀಶ್ ಪಾಚ್ಚೇನಿ ಆರೋಪಿಸಿದ್ದಾರೆ.
ಕೇರಳ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಸಹಿತ ಅನೇಕ ನಾಯಕರು ಇಂದು ಕಣ್ಣೂರಿಗೆ ಆಗಮಿಸುತ್ತಿದ್ದಾರೆ.
Next Story