Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಒಂಟೆ ಹೇಗೆ ಮರುಭೂಮಿಯಲ್ಲಿ ಸುಲಭವಾಗಿ...

ಒಂಟೆ ಹೇಗೆ ಮರುಭೂಮಿಯಲ್ಲಿ ಸುಲಭವಾಗಿ ನಡೆಯುತ್ತದೆ....?

ವಿಸ್ಮಯಕ್ಕೆ ವಿಜ್ಞಾನದ ಉತ್ತರ

ವಾರ್ತಾಭಾರತಿವಾರ್ತಾಭಾರತಿ16 Feb 2018 3:16 PM IST
share
ಒಂಟೆ ಹೇಗೆ ಮರುಭೂಮಿಯಲ್ಲಿ ಸುಲಭವಾಗಿ ನಡೆಯುತ್ತದೆ....?

ಒಂಟೆಯನ್ನು ‘ಮರುಭೂಮಿಯ ಹಡಗು’ ಎಂದೇ ಕರೆಯಲಾಗುತ್ತದೆ. ಅದು ವಿವಿಧ ಕಾರಣಗಳಿಂದಾಗಿ ಅತಿಯಾದ ತಾಪಮಾನದ ಪರಿಸ್ಥಿತಿಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಇದಕ್ಕೆ ಅದರ ಡುಬ್ಬ, ನೀಳ ಕಾಲುಗಳು, ಉದ್ದ ಕೂದಲು ಮತ್ತು ವಿಶೇಷ ಕಣ್ಣುಗುಡ್ಡೆ ಸಹಕಾರಿಯಾಗಿವೆ.

ಒಂಟೆಯ ಡುಬ್ಬವು ಆಹಾರವನ್ನು ಸಂಗ್ರಹಿಸಿಕೊಂಡರೆ, ದೇಹದ ಮೇಲಿರುವ ಉದ್ದನೆಯ ಕೂದಲುಗಳು ಮರುಭೂಮಿಯಲ್ಲಿನ ಚಳಿಯ ರಾತ್ರಿಗಳಲ್ಲಿ ಅದನ್ನು ಬೆಚ್ಚಗಿರಿಸಲು ನೆರವಾಗುತ್ತವೆ.

ಒಂಟೆಯ ನೀಳವಾದ ಕಾಲುಗಳು ಶಕ್ತಿಶಾಲಿಯಾಗಿದ್ದು, ದೂರದೂರದವರೆಗೆ ಭಾರವನ್ನು ಸಾಗಿಸುವುದನ್ನು ಸಾಧ್ಯವಾಗಿಸುವ ಬಲವಾದ ಮಾಂಸಖಂಡಗಳನ್ನು ಹೊಂದಿವೆ. ಮಧ್ಯಮ ವೇಗದಲ್ಲಿ ನಡೆಯುವ ಒಂಟೆಯು ತನ್ನ ಪ್ರತಿಯೊಂದು ಪಾದದಲಿ ಎರಡು ಬೆರಳುಗಳನ್ನು ಹೊಂದಿದೆ. ಪ್ರತಿ ಬೆರಳಿನ ಮುಂದೆ ಉಗುರಿನಂತೆ ಕಾಣುವ ಗೊರಸು ಬೆಳೆದಿರುತ್ತದೆ. ಎರಡು ಬೆರಳುಗಳ ನಡುವೆ ಅವುಗಳನ್ನು ಪರಸ್ಪರ ಸಂಪರ್ಕಿಸುವ ಅಗಲವಾದ ಮೆತ್ತಗಿನ ಪ್ಯಾಡ್‌ನಂತಹ ರಚನೆಯು ಇದ್ದು, ಒಂಟೆಯು ನೆಲದಲ್ಲಿ ನಡೆಯುವಾಗ ಈ ಪ್ಯಾಡ್ ವಿಸ್ತಾರಗೊಳ್ಳುತ್ತದೆ.

ವ್ಯಕ್ತಿಯೋರ್ವ ಹಿಮದಲ್ಲಿ ನಡೆಯುವಾಗ ಹಿಮಬೂಟುಗಳು ಆತನಿಗೆ ಆಧಾರ ನೀಡುವಂತೆ ಈ ಪ್ಯಾಡ್ ಒಂಟೆಯು ಸಡಿಲವಾದ ಮರಳಿನಲ್ಲಿ ನಡೆಯುವಾಗ ಅದಕ್ಕೆ ಆಧಾರವನ್ನು ನೀಡುತ್ತದೆ ಮತ್ತು ಭೂಮಿಯ ಮೇಲೆ ಬಿಗಿಯಾದ ಹಿಡಿತವನ್ನು ಹೊಂದಿರಲು ಅದಕ್ಕೆ ನೆರವಾಗುತ್ತದೆ. ಗೊರಸುಗಳು ಉಬ್ಬುತಗ್ಗುಗಳಿಂದ ಪಾದಗಳಿಗೆ ರಕ್ಷಣೆಯನ್ನು ನೀಡುತ್ತವೆ. ಒಂಟೆಯು ನಡೆಯುವಾಗ ಒಂದು ಬದಿಯ ಎರಡೂ ಕಾಲುಗಳನ್ನು ಏಕಕಾಲಕ್ಕೆ ಮೇಲಕ್ಕೆತ್ತುತ್ತದೆ ಮತ್ತು ಕೆಳಕ್ಕಿಳಿಸುತ್ತದೆ. ಒಂದು ಬದಿಯ ಎರಡು ಕಾಲುಗಳನ್ನು ಮುಂದಕ್ಕೆ ಚಾಚುವಾಗ ಇನ್ನೊಂದು ಬದಿಯ ಎರಡು ಕಾಲುಗಳು ನೆಲದಲ್ಲಿ ಭದ್ರವಾಗಿ ಊರಿರುತ್ತವೆ. ಇದು ಒಂದು ರೀತಿಯ ಓಲಾಟದ ಕ್ರಿಯೆಯನ್ನು ಉಂಟು ಮಾಡುತ್ತದೆ. ಇದರಿಂದಾಗಿ ಒಂಟೆಗೆ ತನ್ನ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಧೂಳಿನಿಂದ ರಕ್ಷಣೆ ಪಡೆದುಕೊಳ್ಳಲು ತನ್ನ ಮೂಗಿನ ಹೊಳ್ಳೆಗಳನ್ನು ಮುಚ್ಚಿಕೊಳ್ಳುವ ಸಾಮರ್ಥ್ಯವನ್ನು ಒಂಟೆಯು ಹೊಂದಿದ್ದು, ಕಣ್ಣುರೆಪ್ಪೆಗಳು ಕಣ್ಣುಗಳಿಗೆ ರಕ್ಷಣೆಯನ್ನು ನೀಡುತ್ತವೆ. ಧೂಳು ಮತ್ತು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಒಂಟೆಯು ಮೂರು ಕಣ್ಣುಗುಡ್ಡೆಗಳು ಮತ್ತು ಕಣ್ಣುರೆಪ್ಪೆಗಳ ಎರಡು ಪದರಗಳನ್ನು ಹೊಂದಿದೆ. ಉದ್ದನೆಯ ರೆಪ್ಪೆಗಳು ಬಲವಾದ ಗಾಳಿ ಬೀಸಿದಾಗ ಮರಳು ಕಣ್ಣುಗಳಿಗೆ ನುಗ್ಗದಂತೆ ರಕ್ಷಣೆ ನೀಡುತ್ತದೆ.

ಒಂದು ವೇಳೆ ಮರಳು ಕಣ್ಣಿನೊಳಗೆ ಸೇರಿಕೊಂಡರೆ ಅದನ್ನು ಹೊರಹಾಕಲು ಮೂರನೇ ಕಣ್ಣುಗುಡ್ಡೆಯನ್ನು ಒಂಟೆಯು ಹೊಂದಿದೆ. ಈ ಹೆಚ್ಚುವರಿ ಕಣ್ಣುಗುಡ್ಡೆಯು ಒಂದು ಬದಿಯಿಂದ ಇನ್ನೊಂದು ಬದಿಗೆ ಸರಿದಾಡುತ್ತ ಮರಳನ್ನು ಹೊರಗೆ ಹಾಕುತ್ತದೆ. ಕಣ್ಣುಗುಡ್ಡೆಗಳು ತುಂಬ ತೆಳುವಾಗಿರುವುದರಿಂದ ಅದರ ಮೂಲಕ ನೋಡಲು ಒಂಟೆಗೆ ಸಾಧ್ಯವಾಗುತ್ತದೆ. ಹೀಗಾಗಿ ಅದು ತನ್ನ ಕಣ್ಣುಗಳನ್ನು ಮುಚ್ಚಿಕೊಂಡೇ ಮರಳು ಗಾಳಿಯಲ್ಲಿ ಮುಂದಕ್ಕೆ ಸಾಗಬಲ್ಲುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X