Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಜನ ಗಣ ಮನ: ಜನ ಮನಕ್ಕೊಬ್ಬಳೇ ಅಧಿನಾಯಕಿ!

ಜನ ಗಣ ಮನ: ಜನ ಮನಕ್ಕೊಬ್ಬಳೇ ಅಧಿನಾಯಕಿ!

ಚಿತ್ರ ವಿಮರ್ಶೆ

ಶಶಿಕರ ಪಾತೂರುಶಶಿಕರ ಪಾತೂರು18 Feb 2018 12:05 AM IST
share
ಜನ ಗಣ ಮನ: ಜನ ಮನಕ್ಕೊಬ್ಬಳೇ ಅಧಿನಾಯಕಿ!

ಮತ್ತೊಂದು ಆ್ಯಕ್ಷನ್ ಚಿತ್ರದ ಮೂಲಕ ವಾಪಸಾಗಿದ್ದಾರೆ ಆಯಿಷಾ ಹಬೀಬ್. ಈ ಬಾರಿ ಅವರಿಗೆ ಆ್ಯಕ್ಷನ್ ಕಟ್ ಹೇಳಿರುವುದು ನವ ನಿರ್ದೇಶಕ ಶಶಿಕಾಂತ್ ಆನೇಕಲ್. ಹಾಗಂತ ಚಿತ್ರದಲ್ಲಿ ಯಾವುದೇ ಹೊಸತನ ನಿರೀಕ್ಷಿಸುವಂತಿಲ್ಲ.

 ಕತೆಯ ಆರಂಭದಲ್ಲೇ ಹಣಕ್ಕಾಗಿ ಒಂದು ಕುಟುಂಬವನ್ನೇ ನಾಶಮಾಡಬಲ್ಲ ಕ್ರೂರಿ ನೀಲಕಂಠನ ಪರಿಚಯ ಮಾಡಲಾಗುತ್ತದೆ. ಆತನ ಅನಾಚಾರಗಳ ಬಗ್ಗೆ ತಿಳಿದಿದ್ದರೂ ಸಾಕ್ಷ್ಯಗಳ ಕೊರತೆಯಿಂದ ಪೊಲೀಸರು ಕ್ರಮಕೈಗೊಳ್ಳಲು ಸಾಧ್ಯವಾಗಿರುವುದಿಲ್ಲ. ಮಾತ್ರವಲ್ಲ, ಆತನ ವಿರುದ್ಧ ಕಾರ್ಯಾಚರಣೆ ನಡೆಸುವುದಕ್ಕೂ ಪೊಲೀಸರು ಭಯಪಡುತ್ತಿರುತ್ತಾರೆ. ಇಂಥ ಸಂದರ್ಭದಲ್ಲಿ ಹೊಸದಾಗಿ ಬಂದು ಅದೇ ಹಳೆಯ ರೀತಿಯಲ್ಲಿ ಅಧಿಕಾರ ಸ್ವೀಕರಿಸುವವರೇ ಕಥಾ ನಾಯಕಿ ಝಾನ್ಸಿ ಐಪಿಎಸ್.

ಶ್ರೀನಿವಾಸ ಮೂರ್ತಿ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳ ಸಾವಿನ ಕುರಿತಾದ ಸಂದೇಹಗಳಿಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದ ತನಿಖೆಯನ್ನು ಮೊದಲು ಝಾನ್ಸಿ ಕೈಗೆತ್ತಿಕೊಳ್ಳುತ್ತಾಳೆ. ತನಿಖೆಯ ಪ್ರಕಾರ ಶ್ರೀನಿವಾಸ ಮೂರ್ತಿಯ ಹಿರಿಯ ಮಗಳು ಐಶ್ವರ್ಯಾಳನ್ನು ನೀಲಕಂಠನ ಪುತ್ರ ವಿಕ್ಕಿ ಯಾನೇ ವಿಕಾಸ್ ವಿವಾಹವಾಗಿರುತ್ತಾನೆ. ಆರಂಭದಲ್ಲಿ ಆತ ಐಶ್ವರ್ಯಾಳನ್ನು ಪ್ರೀತಿ ಯಿಂದಲೇ ನೋಡಿಕೊಳ್ಳುತ್ತಾನೆ. ಆದರೆ ಆತ ಶ್ರೀನಿವಾಸಮೂರ್ತಿಯ ಅಪಾರವಾದ ಆಸ್ತಿಗಾಗಿ ಈ ವಿವಾಹಕ್ಕೆ ಮುಂದಾಗಿರುತ್ತಾನೆ ಎಂದು ಆಮೇಲೆ ಅರಿವಾಗುತ್ತದೆ. ಆದರೆ ಎರಡನೇ ಪುತ್ರಿಯನ್ನು ವಿವಾಹವಾದರೆ ಮಾತ್ರ ಪೂರ್ತಿ ಆಸ್ತಿ ಕೈ ಸೇರುತ್ತದೆ ಎಂಬ ಸತ್ಯ ಅವರಿಗೆ ಅರಿವಾದಾಗ ಅದಕ್ಕೂ ಯೋಜನೆ ಹಾಕುತ್ತಾರೆ. ಇದರ ನಡುವೆ ಯಾರೆಲ್ಲ ಕೊಲೆಯಾಗುತ್ತಾರೆ? ಯಾರೆಲ್ಲ ನಾಪತ್ತೆಯಾಗುತ್ತಾರೆ? ಅವರನ್ನು ಝಾನ್ಸಿ ಪತ್ತೆ ಹಚ್ಚುವ ರೀತಿ ಯಾವುದು ಎಂದು ತಿಳಿಯಬೇಕಾದರೆ ನೀವು ಸಿನೆಮಾ ನೋಡಬೇಕು.

ಝಾನ್ಸಿಯ ವೃತ್ತಿ ಬದುಕನ್ನು ಬಿಟ್ಟರೆ ವೈಯಕ್ತಿಕ ಬದುಕನ್ನು ಕೂಡ ಸ್ವಲ್ಪಮಟ್ಟಿಗೆ ತೆರೆದಿರಿಸಲಾಗಿದೆ. ಝಾನ್ಸಿಯ ತಂದೆ ಮೇಜರ್ ಸುರೇಂದ್ರನಾಥ್. ಆಕೆಯ ನಿಶ್ಚಿತಾರ್ಥ ಕಾರ್ತಿಕ್‌ನೊಂದಿಗೆ ನಡೆದಿರುತ್ತದೆ. ವೃತ್ತಿಯಲ್ಲಿ ಗಂಭೀರವಾಗಿರುವ ಝಾನ್ಸಿ, ರಾತ್ರಿಯಾಗುತ್ತಲೇ ಭಾವೀ ಪತಿಯೊಂದಿಗೆ ಫೋನಲ್ಲಿ ಚೆಲ್ಲುಚೆಲ್ಲಾಗಿ ಮಾತನಾಡುತ್ತಾಳೆ! ಪೂರ್ತಿ ಚಿತ್ರ ಝಾನ್ಸಿ ಪಾತ್ರ ನಿರ್ವಹಿಸಿರುವ ಆಯಿಷಾ ಹೆಗಲಲ್ಲಿದೆ. ಆ್ಯಕ್ಷನ್ ಪಾತ್ರ ಮಾಡುವ ನಾಯಕಿಯರು ಅಪರೂಪವಾಗಿರುವಾಗ ನಟನೆ, ಸೌಂದರ್ಯ ಮತ್ತು ಆ್ಯಕ್ಷನ್ ಮೂಲಕ ಆಯಿಷಾ ಅಚ್ಚರಿ ಮೂಡಿಸುತ್ತಾರೆ.

ಲೇಡಿ ಬ್ರೂಸ್ಲಿ ಎಂಬ ತಮಗಿರುವ ಬಿರುದಿಗೆ ತಕ್ಕಂತೆ ತಮ್ಮ ಕಾಲನ್ನು ನೂರಿಪ್ಪತ್ತು ಡಿಗ್ರಿಗೆ ವಿಸ್ತರಿಸಿ ಹೊಡೆದಾಟ, ಸಾಹಸ ಸನ್ನಿವೇಶಗಳಲ್ಲಿ ಕಾಣಿಸಿದ್ದಾರೆ.ಝಾನ್ಸಿಯೊಂದಿಗೆ ನಿಶ್ಚಿತಾರ್ಥಗೊಂಡ ಹುಡುಗನಾಗಿ ನಟಿಸಿರುವ ನಿರಂಜನ್ ಕಂಠ, ಮ್ಯಾನರಿಸಂಗಳಲ್ಲಿ ಸುದೀಪ್‌ರನ್ನು ನೆನಪಿಸುತ್ತಾರೆ. ಆದರೆ ಝಾನ್ಸಿಯ ಬಳಿಕ ಚಿತ್ರವನ್ನು ಆವರಿಸಿ ನಿಲ್ಲುವುದು ರವಿಕಾಳೆ ನಿರ್ವಹಿಸಿರುವಂಥ ನೀಲಕಂಠ ಎಂಬ ಖಳನ ಪಾತ್ರ. ಶ್ರೀನಿವಾಸ ಮೂರ್ತಿಯಾಗಿ ರಾಮಕೃಷ್ಣ ಮತ್ತು ಐಶ್ವರ್ಯಾ ಪಾತ್ರ ಮಾಡಿದಂಥ ಹುಡುಗಿ ಗಮನ ಸೆಳೆಯುತ್ತಾರೆ. ಉಳಿದಂತೆ ಚಿತ್ರದಲ್ಲಿ ಹಾಸ್ಯಕ್ಕಾಗಿ, ಮುಖ್ಯ ಕತೆಗಿಂತ ಸಪರೇಟಾಗಿರುವ ಟ್ರ್ಯಾಕ್ ಬಳಸಲಾಗಿದೆ. ಮಧ್ಯಂತರದ ಬಳಿಕ ತುರುಕಲಾಗಿರುವ ಅನಗತ್ಯ ಐಟಂ ಸಾಂಗ್ ಮತ್ತು ಹಾಸ್ಯದೃಶ್ಯಗಳನ್ನು ಕೂಡ ಎಂಜಾಯ್ ಮಾಡುವಂಥ ಕನ್ನಡ ಪ್ರೇಕ್ಷಕರು ಇನ್ನೂ ಇದ್ದರೆ ವಿಪರ್ಯಾಸ ಎಂದೇ ಹೇಳಬೇಕು.

‘ಜನ ಗಣ ಮನ’ ಎನ್ನುವುದು ಚಿತ್ರದ ಹೆಸರು. ಚಿತ್ರದಲ್ಲೊಂದು ಕಡೆ ರಾಷ್ಟ್ರಗೀತೆ ಪ್ರದರ್ಶನಗೊಳ್ಳುತ್ತದೆ ಎನ್ನುವುದನ್ನು ಹೊರತುಪಡಿಸಿ ಚಿತ್ರಕ್ಕೂ ಆ ಹೆಸರಿಗೂ ಬೇರೆ ಸಂಬಂಧ ಕಾಣಿಸುವುದಿಲ್ಲ. ಆದರೆ ‘‘ರಾಷ್ಟ್ರಗೀತೆಗೆ ಹೇಗೆ ಎಲ್ಲ ಭಾರತೀಯರು ಒಂದಾಗಿ ಗೌರವ ನೀಡುತ್ತಾರೆಯೋ, ಅದೇ ರೀತಿ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿಯೂ ಎಲ್ಲರೂ ಒಂದಾಗಿ ಪಾಲ್ಗೊಳ್ಳಬೇಕು’’ ಎಂಬ ಸಂಭಾಷಣೆಯನ್ನು ಝಾನ್ಸಿಯ ಮೂಲಕ ಹೇಳಿಸಿರುವ ನಿರ್ದೇಶಕರು ಸಂದೇಹಗಳಿಗೆ ತಾರ್ಕಿಕ ಅಂತ್ಯ ನೀಡಿ ಬುದ್ಧಿವಂತರಾಗಿದ್ದಾರೆ. ಆದರೆ ನಮ್ಮ ಪ್ರೇಕ್ಷಕರು ಕೂಡ ಬುದ್ಧಿವಂತರೇ ಎನ್ನುವುದನ್ನು ಯಾವ ನಿರ್ದೇಶಕರು ಕೂಡ ಮರೆಯಬಾರದು.

ತಾರಾಗಣ: ಆಯಿಷಾ, ರವಿಕಾಳೆ
ನಿರ್ದೇಶಕ: ಶಶಿಕಾಂತ್ ಆನೇಕಲ್
ನಿರ್ಮಾಪಕ: ಪಿ ಸಾಂಬಶಿವ ರೆಡ್ಡಿ

share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X