ಸಿಎ ಸಂಸ್ಥೆ ಉಡುಪಿ ಶಾಖಾಧ್ಯಕ್ಷರಾಗಿ ಸುರೇಂದ್ರ ನಾಯಕ್

ಉಡುಪಿ, ಫೆ.21: ಅಖಿಲ ಭಾರತ ಲೆಕ್ಕ ಪರಿಶೋಧಕರ ಸಂಸ್ಥೆಯಾದ ದಿ ಇನ್ಸ್ಟಿಟ್ಯೂಟ್ ಆಪ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಉಡುಪಿ ಶಾಖೆಯ 2018-19ನೆ ಸಾಲಿನ ಅಧ್ಯಕ್ಷರಾಗಿ ಉಡುಪಿಯ ಲೆಕ್ಕಪರಿ ಶೋಧಕ ಕೆ.ಸುರೇಂದ್ರ ನಾಯಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಸಿಎ ನರಸಿಂಹ ನಾಯಕ್, ಕಾರ್ಯದರ್ಶಿಯಾಗಿ ಸಿಎ ಮಹೀಂದ್ರ ಶೆಣೈ ಪಿ., ಕೋಶಾಧಿಕಾರಿಯಾಗಿ ಸಿಎ ಪ್ರದೀಪ್ ಜೋಗಿ, ದಕ್ಷಿಣ ಭಾರತದ ವಿದ್ಯಾರ್ಥಿ ಸಂಘ ಉಡುಪಿ ಶಾಖೆಯ ಅಧ್ಯಕ್ಷರಾಗಿ ಸಿಎ ಗಿರೀಶ್ ಪೈ, ಸದಸ್ಯರಾಗಿ ಸಿಎ ಕೃಷ್ಣರಾಯ ಶಾನಭೊಗ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





