ಮೈಸೂರಿನ ಹಲವೆಡೆ ಕೇಳಿಸಿದ ನಿಗೂಢ ಶಬ್ಧ !
ಜನರಲ್ಲಿ ಆತಂಕ
![ಮೈಸೂರಿನ ಹಲವೆಡೆ ಕೇಳಿಸಿದ ನಿಗೂಢ ಶಬ್ಧ ! ಮೈಸೂರಿನ ಹಲವೆಡೆ ಕೇಳಿಸಿದ ನಿಗೂಢ ಶಬ್ಧ !](https://www.varthabharati.in/sites/default/files/images/articles/2018/02/22/mysore.jpg)
ಮೈಸೂರು,ಫೆ.22: ನಗರದ ಕುವೆಂಪುನಗರ ಸುತ್ತ ಮುತ್ತ ಭಾರಿ ಶಬ್ಧ ಕೇಳಿ ಬಂದಿದ್ದು, ಭೀತಿಗೊಳಗಾದ ಜನರು ಭೂಕಂಪವೆಂದು ಮನೆಯಿಂದ ಹೊರಬಂದ ಘಟನೆ ನಡೆದಿದೆ.
ನಗರದ ಕುವೆಂಪುನಗರ ಎಂ.ಬ್ಲಾಕ್ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಮಧ್ಯಾಹ್ನ ಭಾರಿ ಶಬ್ಧ ಕೇಳಿಸಿದ್ದು ಇದರಿಂದ ಭಯಭೀತರಾದ ಜನರು ಭೂಕಂಪವೆಂದು ತಿಳಿದು ಮನೆಯಿಂದ ಹೊರ ಬಂದಿದ್ದಾರೆ.
ಸ್ಥಳಕ್ಕೆ ಪೊಲೀಸರು ಹಾಗೂ ಗಣಿ ಮತ್ತು ಭೂ ವಿಜ್ಞಾನದ ಅಧಿಕಾರಿಗಳು ಆಗಮಿಸಿದ್ದು ಇದು ಭೂಕಂಪವಲ್ಲ, ಯಾರೋ ಕಲ್ಲನ್ನು ಸಿಡಿಸಲು ಸಿಡಿಮದ್ದು ಸಿಡಿಸಿರಬಹುದು. ಜೊತೆಗೆ ಇನ್ನಿತರ ಶಬ್ಧ ಇರಬಹುದೆಂದು ಅಭಿಪ್ರಾಯಪಟ್ಟಿದ್ದು ಶೋಧ ಮುಂದುವರೆಸಿದ್ದಾರೆ.
Next Story