Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಅತ್ಯಂತ ಹಳೆಯ ಗುಹಾಕಲೆ ಬಿಡಿಸಿದ್ದು...

ಅತ್ಯಂತ ಹಳೆಯ ಗುಹಾಕಲೆ ಬಿಡಿಸಿದ್ದು ಆಧುನಿಕ ಮಾನವರಲ್ಲ!

ಈ ಚಿತ್ರಗಳನ್ನು ರಚಿಸಿದ್ದು ಯಾರು ಗೊತ್ತಾ?

ವಾರ್ತಾಭಾರತಿವಾರ್ತಾಭಾರತಿ23 Feb 2018 9:16 PM IST
share
ಅತ್ಯಂತ ಹಳೆಯ ಗುಹಾಕಲೆ ಬಿಡಿಸಿದ್ದು ಆಧುನಿಕ ಮಾನವರಲ್ಲ!

  ಲಂಡನ್, ಫೆ. 23: ಜಗತ್ತಿನ ಅತ್ಯಂತ ಹಳೆಯ ಗುಹೆ ಚಿತ್ರಗಳನ್ನು ಬಿಡಿಸಿದ್ದು ನಿಯಾಂಡರ್‌ತಾಲ್ ಮಾನವರು, ಆಧುನಿಕ ಮಾನವರಲ್ಲ. ಈಗ ನಾಶವಾಗಿರುವ ನಮ್ಮ ಸೋದರ ಸಂಬಂಧಿಗಳು (ನಿಯಾಂಡರ್‌ತಾಲ್‌ಗಳು) ಈ ಹಿಂದೆ ಭಾವಿಸಲಾಗಿರುವಂತೆ ಸಂಸ್ಕೃತಿಹೀನರಾಗಿರಲಿಲ್ಲ ಎಂಬುದನ್ನು ಅಧ್ಯಯನವೊಂದು ಕಂಡುಕೊಂಡಿದೆ.

ಸ್ಪೇನ್‌ನ ಮೂರು ಗುಹೆಗಳಲ್ಲಿ ಪತ್ತೆಯಾಗಿರುವ ಚಿತ್ರಗಳ ವೈಜ್ಞಾನಿಕ ವಿಶ್ಲೇಷಣೆಯು, ಈ ಚಿತ್ರಗಳನ್ನು 64,000 ವರ್ಷಗಳ ಹಿಂದೆ ಬಿಡಿಸಲಾಗಿದೆ ಎಂದು ತಿಳಿಸುತ್ತದೆ. ಅಂದರೆ, ಆಧುನಿಕ ಮಾನವರು ಯುರೋಪ್‌ಗೆ ಬರುವ 20,000 ವರ್ಷಗಳ ಮೊದಲೇ ಈ ಚಿತ್ರಗಳನ್ನು ರಚಿಸಲಾಗಿತ್ತು.

ಈ ಅಧ್ಯಯನವು ‘ಸಯನ್ಸ್’ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.

‘‘ಇದೊಂದು ನಂಬಲಸಾಧ್ಯ ರೋಮಾಂಚಕಾರಿ ಸಂಶೋಧನೆಯಾಗಿದೆ. ನಿಯಾಂಡರ್‌ತಾಲ್ ಮಾನವರು ಈಗ ಭಾವಿಸಲಾಗಿರುವುದಕ್ಕಿಂತ ತುಂಬಾ ಸುಸಂಸ್ಕೃತರಾಗಿದ್ದರು ಎನ್ನುವುದನ್ನು ಇದು ತೋರಿಸುತ್ತದೆ’’ ಎಂದು ಬ್ರಿಟನ್‌ನ ಸೌತಾಂಪ್ಟನ್ ವಿಶ್ವವಿದ್ಯಾನಿಲಯ ಪ್ರಾಚ್ಯಶಾಸ್ತ್ರಜ್ಞ ಕ್ರಿಸ್ ಸ್ಟಾಂಡಿಶ್ ಹೇಳುತ್ತಾರೆ.

 ‘‘ನಾವು ಪತ್ತೆಹಚ್ಚಿರುವ ಚಿತ್ರಗಳು ಜಗತ್ತಿನ ಅತ್ಯಂತ ಹಳೆಯ ಗಮನಕ್ಕೆ ಬಂದಿರುವ ಚಿತ್ರಗಳು ಎಂಬುದಾಗಿ ನಮ್ಮ ವಿಶ್ಲೇಷಣೆಗಳು ಹೇಳುತ್ತವೆ. ಆಧುನಿಕ ಮಾನವರು ಆಫ್ರಿಕದಿಂದ ಯುರೋಪ್‌ಗೆ ಬರುವ ಕನಿಷ್ಠ 20,000 ವರ್ಷಗಳ ಹಿಂದೆ ಅವುಗಳನ್ನು ರಚಿಸಲಾಗಿದೆ. ಹಾಗಾಗಿ, ಅವುಗಳನ್ನು ನಿಯಾಂಡರ್‌ತಾಲ್‌ಗಳೇ ರಚಿಸಿರಬೇಕು’’ ಎಂದು ಸ್ಟಾಂಡಿಶ್ ಹೇಳಿದ್ದಾರೆ.

ಇದರ ಪ್ರಕಾರ, ಪ್ರಾಣಿಗಳ ಚಿತ್ರಗಳು, ಬಿಂದುಗಳು ಮತ್ತು ರೇಖಾಗಣಿತದ ಚಿಹ್ನೆಗಳು ಸೇರಿದಂತೆ ಹಿಮಯುಗದ ಗುಹಾ ಕಲೆಯನ್ನೂ ನಿಯಾಂಡರ್‌ತಾಲ್‌ಗಳೇ ರಚಿಸಿರಬೇಕು.

ನಿಯಾಂಡರ್‌ತಾಲ್‌ಗಳು ಹೋಮೊ ಸೆಪಿಯನ್ (ಆಧುನಿಕ ಮಾನವರ)ರ ಸೋದರ ಸಂಬಂಧಿಗಳಾಗಿದ್ದಾರೆ. ಆ ಸಮಯದಲ್ಲಿ ಯುರೋಪ್‌ನಲ್ಲಿ ಇದ್ದ ಏಕೈಕ ಮಾನವ ತಳಿ ನಿಯಾಂಡರ್‌ತಾಲ್‌ಗಳಾಗಿದ್ದರು.

ಕಾಲ ನಿರ್ಣಯಕ್ಕೆ ಆಧುನಿಕ ಪರೀಕ್ಷೆ

ಈ ಗುಹಾಚಿತ್ರಗಳ ಕಾಲವನ್ನು ನಿರ್ಣಯಿಸಲು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ‘ಯುರೇನಿಯಂ-ತೋರಿಯಂ ಡೇಟಿಂಗ್’ ಎಂಬ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿತ್ತು.

ಈವರೆಗೆ, ಗುಹಾಚಿತ್ರಗಳನ್ನು ಬಿಡಿಸಿದ್ದು ಆಧುನಿಕ ಮಾನವರೇ ಎಂಬುದಾಗಿ ತಿಳಿಯಲಾಗಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X