ಆದಿವಾಸಿ ಯುವಕನ ಹತ್ಯೆ ಪ್ರಕರಣ: ತನಿಖೆಗೆ ವಿಶೇಷ ತಂಡ ರಚನೆ
ತಿರುವನಂತಪುರಂ, ಫೆ.24: ಕಳ್ಳತನ ಎಸಗಿದ ಶಂಕೆಯಲ್ಲಿ ಅಟ್ಟಪ್ಪಾಡಿಯಲ್ಲಿ ಆದಿವಾಸಿ ಯುವಕನನ್ನು ಥಳಿಸಿ ಹತ್ಯೆಗೈದ ಪ್ರಕರಣದಲ್ಲಿ ತನಿಖೆಗೆ ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಕೇರಳ ಡಿಜಿಪಿ ಲೋಕನಾಥ್ ಬೆಹ್ರ ತಿಳಿಸಿದ್ದಾರೆ. ತೃಶೂರ್ ರೇಂಜ್ ಐಜಿಗೆ ಈ ಕುರಿತು ನಿರ್ದೇಶ ನ ನೀಡಲಾಗಿದ್ದು ಪಾಲಕ್ಕಾಡ್ ಎಸ್ಪಿಯ ನೇತೃತ್ವದಲ್ಲಿ ಅಗಳಿ ಡಿವೈಎಸ್ಪಿ ಟಿ.ಕೆ.ಸುಬ್ರಹ್ಮಣಿಯನ್ ತನಿಖಾಧಿಕಾರಿಯಾಗಿ ವಿಶೇಷ ತನಿಖೆ ತಂಡ ರಚನೆಗೊಂಡಿದೆ. ಐಜಿ ತನಿಖೆಯ ಮೇಲುಸ್ತುವಾರಿ ವಹಿಸಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಡಿಜಿಪಿ ಹೇಳಿದರು.
ಘಟನೆಯಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನು ಕಾನೂನಿನ ಮುಂದೆ ತರಲಾಗುವುದು ಎಂದು ತಿಳಿಸಿದರು.
Next Story