ರೈತರೊಂದಿಗೆ ರಾಹುಲ್ ಗಾಂಧಿ ಸಂವಾದ
![ರೈತರೊಂದಿಗೆ ರಾಹುಲ್ ಗಾಂಧಿ ಸಂವಾದ ರೈತರೊಂದಿಗೆ ರಾಹುಲ್ ಗಾಂಧಿ ಸಂವಾದ](https://www.varthabharati.in/sites/default/files/images/articles/2018/02/26/rahul3.gif)
ಬೆಳಗಾವಿ, ಫೆ.26: ರಾಮದುರ್ಗ ತಾಲೂಕಿನ ಸಿನಾಡಿ ಗ್ರಾಮದ ಭೀಮಯ್ಯ ಹಾಗೂ ರಾಮಕ್ಕ ಎಂಬ ರೈತ ಮನೆಗೆ ಭೇಟಿ ನೀಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರೈತ ಕುಟುಂಬದ ಕಷ್ಟಗಳ ಕುರಿತು ಸಂವಾದ ನಡೆಸಿದರು.
ರಾಮಕ್ಕನ ಹೆಸರಿನಲ್ಲಿ ಒಂಬತ್ತು ಲಕ್ಷ ಹಾಗೂ ಭೀಮಯ್ಯನ ಹೆಸರಿನಲ್ಲಿ ಎರಡೂವರೆ ಲಕ್ಷ ರೂ. ಸಾಲವಿದ್ದು, ಇದನ್ನು ಮನ್ನಾ ಮಾಡಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅಡಿಯಲ್ಲಿ ಕೆಲಸ, ಕೂಲಿ ಇನ್ನಿತರ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
Next Story