ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರು ಹಾಗೂ ಸಂಸ್ಥೆರಿಗೆ ಸನ್ಮಾನ
ಮಂಗಳೂರು, ಫೆ.26: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜರಗಲಿರುವ 22ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರೊ. ಅಭಯ ಕುಮಾರ್ (ಜಾನಪದ ವಿದ್ವಾಂಸರು), ಜಾಕೆ ಮಾಧವ ಗೌಡ (ಸಹಕಾರ ಮತ್ತು ಸಮಾಜ ಸೇವೆ), ಪ್ರೊ. ಎ.ವಿ. ನಾರಾಯಣ, ಪುತ್ತೂರು (ಶಿಕ್ಷಣ, ಸಂಘಟನೆ), ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಪುತ್ತೂರು (ಸಾಹಿತ್ಯ), ಎ. ಕೃಷ್ಣಪ್ಪಪೂಜಾರಿ ಬೆಳ್ತಂಗಡಿ (ಶಿಕ್ಷಣ), ಇ.ಎಸ್. ಗಫೂರ್ ವಿಟ್ಲ (ಪುಸ್ತಕ ಪರಿಚಾರಿಕೆ), ಜಯಲಕ್ಷ್ಮೀ ವಳಲಂಬೆ (ಮೂಲಿಕ ವೈದ್ಯೆ), ಮಹಾಬಲ ಕಲ್ಮಡ್ಕ (ಪ್ರಸಾಧನ ಮುಖವರ್ಣಿಕೆ), ಪುತ್ತೂರು ವಿಶ್ವನಾಥ ನಾಯಕ್ (ಮೃದಂಗ ವಾದನ), ಶಿವರಾಮ ಏನೆಕಲ್ ಬಿಳಿನೆಲೆ (ಕ್ರೀಡೆ), ಜೆ.ಕೆ. ವಸಂತ ಸುಳ್ಯ, ನಿವೃತ್ತ ಸೇನಾಧಿಕಾರಿ (ವಾಯು ಸೇನೆ ), ದೇಜಪ್ಪಸರಪಾಡಿ ಬಂಟ್ವಾಳ (ಜನಪದ), ನರೇಂದ್ರ ಕುಮಾರ್ ಧರ್ಮಸ್ಥಳ (ಯಕ್ಷಗಾನ), ಸುಜನಾ ಸುಳ್ಯ,(ಹಿರಿಯ ಯಕ್ಷಗಾನ ಕಲಾದರು), ವಿಘ್ನರಾಜ ಕನ್ಯಾಡಿ, ಬೆಳ್ತಂಗಡಿ (ಹಸ್ತಪ್ರತಿ ನಿರ್ವಹಣೆ), ಗೋಪಾಲಕೃಷ್ಣ ಪ್ರಭು, ಸುರತ್ಕಲ್ (ಜನಪದ ಕಂಬಳ), ಮೂರ್ತಿ ದೇರಾಜೆ ವಿಟ್ಲ (ರಂಗಭೂಮಿ), ಅಲಂಗಾರು ಈಶ್ವರ ಭಟ್ ಮೂಡುಬಿದಿರೆ (ಧಾರ್ಮಿಕ ಕ್ಷೇತ್ರ), ಡಾ. ಸುರೇಶ್ ರಾವ್ ಮುಂಬೈ (ಹೊರನಾಡ ಕನ್ನಡ ಸೇವೆ), ಪಿ.ಬಿ. ಹರೀಶ್ ರೈ (ಪತ್ರಿಕೋದ್ಯಮ), ಮಂಜುಳಾ ಸುಬ್ರಹ್ಮಣ್ಯ (ನೃತ್ಯ), ಎಂ. ಮೀನಾಕ್ಷಿ ಗೌಡ (ಸಾಹಿತ್ಯ ಸಂಘಟನೆ), ವಿಜಯಪ್ರಕಾಶ್ ಮೋಂಟಡ್ಕ (ರಂಗಭೂಮಿ), ಪ್ರಸಾದ್ ಮುನಿಯಂಗಳ (ವಾಸ್ತು), ಅನಂತ ಅಂಗಣ(ಕೃಷಿ), ಕೆ. ತನಿಯಪ್ಪಕೋಡಿಕಜೆ (ಜಾನಪದ), ಕುಂಬ್ಳೆ ಶ್ರೀಧರ್ ರಾವ್ (ಯಕ್ಷಗಾನ), ಮೈರ್ಪಾಡಿ ಶಂಕರನಾರಾಯಣ ಪಣಂಬೂರು (ಯಕ್ಷಗಾನ), ಪಡ್ಡಂಬೈಲು ವೆಂಕಟರಮಣ ಗೌಡ (ಸಮಾಜ ಸೇವೆ), ಎನ್.ಎಎಂ. ಇಸ್ಮಾಯೀಲ್ ಬೆಂಗಳೂರು (ಪತ್ರಿಕೋದ್ಯಮ), ಎಂ. ಪುರುಷೋತ್ತಮ ಗೌಡ ಮಾಣಿಬೆಟ್ಟು (ಸಮಾಜ ಸೇವೆ), ಪಿ.ಎಸ್. ಕಾರಂತ, ವಾಪಿ ಗುಜರಾತ್ (ಹೊರನಾಡ ಕನ್ನಡ ಸೇವೆ) ಬಿ. ಬಾಲಚಂದ್ರ ರಾವ್ ನಮುಂಬು (ಹೊರನಾಡ ಕನ್ನಡ ಸೇವೆ) ಅವರನ್ನು ಸನ್ಮಾನಿಸಲಾಗುವುದು.
ಅದಲ್ಲದೆ ಅಬ್ಬಕ್ಕ ರಾಣಿ ತುಳು ಅಧ್ಯಯನ ಕೇಂದ್ರ (ರಿ) ಬಂಟ್ವಾಳ, ರಂಗಕರ್ಮಿ ಬಿ.ವಿ. ಕಾರಂತ ರಂಗ ಭೂಮಿಕ ಟ್ರಸ್ಟ್ (ರಿ) ಮಂಚಿ, ಸುಬ್ರಹ್ಮಣ್ಯ ಸಭಾ ಸದನ (ರಿ) ಮಂಗಳೂರು, ಕೊಡಿಯಾಲ ಖಬರ ಕೊಂಕಣಿ ಪತ್ರಿಕೆ ಮಂಗಳೂರು, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಮೂಡುಬಿದಿರೆ ಈ ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





