ತ್ರಿಕೋನ ಟ್ವೆಂಟಿ-20 ಸರಣಿ: ಮ್ಯಾಥ್ಯೂಸ್ ಅಲಭ್ಯ

ಕೊಲಂಬೊ, ಫೆ.27: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆ್ಯಂಜೆಲೊ ಮ್ಯಾಥ್ಯೂಸ್ ಸ್ವದೇಶದಲ್ಲಿ ನಡೆಯಲಿರುವ ನಿದಾಹಸ್ ಟ್ರೋಫಿ ಟ್ವೆಂಟಿ-20 ಟೂರ್ನಮೆಂಟ್ನಿಂದ ಹೊರಗುಳಿದಿದ್ದಾರೆ.
ಜನವರಿಯಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಏಕದಿನ ಹಾಗೂ ಟ್ವೆಂಟಿ-20 ನಾಯಕನಾಗಿ ಆಯ್ಕೆಯಾದ ಬಳಿಕ ಮ್ಯಾಥ್ಯೂಸ್ ಕೇವಲ 1 ಪಂದ್ಯ ಆಡಿದ್ದಾರೆ. ಮ್ಯಾಥ್ಯೂಸ್ ಮುಂದಿನ ವಾರ ಆರಂಭವಾಗಲಿರುವ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಭಾಗವಹಿಸುತ್ತಿರುವ ತ್ರಿಕೋನ ಸರಣಿಯಿಂದ ದೂರ ಉಳಿಯಲಿದ್ದಾರೆ.
ಮ್ಯಾಥ್ಯೂಸ್ ಅನುಪಸ್ಥಿತಿಯಲ್ಲಿ ಟೆಸ್ಟ್ ನಾಯಕ ದಿನೇಶ್ ಚಾಂಡಿಮಾಲ್ ತ್ರಿಕೋನ ಸರಣಿಯಲ್ಲಿ ತಂಡವನ್ನು ಮುನ್ನಡೆಸುವ ನಿರೀಕ್ಷೆಯಿದೆ ಎಂದು ಇಎಸ್ಪಿಎನ್ ವರದಿ ಮಾಡಿದೆ.
Next Story





