ಮಂಡ್ಯ: ನದಿಯಲ್ಲಿ ಮುಳುಗಿ ಬಿಎಂಟಿಸಿ ಚಾಲಕ ಮೃತ್ಯು
ಮಂಡ್ಯ, ಫೆ.28: ಮುತ್ತತ್ತಿ ಬಳಿ ಕಾವೇರಿ ನದಿಯಲ್ಲಿ ಈಜಲು ಹೋದ ಬೆಂಗಳೂರಿನ ಬಿಎಂಟಿಸಿ ಬಸ್ ಚಾಲಕ ಎಸ್.ಹುನುಮಂತಯ್ಯ (52) ಎಂಬುವರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಕೆಂಗೇರಿಯ ದೊಡ್ಡಬಾಳೇ ಕಾಲನಿ ವಾಸಿ ಶಿವಣ್ಣನ ಪುತ್ರ ಎಸ್.ಹನುಮಂತಯ್ಯ ತನ್ನ 7 ಜನ ಸ್ನೇಹಿತರೊಡನೆ ಮುತ್ತತ್ತಿಗೆ ಮಂಗಳವಾರ ತಮ್ಮ ಕಾರನ್ನು ಪೂಜೆ ಮಾಡಿಸಲೆಂದು ಬಂದಿದ್ದರು.
ಪೂಜೆ ಸಲ್ಲಿಸಿದರ ನಂತರ ಎಲ್ಲರು ಕಾವೇರಿ ನದಿಯಲ್ಲಿ ಈಜಲು ಹೋದಾಗ ಆಕಸ್ಮಿಕವಾಗಿ ಹನುಮಂತಯ್ಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ನುರಿತ ಈಜುಗಾರರ ಸಹಾಯದಿಂದ ಬುಧವಾರ ಬೆಳಗ್ಗೆ ಶವವನ್ನು ಹೊರ ತೆಗೆಯಲಾಯಿತು.
ಹಲಗೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story