Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ರೈತ ಚಳುವಳಿಯಲ್ಲಿ ಗಟ್ಟಿಯಾಗಿ ನಿಂತವರು...

ರೈತ ಚಳುವಳಿಯಲ್ಲಿ ಗಟ್ಟಿಯಾಗಿ ನಿಂತವರು ಕೆ.ಎಸ್.ಪುಟ್ಟಣ್ಣಯ್ಯ : ಚುಕ್ಕಿ ನಂಜುಂಡಸ್ವಾಮಿ

ವಾರ್ತಾಭಾರತಿವಾರ್ತಾಭಾರತಿ1 March 2018 9:55 PM IST
share
ರೈತ ಚಳುವಳಿಯಲ್ಲಿ ಗಟ್ಟಿಯಾಗಿ ನಿಂತವರು ಕೆ.ಎಸ್.ಪುಟ್ಟಣ್ಣಯ್ಯ : ಚುಕ್ಕಿ ನಂಜುಂಡಸ್ವಾಮಿ

ಮೈಸೂರು,ಮಾ.1: ಸಂಘಟನೆಯಲ್ಲಿ ಬಿರುಕು ಬಂದರೂ, ಮನಸ್ಸುಗಳು ಒಡೆದರು  ರೈತ ಚಳುವಳಿಯಲ್ಲಿ ಗಟ್ಟಿಯಾಗಿ ನಿಂತವರು ಕೆ.ಎಸ್.ಪುಟ್ಟಣ್ಣಯ್ಯ ಎಂದು  ರೈತ ಸಂಘದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಸ್ಮರಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ದಲಿತ ಸಂಘಟನೆಗಳು ಇನ್ನಿತರ ಸಂಘ ಸಂಸ್ಥೆಗಳ ಜತೆಗೂಡಿ ಪುರಭವನದಲ್ಲಿ ಗುರುವಾರ  ರೈತ ನಾಯಕ ಕೆ.ಎಸ್.ಪುಟ್ಟಣ್ಣಯ ಅವರಿಗೆ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.

ಪುಟ್ಟಣ್ಣಯ್ಯ ಅವರ ಅಗಲಿಕೆಯಿಂದ ಶೂನ್ಯ ಆವರಿಸಿಕೊಂಡಿದೆ. ರೈತ ಸಂಘದ ಮೆದುಳು ಪ್ರೊ.ನಂಜುಂಡಸ್ವಾಮಿ, ಹೃದಯ ಸುಂದರೇಶನ್. ಇವರೆಡರ ಸಮ್ಮಿಲನವಾಗಿ ಪುಟ್ಟಣ್ಣಯ್ಯ ಇದ್ದರು. ಅನುಭವದಿಂದ ಹುಟ್ಟಿದ ಬುದ್ಧಿಜೀವಿ ಪುಟ್ಟಣ್ಣಯ್ಯ. ಅವರು ಇರಲೇಬೇಕಾದ ಕನಿಷ್ಠ ಮಾನವೀಯ ಮೌಲ್ಯಗಳನ್ನು ಜೋಪಾನವಾಗಿ ಕಾಪಾಡಿಕೊಂಡಿದ್ದರು. ಅವುಗಳನ್ನು ನಾವು ಕಲಿತು ಮುನ್ನೇಡಸಬೇಕಿದೆ. ಮೂಲೆಗುಂಪಾದ ವಿಚಾರಗಳ ಮೇಲೆ ಗಮನಸೆಳೆಯುತ್ತಿದ್ದರು ಎಂದು ಹೇಳಿದರು. 

ಹಿರಿಯ ಸಮಾಜವಾದಿ ಪ.ಮಲ್ಲೇಶ್ ಮಾತನಾಡಿ, ಜಾತೀಯತೆ ಮೀತಿ ಮೀರಿರುವಾಗ ಕೋಮುವಾದ ಎಲ್ಲರ ಮನೆ ಬಾಗಿಲಿಗೆ ಬಂದಿರುವಾಗ ಪುಟ್ಟಣ್ಣಯ್ಯ ಅವಶ್ಯಕತೆ ಇತ್ತು. ಕೋಮುವಾದದ ವಿರುದ್ಧ ನಾವೆಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ ಎಂದರು. 

ಹಿಂದೆ ರೈತ ಸಂಘ ಮತ್ತು ದಸಂಸ ಒಂದಾಗಲು ಮುಂದಾದಾಗ ರಾಜ್ಯದ ಹಣೆಬರಹ ಬದಲಾಗುತ್ತೆ ಎಂದು ನಿರೀಕ್ಷಿಸಿದ್ದೆ. ಆ ಶಕ್ತಿ ಎರಡೂ ಸಂಘಟನೆಗಳಿತ್ತು. ರೈತರು ದಲಿತರು ಒಟ್ಟಾಗಿ ಕೆಲಸ ಮಾಡಲು ಪುಟ್ಟಣ್ಣಯ್ಯ ತಯಾರಾಗಿದ್ದರು. ಆದರೆ, ಎರಡು ಸಂಘಟನೆಗಳು ಒಂದಾಗಿ ಸಾಗಲಿಲ್ಲ. ಈಗಾಲಾದರೂ ಎರಡು ಸಂಘಟನೆಗಳು ಒಂದಾಗಿ ಸಾಗಬೇಕಿದೆ ಎಂದು ತಿಳಿಸಿದರು. 

ಮಾಜಿ ವಿಧಾನಸಭಾಧ್ಯಕ್ಷ ಕೃಷ್ಣ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪುಟ್ಟಣ್ಣಯ್ಯ ಪ್ರಬುದ್ಧ ಹೋರಾಟಗಾರ. ಆಡು ಭಾಷೆಯಲ್ಲಿಯೇ ಜನರ ಹೃದಯ ಮುಟ್ಟುವ ಮಾತುಗಾರ. ಇತರರ ಕಷ್ಟ ನನ್ನದು. ಆ ಕಷ್ಟವ ಪರಿಹರಿಸುವುದು ಕರ್ತವ್ಯವೆಂದು ನಂಬಿ ಬದುಕಿದ್ದರು. 

ಯುವಕರು ಯಾಕೆ ಹೋರಾಟಕ್ಕೆ ಬರುತ್ತಿಲ್ಲ ಕಾರಣ ಏನು? ಹೋರಾಟದಲ್ಲಿ ಸತ್ವಯಿದೆ ಎಂದು ಅವರೇಕೆ ತಿಳಿದುಕೊಂಡಿಲ್ಲ? ಎಂಬುದರ ನಾವು ಚಿಂತಿಸಬೇಕು. ಬಲಿಷ್ಠ ಸಂಘಟನೆ ಕಟ್ಟಲು ಬದ್ಧರಾಗಬೇಕು. ಬದ್ಧತೆಯಿಂದ ಕೆಲಸ ಮಾಡಿದರೆ ಯಾವುದೂ ದೊಡ್ಡದಲ್ಲ. ಎಲ್ಲ ಸಂಘಟನೆಗಳು ಒಂದಾಗಿ ಜನಪರವಾದ ವಿಚಾರಗಳನ್ನು ತೆಗೆದುಕೊಂಡು ಮುನ್ನೆಡೆಯಬೇಕಿದೆ ಎಂದು ತಿಳಿಸಿದರು. 

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶಾಲವಾದ ದೃಷ್ಟಿಯ ಪುಟ್ಟಣ್ಣಯ್ಯ, ದುಡಿಯುವ ವರ್ಗಗಳ ಜನರ ಮೇಲೆ ಪ್ರಭಾವ ಬೀರಿದ್ದರು. ಪುಟ್ಟಣ್ಣಯ್ಯ ಅವರ ಅಗಲಿಕೆಗೆ ನಾಡು ಕಂಬನಿ ಮಿಡಿದಿದೆ. ಸಾಗರೋಪಾದಿಯಲ್ಲಿ ಜನ ಬಂದು ಅಂತಿಮ ನಮನ ಸಲ್ಲಿಸಿದ್ದಾರೆ. ನುಡಿದಂತೆ ನಡೆದ ಅವರು  ಹಳ್ಳಿಗಾಡಿನ ನಾಯಕ ಎಂದರು. 

ಕಾವೇರಿ ಚಳವಳಿ ವೇಳೆ ಎಸ್.ಎಂ.ಕೃಷ್ಣ ಮತ್ತು ಕಾಂಗ್ರೆಸ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡರು ಎಂದು ಕೆಲವರು ಆರೋಪ ಮಾಡಿದರು. ಅವರನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಇದು ಸುಳ್ಳು ಎಂಬುದು ತಿಳಿದಿತ್ತು. ಆದರೆ, ಕಾಂಗ್ರೆಸ್‍ನೊಂದಿಗೆ ಮೃದು ಧೋರಣೆ ಹೊಂದಿರುವುದು ನಿಜ. ಅದು ಕೋಮುವಾದಿ ಹಿಮ್ಮೆಟ್ಟಿಸಲು, ಸಂವಿಧಾನ ತಿರುಚುತ್ತೇವೆಂದು ಹೇಳುವವರ ವಿರೋಧಿಸುವ ಕಾರಣಗಳಿಗೆ ಕಾಂಗ್ರೆಸ್‍ನೊಂದಿಗೆ ಮೃಧು ಧೋರಣೆ ಹೊಂದಿದ್ದೇವೆ ಎಂದರು. 

ಮೈಸೂರು ವಿವಿ ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ವಿಶ್ರಾಂತ ನಿರ್ದೇಶಕ ಡಾ.ಸಿ.ಕೃಷ್ಣ, ಪ್ರೊ.ಕೆ.ಎಸ್.ಭಗವಾನ್, ಹರವು ದೇವೇಗೌಡ, ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ಧನ್, ಎಸ್‍ಯುಸಿಐ(ಸಿ) ರಾಜ್ಯ ಸಮಿತಿ ಸದಸ್ಯ ಎಂ.ಶಶಿಧರ, ರೈತ ಸಂಘದ ಎಂ.ಎಸ್.ಅಶ್ವಥನಾರಾಯಣರಾಜೇ ಅರಸ್, ದಂಸದ ಆಲಗೂಡು ಶಿವಕುಮಾರ್, ಶಂಭುಲಿಂಗಸ್ವಾಮಿ, ಪಚ್ಚೆ ನಂಜುಂಡಸ್ವಾಮಿ, ಸ್ವರಾಜ್ ಇಂಡಿಯಾದ ಎಚ್.ಎ.ನಂಜುಂಡಸ್ವಾಮಿ, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಬಸವರಾಜು, ಸಿಪಿಐ ಜಿಲ್ಲಾ ಕಾರ್ಯದರ್ಶಿ ಶೇಷಾದ್ರಿ, ಪ್ರೊ.ಶಬೀರ್ ಮುಸ್ತಾಫ, ಒಡನಾಡಿ ಸ್ಟ್ಯಾನ್ಲಿ, ಸರಗೂರು ನಟರಾಜ್, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ಡಿ.ಹೊಸಳ್ಳಿ ಶಿವು ಮಾತನಾಡಿದರು. ಸ್ವರಾಜ್ ಇಂಡಿಯಾದ ಅಭಿರುಚಿ ಗಣೇಶ್ ನಿರೂಪಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X