ಅಸ್ಪತ್ರೆಗೆ ದಾಖಲಾದ ಬಗ್ಗೆ ಪಿಣರಾಯಿ ವಿಜಯನ್ ಹೇಳಿದ್ದೇನು ?
ತಿರುವನಂತಪುರಂ, ಮಾ. 4: ಚೆನ್ನೈ ಅಪೊಲೊ ಅಸ್ಪತ್ರೆಯಲ್ಲಿ ವಾಡಿಕೆಯ ಆರೋಗ್ಯ ತಪಾಸಣೆಗೆ ಹೋಗಿದ್ದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಅವರು ಆರೋಗ್ಯ ತಪಾಸಣೆ ಬಳಿಕ ಕೇರಳದ ರಾಜಧಾನಿಗೆ ಮರಳಿದ್ದು, ಕಳೆದ ಹದಿನೈದು ವರ್ಷಗಳಿಂದ ಸಾಮಾನ್ಯ ಚೆಕ್ಅಪ್ ಮಾಡಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ರಕ್ತದಲ್ಲಿ ಪ್ಲೆಟ್ಲೆಟ್ ಕಡಿಮೆಯಾಗಿದೆ ಎಂಬ ವರದಿಯನ್ನು ನೋಡಿದ್ದೇನೆ. ತನಗೆ ಅಂತಹ ಆರೋಗ್ಯ ಸಮಸ್ಯೆಗಳಿಲ್ಲ. ಅದು ಕೆಲವರ ಬಯಕೆ ಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಶುಕ್ರವರ ರಾತ್ರಿ ಅರೋಗ್ಯ ತಪಾಸಣೆಗಾಗಿ ಮುಖ್ಯಮಂತ್ರಿ ಚೆನ್ನೈ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರ ರಕ್ತದಲ್ಲಿ ಪ್ಲೆಟ್ಲೆಟ್ ಕಡಿಮೆಯಾಗಿದೆ ಎಂದು ವರದಿಗಳು ಬಂದಿದ್ದವು. ಇದನ್ನು ಮುಖ್ಯ ಮಂತ್ರಿ ಕಚೇರಿ ನಿರಾಕರಿಸಿತ್ತು.
Next Story