Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕೆನರಾ ಕೆಥೋಲಿಕ್ ಸ್ತ್ರೀಯರ ಬೃಹತ್...

ಕೆನರಾ ಕೆಥೋಲಿಕ್ ಸ್ತ್ರೀಯರ ಬೃಹತ್ ಸಮಾವೇಶ

ವಾರ್ತಾಭಾರತಿವಾರ್ತಾಭಾರತಿ4 March 2018 7:51 PM IST
share
ಕೆನರಾ ಕೆಥೋಲಿಕ್ ಸ್ತ್ರೀಯರ ಬೃಹತ್ ಸಮಾವೇಶ

ಮಂಗಳೂರು, ಮಾ.4 : ‘ಕೆಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್’ ನೇತೃತ್ವದಲ್ಲಿ ಕೆಥೋಲಿಕ್ ಸಭಾ ಉಡುಪಿ ಪ್ರದೇಶ್ ಮತ್ತು ಮಂಗಳೂರು ಧರ್ಮ ಪ್ರಾಂತದ ಸ್ತ್ರೀಯರ ಮಂಡಳಿಯ ಸಹಯೋಗದಲ್ಲಿ ‘ಪ್ರಗತಿಪರ ಸಮಾಜಕ್ಕಾಗಿ ಕೆನರಾ ಕೆಥೋಲಿಕ್ ಸ್ತ್ರೀಯರ ನಾಯಕತ್ವ’ಎಂಬ ಧ್ಯೇಯದಡಿ ರವಿವಾರ ನಗರದ ಬೆಂದೂರ್ ಸಂತ ಆಗ್ನೆಸ್ ವಿಶೇಷ ಶಾಲೆಯ ಮೈದಾನದಲ್ಲಿ ಕೆನರಾ ಕೆಥೋಲಿಕ್ ಸ್ತ್ರೀಯರ ಸಮಾವೇಶ ನಡೆಯಿತು.

ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ. ಸ್ವಾ ಅಲೋಶಿಯಸ್ ಪಾವ್ಲೃ್ ಡಿಸೋಜ ಮಹಿಳೆಯರು ಸೇವೆಯ ಮೂಲಕ ತಮ್ಮ ಅಸ್ಮಿತೆಯನ್ನು ಎತ್ತಿ ತೋರಿಸಿದ್ದಾರೆ. ಮಹಿಳೆಯರ ಸೇವೆ ಇತರರಿಗೆ ಮಾದರಿಯಾಗಲಿ ಎಂದು ಹಾರೈಸಿದರು.
ಬೆಥನಿ ಸಂಸ್ಥೆಯ ಸಹ ಸುಪೀರಿಯರ್ ಜನರಲ್ ಸಿ. ಲಿಲ್ಲಿಸ್ ಬಿ.ಎಸ್. ಸಮಾವೇಶವನ್ನು ಉದ್ಘಾಟಿಸಿದರು.

ಕೆಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ ಕೇಂದ್ರೀಯ ಸಮಿತಿ ಅಧ್ಯಕ್ಷ ಅನಿಲ್ ಲೋಬೊ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ರೈಸ್ತ ಸಮುದಾಯದ ಮಹಿಳೆಯರ ನಾಯಕತ್ವ ಸಮಾಜದ ಮುಖ್ಯ ವಾಹಿನಿಯಲ್ಲೂ ತೊಡಗಿಸಿಕೊಳ್ಳುವಂತಾದರೆ ಪ್ರಗತಿಪರ ಸಮಾಜ ನಿರ್ಮಾಣ ಸಾಧ್ಯ ಎಂದರು.

ದಿಕ್ಸೂಚಿ ಭಾಷಣಗೈದ ಕೆಪಿಸಿಸಿ ಕಾರ್ಯದರ್ಶಿ ವೆರೊನಿಕಾ ಕರ್ನೆಲಿಯೊ ಕ್ರೈಸ್ತ ಸಮುದಾಯದಲ್ಲಿ ಮಹಿಳೆಯರಿಗೆ ಸಮಾನ ಗೌರವವಿದ್ದು, ಎಲ್ಲ ರಂಗಗಳಲ್ಲೂ ಅತ್ಯುತ್ತಮ ನಾಯಕತ್ವ ವಹಿಸುತ್ತಿದ್ದಾರೆ. ತಮ್ಮ ಸೇವೆಯ ಮೂಲಕ ಸ್ತ್ರೀಯರು ಉತ್ತಮ ಕುಟುಂಬಗಳನ್ನು ನಿರ್ವಹಿಸುತ್ತಿದ್ದು, ಜೊತೆಗೆ ಸಮಾಜದ ಮುಖ್ಯವಾಹಿನಿಯಲ್ಲಿ ಸ್ವಸಹಾಯ ಸಹಕಾರಿ ರಂಗಗಳಲ್ಲೂ ಪ್ರಭಾವಿ ನಾಯಕತ್ವವನ್ನು ವಹಿಸಿಕೊಳ್ಳಬೇಕಿದೆ. ಕ್ರೈಸ್ತ ಸಮುದಾಯದ ಸ್ತ್ರೀಯರಿಗೆ ಸಮುದಾಯದಿಂದ ಉತ್ತಮ ಬೆಂಬಲ ಸಿಗುತ್ತಿದೆ. ಸಿಕ್ಕಿರುವ ಅವಕಾಶಗಳನ್ನು ಪ್ರಾಮಾಣಿಕವಾಗಿ ಬಳಸಿಕೊಂಡು ನಾಯಕತ್ವದಲ್ಲಿ ಬೆಳೆಯುವಂತಾಗಬೇಕು ಎಂದರು.

ಪ್ರೊ.ಸ್ಟೀವನ್ ಕ್ವಾಡ್ರಸ್ ರಚಿಸಿದ ‘ಸ್ತ್ರೀಯರಿಗಾಗಿ ಸರಕಾರ’ ಕೃತಿಯನ್ನು ಧರ್ಮಾಧ್ಯಕ್ಷ ಅ. ವಂ. ಸ್ವಾ. ಅಲೋಶಿಯಸ್ ಪಾವ್ಲ್ ಡಿಸೋಜ ಬಿಡುಗಡೆಗೊಳಿಸಿದರು. ಮಾಡೆಲ್ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಆಲ್ಬರ್ಟ್ ಡಿಸೋಜ ಕೆಥೋಲಿಕ್ ಸಭಾ ಅಜೀವ ಸದಸ್ಯತ್ವ ಕಾರ್ಡ್ ಅನಾವರಣಗೊಳಿಸಿದರು. ಈ ಸಂದರ್ಭ ಬಿಷಪ್ ಅವರನ್ನು ಕೆಥೋಲಿಕ್ ಸಭಾ ವತಿಯಿಂದ ಸನ್ಮಾನಿಸಲಾಯಿತು.

ರಾಜ್ಯ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಮಾತನಾಡಿ ಜಿಲ್ಲೆಯ ಇತಿಹಾಸದಲ್ಲಿ ಇದೊಂದು ಚಾರಿತ್ರಿಕ ಸಮಾವೇಶ. ಕ್ರೈಸ್ತ ಸಮುದಾಯ ದೇಶದಲ್ಲಿ ಕೇವಲ ಶೇ.2 ಆಗಿದ್ದರೂ, ರಾಷ್ಟ್ರವನ್ನು ಮುನ್ನಡೆಸುವಲ್ಲಿ ಕ್ರೈಸ್ತ ಸಮಾಜದ ಕೊಡುಗೆ ಅಪಾರ. ಸೇವಾ ಮನೋಭಾವದ ಜೊತೆಗೆ ಕ್ರೈಸ್ತ ಸಮುದಾಯದ ಒಗ್ಗಟ್ಟು ಕೂಡಾ ಹೆಚ್ಚಬೇಕು ಎಂದರು.

ಶಾಸಕ ಜೆ.ಆರ್. ಲೋಬೊ ಮಾತನಾಡಿ ಸ್ತ್ರೀಯರಿಗೆ ಪ್ರಾಶಸ್ತ್ಯ ನೀಡುವ ಸಮಾಜ ಸದಾ ಬಲಿಷ್ಠವಾಗಿರುತ್ತದೆ ಎಂದರು. 

ಸಮಾವೇಶದಲ್ಲಿ ಕೆನರಾ ಕೆಥೋಲಿಕ್ ಸಮುದಾಯದ ಸಾಧಕಿಯರಾದ ಪಾವ್ಲಿನ್ ಪ್ರೊ. ಪಿಂಟೊ ತಾಕೊಡೆ (ಕೃಷಿ), ಜೆಸ್ಲಿನ್ ಎಲಿಜಬೆತ್ ಮೇರಿ ಲುವಿಸ್ (ವಿಶೇಷ ಸಾಮರ್ಥ್ಯದ ಸ್ತ್ರೀ), ಜುಲಿಯಾನಾ ಲೋಬೊ ದೇರೆಬೈಲ್ (ಶಿಕ್ಷಣ ಕ್ಷೇತ್ರ), ಇವ್ಲಾಲಿಯಾ ಡಿಸೋಜ ಬಿಜೈ (ಉದ್ಯಮ), ಲಿನೆಟ್ ಕ್ಯಾಸ್ತೆಲಿನೋ ನಿತ್ಯಾಧರ್ ನಗರ (ಸರಕಾರಿ ಸೇವೆ), ಮೇರಿ ವಾಸ್ ದೇರೆಬೈಲ್ (ಆರೋಗ್ಯ ಕ್ಷೇತ್ರ), ಮರ್ಲಿನ್ ರಸ್ಕಿನ್ಹಾ ನಾಗೊರಿ (ಸಾಹಿತ್ಯ ಮತ್ತು ಕಲೆ), ವಾಯ್ಲೆಟ್ ಜೆ. ಪಿರೇರಾ ಬೆಂದೂರ್ (ವೃತ್ತಿಪರ ಕ್ಷೇತ್ರ), ರೆಮಿಡಿಯಾ ಡಿಸೋಜ ಬೆಳ್ಮಣ್ (ಸಮಾಜ ಸೇವೆ), ಜೋಯ್ಲಿನ್ ಮ್ಯೂರಲ್ ಲೋಬೊ ಶಿರ್ತಾಡಿ (ಕ್ರೀಡಾ ಕ್ಷೇತ್ರ) ಅವರಿಗೆ ‘ಕೆಥೋಲಿಕ್ ಸಭಾ ಸ್ತ್ರೀ ಸಾಧನ್ ಪ್ರಶಸ್ತಿ 2018’ ಪ್ರದಾನ ಮಾಡಲಾಯಿತು. ಸನ್ಮಾನಿತರ ಪರವಾಗಿ ಲಿನೆಟ್ ಕ್ಯಾಸ್ತೆಲಿನೋ ಮಾತನಾಡಿದರು.

ಐಆರ್‌ಎಸ್ ಅಧಿಕಾರಿ ಕ್ವೀನಿ ಮಿಶಲ್ ಡಿಕೋಸ್ತಾ, ಮಂಗಳೂರು ಧರ್ಮಪ್ರಾಂತ ಪಾಲನಾ ಸಮಿತಿ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ, ಆಧ್ಯಾತ್ಮಿಕ ನಿರ್ದೇಶಕ ವಂ. ಸ್ವಾ. ಮ್ಯಾಥ್ಯೂ ವಾಸ್, ಎಪಿಸ್ಕೋಪಲ್ ಸಿಟಿ ವಲಯದ ಪ್ರಧಾನ ಧರ್ಮಗುರು ವಂ. ಸ್ವಾ. ಜೆ.ಬಿ. ಕ್ರಾಸ್ತಾ, ವಂ. ಸ್ವಾ. ಫರ್ಡಿನಾಂಡ್ ಗೊನ್ಸಾಲ್ವಿಸ್, ಸ್ತ್ರೀ ಮಂಡಳಿಯ ನಿರ್ದೇಶಕ ವಂ. ಸ್ವಾ. ಫ್ರಾನ್ಸಿಸ್ ಡಿಸೋಜ, ಕೆಥೋಲಿಕ್ ಸಭಾ ಮಂಗಳೂರು ಧರ್ಮ ಪ್ರಾಂತದ ಪ್ರಧಾನ ಕಾರ್ಯದರ್ಶಿ ಸೆಲೆಸ್ತಿನ್ ಡಿಸೋಜ, ನಿಯೋಜಿತ ಅಧ್ಯಕ್ಷ ಆಲ್ವಿನ್ ಮೋನಿಸ್, ಉಪಾಧ್ಯಕ್ಷ ಡೇವಿಡ್ ಡಿಸೋಜ, ನಿಕಟ ಪೂರ್ವಾಧ್ಯಕ್ಷೆ ಫ್ಲೇವಿ ಡಿಸೋಜ, ಸ್ತ್ರೀ ಸಶಕ್ತೀಕರಣ ಸಮಿತಿಯ ಸಂಚಾಲಕಿ ಶರಲ್ ಡಿಸೋಜ, ಸ್ತ್ರೀಯರ ಮಂಡಳಿಯ ಅಧ್ಯಕ್ಷ ಟೆರಿ ಪಾಯ್ಸ್, ಕೆಥೋಲಿಕ್ ಸಭಾ ಉಡುಪಿ ಪ್ರಾಂತದ ಅಧ್ಯಕ್ಷ ವಲೇರಿಯನ್ ಆರ್. ಫೆರ್ನಾಂಡಿಸ್, ಕಾರ್ಯದರ್ಶಿ ಜೆಸಿಂತಾ ಕೊಲಾಸೊ, ಹಿಲ್ಡಾ ಆಳ್ವ, ಗ್ರೆಟ್ಟಾ ಪಿಂಟೊ, ಶಾಲೆಟ್ ಪಿಂಟೊ, ಐರಿನ್ ರೆಬೆಲ್ಲೊ, ಕೆಥೋಲಿಕ್ ಸಭಾ ವಲಯಾಧ್ಯಕ್ಷರು, ವಲಯ ಸ್ತ್ರೀ ಹಿತಾ ಸಂಚಾಲಕಿಯರು, ಕೆಥೋಲಿಕ್ ಸಭಾದ ನಾಯಕರಾದ ಜೆರಾಲ್ಡ್ ಡಿಕೋಸ್ತಾ, ಎಲ್.ಜೆ. ಫೆರ್ನಾಂಡಿಸ್, ಪೀಟರ್ ಜೆರಿ ರೊಡ್ರಿಗಸ್, ವಿವಿಡ್ ಡಿಸೋಜ, ಐಡಾ ಫುಡ್ತಾದೊ, ಅನಿಲ್ ಪತ್ರಾವೊ, ಅನಿತಾ ಲೋಬೊ ಮತ್ತಿತರರು ಉಪಸ್ಥಿತರಿದ್ದರು.

ಡೋಲ್ಫಿ ಸಲ್ಡಾನ್ಹಾ ಮತ್ತು ಸುಜಾತಾ ಮೆಂಡೋನ್ಸಾ ಕಾರ್ಯಕ್ರಮ ನಿರೂಪಿಸಿದರು. ಶರ್ಲಿನ್ ಡಿಕೋಸ್ತಾ ವಂದಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X