ತ್ರಿಪುರಾ ವಿಧಾನ ಸಭೆ ಚುನಾವಣೆ: ಬುಡಕಟ್ಟು ಪಕ್ಷ ಐಪಿಟಿಎಫ್ ಪರಿವರ್ತಕ
ಹೊಸದಿಲ್ಲಿ, ಮಾ. 4: ತ್ರಿಪುರಾದ ಆಡಳಿತದಲ್ಲಿ ಬದಲಾವಣೆಗೆ ಮೂಲವಾಗಿರುವುದು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ, ಪ್ರತ್ಯೇಕ ಟಿಪ್ರಾಲ್ಯಾಂಟ್ ರಾಜ್ಯ ರಚನೆಗೆ ಆಗ್ರಹಿಸುತ್ತಿರುವ ಬುಡಕಟ್ಟು ಪಕ್ಷ ಐಪಿಟಿಎಫ್.
ಇದು ಎಡ ಬುಡಕಟ್ಟ ಸಮುದಾಯ ಪ್ರಾಬಲ್ಯ ಹೊಂದಿರುವು ತ್ರಿಪುರಾದಲ್ಲಿ ಕೇಸರಿ ಪಕ್ಷ ಅಧಿಕಾರ ಪಡೆಯಲು ನೆರವಾಗಿದೆ. ಬುಡಕಟ್ಟು ಹಾಗೂ ಹೊರಗಿನವರ ನಡುವಿನ ಖಾಯಂ ಜನಾಂಗೀಯ ಉದ್ವಿಗ್ನತೆ ತ್ರಿಪುರಾ ರಾಜಕೀಯದ ಕೇಂದ್ರ ವಿಷಯ. ಇದು ಬಿಜೆಪಿಗೆ ಅಧಿಕಾರ ಪಡೆಯಲು ಸಹಾಯಕವಾಯಿತು. ಆದರೆ, ಇದು ಮಾತ್ರವಲ್ಲ, ಇಲ್ಲಿ ಆರ್ಥಿಕತೆ ಮಟ್ಟ ಇಳಿಕೆಯಾಗಿರುವುದರಿಂದ ನಗರದ ಮತದಾರರಲ್ಲಿ ಅಸಮಾಧಾನ ಉಲ್ಬಣಿಸಿದೆ. ಮುಖ್ಯವಾಗಿ ಯುವಕರು ಹಾಗೂ ಅಧ್ಯಾಪಕರಲ್ಲಿ ಇದು ಹೆಚ್ಚುತ್ತಿದೆ.
ಉದ್ಯೋಗ ಹಾಗೂ ಪ್ರಗತಿಯ ಆಕಾಂಕ್ಷೆ ಮೂರು ರಾಜ್ಯಗಳಲ್ಲೂ ಒಂದೇ ರೀತಿಯಾಗಿದೆ. ಮಾಣಿಕ್ ಸರ್ಕಾರ್ಗೆ ಸ್ವಚ್ಚ ರಾಜಕಾರಣಿ ಎಂಬ ಜನಪ್ರಿಯತೆ ಇದ್ದರೂ ಬಿಜೆಪಿ ಈ ಮೂರು ರಾಜ್ಯಗಳ ಕೊರತೆಯನ್ನು ತನ್ನ ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಂಡಿತ್ತು. ಇದು ಮಾಣಿಕ್ ಸರ್ಕಾರ್ ಅವರ ವರ್ಚಸ್ಸನ್ನು ಮಸುಕು ಮಾಡಿತ್ತು. ಆದರೂ ಎಡರಂಗ ಒಟ್ಟು ಮತದಲ್ಲಿ ಶೇ. 44 ಪಡೆಯುವಲ್ಲಿ ಯಶಸ್ವಿಯಾಗಿತ್ತು.