ಮದ್ದೂರು: ಪೊಲೀಸ್ ಜೀಪ್ ಢಿಕ್ಕಿ; ಯುವಕ ಮೃತ್ಯು
![ಮದ್ದೂರು: ಪೊಲೀಸ್ ಜೀಪ್ ಢಿಕ್ಕಿ; ಯುವಕ ಮೃತ್ಯು ಮದ್ದೂರು: ಪೊಲೀಸ್ ಜೀಪ್ ಢಿಕ್ಕಿ; ಯುವಕ ಮೃತ್ಯು](https://www.varthabharati.in/sites/default/files/images/articles/2018/03/5/MADHU.jpg)
ಮದ್ದೂರು, ಮಾ.5: ಪೊಲೀಸ್ ಜೀಪ್ ಢಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಸೋಮವಾರ ಮಧ್ಯಾಹ್ನ ಪಟ್ಟಣದ ಎಲ್ಐಸಿ ಕಚೇರಿ ಬಳಿ ಬೆಂಗಳೂರು ಮೈಸೂರು ಹೆದ್ದಾರಿಯ ತಿರುವಿನಲ್ಲಿ ನಡೆದಿದೆ.
ಪಟ್ಟಣದ ಸರ್.ಎಂ.ವಿಶ್ವೇಶ್ವರಯ್ಯ ನಗರದ ನಿವಾಸಿ ಮಧು(30) ಮೃತಪಟ್ಟ ಯುವಕ. ತೀವ್ರವಾಗಿ ಗಾಯಗೊಂಡ ಈತನನ್ನು ಜೀಪಿನಲ್ಲಿದ್ದ ಸಿಪಿಐ ಪ್ರಭಾಕರ್, ಸಿಬ್ಬಂದಿ ತಕ್ಷಣ ಪಟ್ಟಣದ ತಾಲೂಕು ಆಸ್ಪತ್ರೆಗೆ ಸಾಗಿಸಿದರು.
ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story