Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಇಲ್ಲಿ ಕೆಂಪಿರುವೆ ಕಂಡರೆ ಬಾಯಲ್ಲಿ...

ಇಲ್ಲಿ ಕೆಂಪಿರುವೆ ಕಂಡರೆ ಬಾಯಲ್ಲಿ ನೀರೂರಿಸುತ್ತಾರೆ !

ಕೆ.ಎಲ್ ಶಿವುಕೆ.ಎಲ್ ಶಿವು6 March 2018 8:44 PM IST
share
ಇಲ್ಲಿ ಕೆಂಪಿರುವೆ ಕಂಡರೆ ಬಾಯಲ್ಲಿ ನೀರೂರಿಸುತ್ತಾರೆ !

ಚಿಕ್ಕಮಗಳೂರು, ಮಾ.6: ಇರುವೆಗಳಲ್ಲಿ ವಿವಿಧ ಬಗೆಯ ಇರುವೆಗಳಿವೆ. ಕೆಲ ಇರುವೆಗಳು ನಿರುಪದ್ರವಿಗಳಾಗಿದ್ದರೆ, ಇನ್ನು ಕೆಲವು ಜಾತಿಯ ಇರುವೆಗಳು ಕಚ್ಚಿದರೆ ಸಹಿಸಲಸಾಧ್ಯ ನೋವಾಗುವುದು ಎಲ್ಲರಿಗೂ ತಿಳಿದ ವಿಚಾರ. ಮಕ್ಕಳಂತೂ ಇರುವೆಗಳನ್ನು ಕಂಡರೆ ಕಾಲಿಗೆ ಬುದ್ಧಿಹೇಳುವುದು ಸಾಮಾನ್ಯ. ಆದರೆ ಮಲೆನಾಡಿನಲ್ಲಿ ಇರುವೆಗಳನ್ನೇ ಚಟ್ನಿ ಮಾಡಿ ತಿಂದು ಬಾಯಿ ಚಪ್ಪರಿಸುವ ವಿಶಿಷ್ಟ ಆಹಾರ ಪದ್ದತಿ ಇದೆ ಎಂದರೆ ನೀವು ನಂಬಲೇಬೇಕು.

ಚಿಕ್ಕಮಗಳೂರು ವಿಶಿಷ್ಟ ಆಹಾರ ಪದ್ಧತಿಗೆ ಹೆಸರಾದ ಜಿಲ್ಲೆಯಾಗಿದೆ. ಅದರಲ್ಲೂ ಜಿಲ್ಲೆಯ ಮಲೆನಾಡಿನ ಭಾಗವಂತೂ ತನ್ನದೇ ಆದ ಆಹಾರ ಕ್ರಮಗಳಿಗೆ ಖ್ಯಾತಿ ಪಡೆದಿದೆ. ಮಲೆನಾಡಿನ ಆದಿವಾಸಿಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಇರುವೆ ಜಾತಿಗೆ ಸೇರಿರುವ ಪ್ರಭೇದವಾಗಿರುವ ಕೆಂಪಿರುವೆ(ಚೆಗಳಿ ಇರುವೆ)ಗಳನ್ನು ಕಂಡರೆ ಬಾಯಲ್ಲಿ ನೀರೂರಿಸುತ್ತಾರೆ. ಸಾಮಾನ್ಯವಾಗಿ ಮರ, ಗಿಡಗಳ ಮೇಲೆಯೇ ವಾಸಿಸುವ ಚೆಗಳಿ ಇರುವೆಗಳ ಚಟ್ನಿ ಮಲೆನಾಡಿನ ಆದಿವಾಸಿಗಳ ಸಾಂಪ್ರದಾಯಿಕ ಆಹಾರವಾಗಿದ್ದರೂ ಇತ್ತೀಚೆಗೆ ಚೆಗಳಿ ಇರುವೆಗಳ ಔಷಧೀಯ ಗುಣಗಳಿಂದಾಗಿ ಚಟ್ನಿಯನ್ನು ಮಾಂಸಾಹಾರಿ ಜನಾಂಗದವರೆಲ್ಲರೂ ಚಪ್ಪರಿಸಲು ಆರಂಭಿಸಿದ್ದಾರೆ.

ಚೆಗಳಿ ಇರುವೆ ಮಲೆನಾಡಿನಲ್ಲಿ ಹೆಚ್ಚು ಕಂಡು ಬರುವ ಕೀಟವಾಗಿದ್ದು, ದೊಡ್ಡ ದೊಡ್ಡ ಮರಗಳಲ್ಲಿ ಮರದ ಎಲೆಗಳನ್ನೇ ಗೂಡಾಗಿ ಮಾರ್ಪಡಿಸಿಕೊಂಡು ಗುಂಪು ಗುಂಪಾಗಿ ವಾಸಿಸುವ ಪ್ರಭೇದವಾಗಿವೆ. ಸಾಮಾನ್ಯವಾಗಿ ಈ ಚೆಗಳಿ ಇರುವೆಗಳು ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಸಂತಾನೋತ್ಪತ್ತಿಗೆ ಮುಂದಾಗುತ್ತವೆ. ಈ ವೇಳೆ ಮರಗಳಲ್ಲಿ ದೊಡ್ಡ ದೊಡ್ಡ ಗೂಡುಗಳನ್ನು ಹೆಣೆದು ಸಂತಾನೋತ್ಪತ್ತಿಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುತ್ತವೆ. ಈ ವೇಳೆ ಹೆಣ್ಣು ಚೆಗಳಿ ಇರುವೆಗಳು ಸಾವಿರಾರು ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ. ಇದೇ ಸಂದರ್ಭಕ್ಕಾಗಿ ಕಾಯುವ ಮಲೆನಾಡಿನ ಆದಿವಾಸಿಗಳು ಇರುವೆ ಗೂಡುಗಳನ್ನು ಕಿತ್ತು ಬೆಂಕಿಯಲ್ಲಿ ಕಾಯಿಸಿ ಚೆಗಳಿರುವೆಗಳ ಮೊಟ್ಟೆ ಮರಿಗಳು ಹಾಗೂ ಇರುವೆಗಳನ್ನು ಸೇರಿಸಿ ಹದವಾಗಿ ಬೇಯಿಸುತ್ತಾರೆ. ಚೆಗಳಿ ಇರುವೆಗಳೊಂದಿಗೆ ತೆಂಗನಕಾಯಿ, ಕಾಳು ಮೆಣಸು, ಒಣಮೀನು, ಕಾರ ಬೆರೆಸಿ ಚಟ್ನಿ ಮಾಡಿ ದೋಸೆ, ಇಡ್ಲಿ, ಅನ್ನ, ಚಪಾತಿ, ಗಂಜಿಯೊಂದಿಗೆ ತಿನ್ನುವ ಕ್ರಮ ಆದಿವಾಸಿಗಳಲ್ಲಿದೆ.

ಚೆಗಳಿಯಲ್ಲಿದೆ ವಿಶಿಷ್ಟ ಔಷಧೀಯ ಗುಣ:

ಮಲೆನಾಡಿನಲ್ಲಿ ಚೆಗಳಿ ಚಟ್ನಿಗೆ ಭಾರೀ ಬೇಡಿಕೆ ಇದೆ. ಆದರೆ ಯಾರೂ ಈ ಇರುವೆಗಳನ್ನು ಹಣಕ್ಕಾಗಿ ಮಾರುವ ದಂಧೆಗಿಳಿದಿಲ್ಲ. ಚೆಗಳಿ ಇರುವೆಗಳಲ್ಲಿರುವ ವಿಶಿಷ್ಟ ಔಷಧೀಯ ಅಂಶಗಳು ಹಲವು ಮಾರಕ ಕಾಯಿಲೆಗಳಿಗೆ ರಾಮಬಾಣ ಎಂಬ ಹಿನ್ನೆಲೆಯಲ್ಲಿ ಮಲೆನಾಡಿನ ಆದಿವಾಸಿ ಸಮುದಾಯದವರಿಗೆ ಚೆಗಳಿ ಚಟ್ನಿ ಎಂದರೆ ಪಂಚಪ್ರಾಣ. ಚೆಗಳಿ ಚೆಟ್ನಿ ಟೈಪಾಯಿಡ್‍ನಂತಹ ಮಾರಕ ರೋಗ ಸೇರಿದಂತೆ, ಶೀತ, ಕೆಮ್ಮು, ಕಫದಂತಹ ಬಾಧೆಗಳಿಗೆ ರಾಮಬಾಣವಾಗಿದೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಲೆನಾಡಿನಲ್ಲಿ ಚೆಗಳಿ ಚಟ್ನಿ ಜನಪ್ರಿಯವಾಗುತ್ತಿದೆ. ಕೇವಲ ಆದಿವಾಸಿಗಳು ಮಾತ್ರವಲ್ಲದೇ ಇತ್ತೀಚೆಗೆ ಮಾಂಸಾಹಾರಿಗಳೆಲ್ಲರೂ ಚೆಗಳಿ ಇರುವೆಗಳ ರುಚಿಗೆ ಮಾರು ಹೋಗುತ್ತಿದ್ದಾರೆ. ಇರುವೆಗಳೆಂದರೆ ಓಡಿ ಹೋಗುವ ಮಕ್ಕಳಿಗೆ ಔಷಧೀಯ ಗುಣದ ಹಿನ್ನೆಲೆಯಲ್ಲಿ ಚೆಗಳಿ ಚಟ್ನಿ ತಿನ್ನಿಸುವುದು ವಾಡಿಕೆಯಾಗಿದೆ. ಚೆಗಳಿ ಚಟ್ನಿಗೆ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ ಮಲೆನಾಡಿನಿಂದ ವಿಶಿಷ್ಟ ಬಗೆಯ ಚೆಗಳಿ ಅಳಿವಿನಂಚಿಗೆ ಸರಿಯಬಹುದು ಎಂಬ ಆರೋಪವನ್ನು ಇರುವೆ ಪ್ರಿಯರು ಮಾಡದಿದ್ದರೆ ಸಾಕೆಂಬುವುದು ಚೆಗಳಿ ಚಟ್ನಿ ಪ್ರಿಯರ ಅಭಿಪ್ರಾಯವಾಗಿದೆ.

share
ಕೆ.ಎಲ್ ಶಿವು
ಕೆ.ಎಲ್ ಶಿವು
Next Story
X