ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷೆ: ನಾಲ್ವರು ಗೈರು
ಉಡುಪಿ, ಮಾ.9: ಶುಕ್ರವಾರ ಜಿಲ್ಲೆಯಲ್ಲಿ ನಡೆದ ಈ ಸಾಲಿನ ದ್ವಿತೀಯ ಪಿಯುಸಿಯ ಮೂರು ವಿಷಯಗಳ ಪರೀಕ್ಷೆಗಳಿಗೆ ಒಟ್ಟು ನಾಲ್ವರು ಗೈರು ಹಾಜರಾಗಿದ್ದರು ಎಂದು ಜಿಲ್ಲಾ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.
ಶಿಕ್ಷಣ ವಿಷಯಕ್ಕಾಗಿ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 17 ಮಂದಿ ಹೆಸರು ನೊಂದಾಯಿಸಿದ್ದು, 14 ಮಂದಿ ಹಾಜರಾಗಿ ಮೂವರು ಗೈರು ಹಾಜರಾಗಿದ್ದರು. ತರ್ಕಶಾಸ್ತ್ರ ವಿಷಯಕ್ಕೆ ಕುಂದಾಪುರ ಭಂಡಾರ್ಕಾರ್ಸ್ ಪ.ಪೂ.ಕಾಲೇಜಿನಿಂದ 30ಮಂದಿ ಹೆಸರು ನೊಂದಾಯಿಸಿ 29 ಮಂದಿ ಪರೀಕ್ಷೆ ಬರೆದಿದ್ದಾರೆ. ಗೃಹವಿಜ್ಞಾನ ವಿಷಯಕ್ಕೆ ಸಂಬಂಧಿಸಿ ಬಿದ್ಕಲ್ಕಟ್ಟೆ ಸರಕಾರಿ ಪ.ಪೂ. ಕಾಲೇಜಿನಲ್ಲಿ ಹೆಸರು ನೊಂದಾಯಿಸಿದ ಎಲ್ಲಾ 9 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





