ಕುಶಾಲನಗರ: ಆದಿವಾಸಿ ಪುನರ್ವಸತಿ ಕೇಂದ್ರಕ್ಕೆ ನಟ ಚೇತನ್ ಭೇಟಿ
![ಕುಶಾಲನಗರ: ಆದಿವಾಸಿ ಪುನರ್ವಸತಿ ಕೇಂದ್ರಕ್ಕೆ ನಟ ಚೇತನ್ ಭೇಟಿ ಕುಶಾಲನಗರ: ಆದಿವಾಸಿ ಪುನರ್ವಸತಿ ಕೇಂದ್ರಕ್ಕೆ ನಟ ಚೇತನ್ ಭೇಟಿ](https://www.varthabharati.in/sites/default/files/images/articles/2018/03/11/11-kus 01.jpg)
ಕುಶಾಲನಗರ,ಮಾ11: ಚಲನಚಿತ್ರ ನಟ ಚೇತನ್ ಗುಡ್ಡೆಹೊಸೂರು ಸಮೀಪದ ಬಸವನಹಳ್ಳಿಯಲ್ಲಿನ ಆದಿವಾಸಿಗಳ ಪುನರ್ವಸತಿ ಕೇಂದ್ರಕ್ಕೆ ಶನಿವಾರ ರಾತ್ರಿ ಭೇಟಿ ಸ್ವಲ್ಪಕಾಲ ಅಲ್ಲಿನ ನಿವಾಸಿಗಳೊಂದಿಗೆ ಕಳೆದರು.
ದಿಡ್ಡಳ್ಳಿ ನಿರಾಶ್ರಿತರ ಸಮಸ್ಯೆ ಹೋರಾಟದಲ್ಲಿ ಪಾಲ್ಗೊಂಡಿದ್ದ ನಟ ಚೇತನ್, ಬಸವನಹಳ್ಳಿ ಪುನರ್ವಸತಿ ಕೇಂದ್ರದ ಪ್ರಮುಖರು, ಹಾಡಿ ನಿವಾಸಿಗಳೊಂದಿಗೆ ಸರಕಾರ ಕಲ್ಪಿಸಿದ ಸೌಲಭ್ಯಗಳ ಬಗ್ಗೆ ಮಾಹಿತಿ ಕಲೆ ಹಾಕಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಿರಾಶ್ರಿತರಿಗೆ ಸುಸಜ್ಜಿತ ರೀತಿಯಲ್ಲಿ ಮನೆಗಳನ್ನು ನಿರ್ಮಿಸಿಕೊಡುತ್ತಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಸರಕಾರ ಬಡವರಿಗೆ ಅವಶ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವಂತಾಗಬೇಕು ಎಂದ ಚೇತನ್, ಬಡವರ ಸಮಸ್ಯೆಗಳ ಕಾಳಜಿಯಿರುವ ಸರಕಾರ ಮುಂದಿನ ದಿನಗಳಲ್ಲಿ ಬರಬೇಕಿದೆ ಎಂದರು.
Next Story