Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ..

ಓ ಮೆಣಸೇ..

ಪಿ.ಎ.ರೈಪಿ.ಎ.ರೈ12 March 2018 12:21 AM IST
share
ಓ ಮೆಣಸೇ..

  ಒಂದು ವೇಳೆ ಎಡಪಕ್ಷಗಳು ದೇಶದ ರಾಜಕೀಯದಿಂದ ದೂರವಾದರೆ ವಿನಾಶವೇ ಸಂಭವಿಸಲಿದೆ 
- ಜೈರಾಂ ರಮೇಶ್, ಕಾಂಗ್ರೆಸ್ ನಾಯಕ
ಕಾಂಗ್ರೆಸ್ ಕುರಿತಂತೆ ಸಂಪೂರ್ಣ ಭರವಸೆ ಕಳೆದುಕೊಂಡಿದ್ದೀರಿ ಎಂದಾಯಿತು.

---------------------

ನರೇಂದ್ರ ಮೋದಿ ಆಡಳಿತಕ್ಕೆ ಬಂದ ಮೇಲೆ ಕಾಶ್ಮೀರ ಬಿಟ್ಟರೆ ಎಲ್ಲೂ ಬಾಂಬ್ ದಾಳಿಯಾಗಿಲ್ಲ

- ನಳಿನ್ ಕುಮಾರ್ ಕಟೀಲು, ಸಂಸದ
  ಅದಕ್ಕಾಗಿ ಕೇಸರಿ ಭಯೋತ್ಪಾದಕರಿಗೆ ಥ್ಯಾಂಕ್ಸ್ ಹೇಳಬೇಕೇ?

---------------------

 ಸಿದ್ದರಾಮಯ್ಯ ತಮ್ಮ ಹೆಸರನ್ನು ಅಮಾನುಲ್ಲಾ ಖಾನ್ ಎಂದು ಬದಲಿಸಿಕೊಳ್ಳಲಿ

- ಶೋಭಾ ಕರಂದ್ಲಾಜೆ, ಸಂಸದೆ
 
ನೀವು ಖತೀಜಾ ಎಂದು ಬದಲಿಸಿಕೊಳ್ಳುವುದಾದರೆ ಅವರೂ ಸಿದ್ಧರಿದ್ದಾರಂತೆ.

---------------------
ಜಾತ್ಯತೀತ ಪಕ್ಷಗಳು ತಮ್ಮ ಉಳಿವಿಗಾಗಿ ಚುನಾವಣಾ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯ

- ವೀರಪ್ಪ ಮೊಯ್ಲಿ, ಕಾಂಗ್ರೆಸ್ ಮುಖಂಡ
  ಹಾಗಾದರೆ ತಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸುವುದೇ?
---------------------

ರಾಹುಲ್ ಗಾಂಧಿ ಕಾಂಗ್ರೆಸ್ ಪಾಲಿಗೆ ರಾಹು ಇದ್ದಂತೆ

- ಆರ್.ಅಶೋಕ್, ಮಾಜಿ ಉಪ ಮುಖ್ಯಮಂತ್ರಿ
  ಬಿಜೆಪಿಯೊಳಗಿನ ಕೇತುಗಳ ಬಗ್ಗೆ ಏನು ಹೇಳುತ್ತೀರಿ?
---------------------

ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ ಇತ್ಯರ್ಥವಾಗದಿದ್ದರೆ ಭಾರತ ಮುಂದೆ ಮತ್ತೊಂದು ಸಿರಿಯ ಆಗಲಿದೆ

- ರವಿಶಂಕರ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ
ಯಮುನಾ ನದಿಯನ್ನು ಕೆಡಿಸಿದಷ್ಟು ಸುಲಭವಲ್ಲ ದೇಶವನ್ನು ಸಿರಿಯ ಮಾಡುವುದು.

--------------------

ನಾನು ಮುಖ್ಯಮಂತ್ರಿಯಾದರೆ ಎಂಜಿಆರ್ ಮಾದರಿ ಆಡಳಿತ ಕೊಡುವೆ -ರಜನಿಕಾಂತ್, ನಟ
ಅಂದರೆ ಎಂಜಿಆರ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆಸೆ.

---------------------

 ಕರಾವಳಿಯ ಭಯೋತ್ಪಾದಕ ಕಾರ್ಖಾನೆಗಳನ್ನು ಮುಚ್ಚಿಸುತ್ತೇವೆ

- ರಾಮಲಿಂಗಾರೆಡ್ಡಿ, ಸಚಿವ
  ಕರಾವಳಿಯ ಹೆಂಚಿನ ಕಾರ್ಖಾನೆಗಳನ್ನಷ್ಟೇ ಕಾಂಗ್ರೆಸ್‌ಗೆ ಮುಚ್ಚಿಸಲು ಸಾಧ್ಯವಾಗಿರುವುದು.

---------------------

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವ ತನಕ ಗೋರಕ್ಷಣೆ ಅಸಾಧ್ಯ
- ಮೇನಕಾ ಗಾಂಧಿ, ಕೇಂದ್ರ ಸಚಿವೆ
ರಾಜ್ಯಕ್ಕೀಗ ಜನರ ರಕ್ಷಣೆಯ ಅಗತ್ಯ ತುಂಬಾ ಇದೆ.

---------------------

ಕಾಂಗ್ರೆಸ್ ಸೇರುವವರ ಪಟ್ಟಿ ತುಂಬಾ ದೊಡ್ಡದಿದೆ

- ಸಿದ್ದರಾಮಯ್ಯ, ಮುಖ್ಯಮಂತ್ರಿ
ಅವರೆಲ್ಲ ಮಾಜಿ ಆರೆಸ್ಸೆಸ್ ಮತ್ತು ಬಿಜೆಪಿಯವರೇ ಇರಬೇಕು.

---------------------

  ಹತ್ಯಾ ಸಿದ್ಧಾಂತವನ್ನು ಬಿಜೆಪಿ ಯಾವತ್ತೂ ಒಪ್ಪುವುದಿಲ್ಲ 
- ಸಿ.ಟಿ.ರವಿ, ಶಾಸಕ
  ಹತ್ಯೆಯನ್ನಷ್ಟೇ ಒಪ್ಪುತ್ತದೆ ಅಂತೀರಾ?

---------------------

ತ್ರಿಪುರಾದಲ್ಲಿ ನಮ್ಮದು ಸೈದ್ಧಾಂತಿಕ ಜಯ

- ನರೇಂದ್ರ ಮೋದಿ, ಪ್ರಧಾನಿ
  ಹಣವೂ ಸಿದ್ಧಾಂತದ ಭಾಗವೇ?
---------------------

ರಾಜ್ಯ ಬಿಜೆಪಿ ನಾಯಕರು ಭೋಗಿಗಳು
- ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಆದರೀಗ ಸದ್ಯಕ್ಕೆ ಹಳಿ ತಪ್ಪಿದ ಬೋಗಿಗಳು.

---------------------

ಸಂವಿಧಾನ ಇರುವವರೆಗೂ ಕಾಂಗ್ರೆಸ್ ಮುಕ್ತ ಮಾಡುವುದು ಅಸಾಧ್ಯ
- ಪ್ರಿಯಾಂಕಾ ಖರ್ಗೆ, ಸಚಿವ
ಅದಕ್ಕಾಗಿಯೇ ಸಂವಿಧಾನದ ವಿರುದ್ಧ ಅವರು ಬಿದ್ದಿರುವುದು.

---------------------

ನನಗೊಂದು ಗಾಯವಾಗಿತ್ತು, ಅದೀಗ ಗುಣವಾಗಿದೆ

- ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿಜೆಪಿ ಮುಖಂಡ
ಹೊಸ ಗಾಯಗಳ ನಿರೀಕ್ಷೆಯೊಂದಿಗೆ.

---------------------

ಎಲ್ಲ ಪರದೆಗಳನ್ನು ಮೀರಿ, ಹರಿದು ಹೊರಗೆ ಬಂದರೆ ಯಶಸ್ಸು ಸಾಧ್ಯ
-ಉಮಾಶ್ರೀ, ಸಚಿವೆ

ಸಿನೆಮಾ ಪರದೆಗಳನ್ನು ಹರಿದು ಹೊರ ಬರಬೇಕೆ?

---------------------

ಜಿಲ್ಲೆಯಲ್ಲಿರುವ ಎರಡೂ ರೀತಿಯ ಮತೀಯವಾದಿಗಳನ್ನು ನಾವು ಒಪ್ಪುವುದಿಲ್ಲ

- ರಮಾನಾಥ ರೈ, ಸಚಿವ
  ಕಾಂಗ್ರೆಸ್‌ನೊಳಗಿದ್ದರೆ ಒಪ್ಪಿಗೆಯೇ?

---------------------

ಬಿಜೆಪಿ ಗೆದ್ದರೆ ಸಿದ್ದರಾಮಯ್ಯ ಸರಕಾರದ ಹಗರಣಗಳ ಬಗ್ಗೆ ಮರು ತನಿಖೆ

- ಜಗದೀಶ್ ಶೆಟ್ಟರ್, ಬಿಜೆಪಿ ಮುಖಂಡ
ಜೊತೆಗೆ ಯಡಿಯೂರಪ್ಪ ಅವರ ಹಗರಣಗಳನ್ನೂ ಸೇರಿಸಿಕೊಳ್ಳಿ.

---------------------

ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಕಲಿ ನಾಯಕ

- ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
ಸದ್ಯಕ್ಕೆ ಬಿಜೆಪಿಯೊಳಗೆ ನೀವು ನಾಯಕರಲ್ಲಿ ತುಂಬಾ ಹಿಂದುಳಿದ ಅಸಲಿ ಖಳನಾಯಕ.

---------------------

ವಿವಿಧ ರೀತಿಯ ಚಿಂತನೆ ಮತ್ತು ಸಿದ್ಧಾಂತಗಳು ಒಂದೇ ಗುರಿಯನ್ನು ಸಾಧಿಸಬಲ್ಲವು

- ಅಮಿತ್ ಶಾ, ಬಿಜೆಪಿ ಅಧ್ಯಕ್ಷ

ಆದರೆ ಜೊತೆಗೆ ಇವಿಎಂ ಯಂತ್ರ ಅತ್ಯಗತ್ಯ.

---------------------

  ಅಪನಂಬಿಕೆ-ಮೂಢನಂಬಿಕೆ ತೊಲಗಲಿ
- ಡಾ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ ಧರ್ಮಸ್ಥಳ
ಅದಕ್ಕಾಗಿ ಉನ್ನತ ಮಟ್ಟದ ತನಿಖೆ ನಡೆಯುವುದು ಅನಿವಾರ್ಯ.

---------------------

ಕಾಂಗ್ರೆಸ್‌ಗೆ ಬರುವವರಿಗೆ ಪಕ್ಷದ ಬಾಗಿಲು ಸದಾ ತೆರೆದಿದೆ
- ಡಾ.ಜಿ.ಪರಮೇಶ್ವರ್, ಕಾಂಗ್ರೆಸ್ ಅಧ್ಯಕ್ಷ
ಆದರೆ ಹೊರಹೋಗುವುದಕ್ಕಾಗಿ ತೆರೆದ ಬಾಗಿಲು ಎಂದು ಕೆಲವರು ತಪ್ಪು ತಿಳಿದಿದ್ದಾರೆ.

---------------------
ಭಾರತದ ಆನೆ ಹಾಗೂ ಚೀನಾದ ಡ್ರಾಗನ್ ಕಚ್ಚಾಡಬಾರದು, ಒಟ್ಟಿಗೆ ನೃತ್ಯ ಮಾಡಬೇಕು
ವಾಂಗ್ ಯಿ, ಚೀನಾದ ವಿದೇಶಾಂಗ ಸಚಿವ
ನರೇಂದ್ರ ಮೋದಿಯವರು ನೃತ್ಯ ಶಾಲೆಗೆ ಸೇರಿದ್ದಾರಂತೆ.

---------------------

ಹೆಣ್ಣು ದೇಶದ ಹೆಮ್ಮೆ

-ನರೇಂದ ಮೋದಿ, ಪ್ರಧಾನಿ
  ಮತ್ತೇಕೆ ಆ ಹೆಮ್ಮೆಯನ್ನು ತ್ಯಜಿಸಿದಿರಿ?

share
ಪಿ.ಎ.ರೈ
ಪಿ.ಎ.ರೈ
Next Story
X