ಮಡಿಕೇರಿ: ಸರಣಿ ಅಪಘಾತ: ಆಟೋ ಚಾಲಕನ ಕಾಲು ಮುರಿತ
![ಮಡಿಕೇರಿ: ಸರಣಿ ಅಪಘಾತ: ಆಟೋ ಚಾಲಕನ ಕಾಲು ಮುರಿತ ಮಡಿಕೇರಿ: ಸರಣಿ ಅಪಘಾತ: ಆಟೋ ಚಾಲಕನ ಕಾಲು ಮುರಿತ](https://www.varthabharati.in/sites/default/files/images/articles/2018/03/14/Z ACCIDENT 2.jpg)
ಮಡಿಕೇರಿ ಮಾ.14: ಕೊಡಗರಹಳ್ಳಿ ವ್ಯಾಪ್ತಿಯ ಕೂರ್ಗಳ್ಳಿ ಬಳಿ ಗೂಡ್ಸ್ ಆಟೋ, ಕಾರು ಹಾಗೂ ಬಸ್ ನಡುವೆ ಸರಣಿ ಅಪಘಾತ ನಡೆದಿದ್ದು, ಆಟೋ ಚಾಲಕನ ಕಾಲು ಮುರಿದಿದೆ.
ಸುಂಟಿಕೊಪ್ಪದಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್ (ಕೆ.ಎ.19ಎಫ್ 2988) ಕುಶಾಲನಗರದಿಂದ ಮಡಿಕೇರಿ ಕಡೆಗೆ ಆಗಮಿಸುತ್ತಿದ್ದ ಆಶೋಕ್ ಲೈಲ್ಯಾಂಡ್ ಗೂಡ್ಸ್ ಆಟೋ (ಕೆಎ09ಪಿ9497) ಹಾಗೂ ಕಾರಿನ ನಡುವೆ ಢಿಕ್ಕಿ ಸಂಭವಿಸಿದೆ. ಕಾರು ಮತ್ತು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಮ್ ಹಾಗೂ ಸಿಬ್ಬಂದಿಗಳು ತೆರಳಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story