Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸೋಷಿಯಲ್ ಮೀಡಿಯಾ
  3. ನನ್ನೆದೆ ಗೂಡೊಳಗೆ ಇಂಚಿಂಚೆ ಇಳಿದ ಪ್ರಿಯ...

ನನ್ನೆದೆ ಗೂಡೊಳಗೆ ಇಂಚಿಂಚೆ ಇಳಿದ ಪ್ರಿಯ ಆಮಿರ್

Belated ಜನಮ್ ದಿನ್ ಮುಬಾರಕ್!

ಕೆ.ಎಲ್. ಚಂದ್ರಶೇಖರ್ ಐಜೂರ್ಕೆ.ಎಲ್. ಚಂದ್ರಶೇಖರ್ ಐಜೂರ್15 March 2018 11:26 AM IST
share
ನನ್ನೆದೆ ಗೂಡೊಳಗೆ ಇಂಚಿಂಚೆ ಇಳಿದ ಪ್ರಿಯ ಆಮಿರ್

ನಿನ್ನ ಸಿನಿಮಾಗಳನ್ನು ಯಾವ ವಯಸ್ಸಿನಲ್ಲಿ ನೋಡಲು ಶುರು ಮಾಡಿದೆ ಅನ್ನುವುದು ನನಗಷ್ಟು ನೆನಪಿಲ್ಲ. ಆದರೆ ನೀನು ನನ್ನೆದೆ ಗೂಡೊಳಗೆ ಇಂಚಿಂಚೆ ಇಳಿದದ್ದು ಮಾತ್ರ ‘ರಂಗೀಲಾ’ದಿಂದ. ಅಲ್ಲಿಂದಿಲ್ಲಿಯ ತನಕ ನನ್ನ ಪಾಲಿಗೆ ನೀನೊಂದು ‘ಅನಿವಾರ್ಯ’.

ಸಿನಿಮಾ ಅನ್ನುವುದು ನಿರ್ದೇಶಕನ ಪ್ರಬಲ ಮಾಧ್ಯಮ ಎಂದು ಬಲವಾಗಿ ಅನ್ನಿಸತೊಡಗಿದ ದಿನಗಳಲ್ಲೇ ನನಗೆ ನಿನ್ನ ಮತ್ತು ಹಾಲಿವುಡ್’ನ ಟಾಮ್ ಹ್ಯಾಂಕ್ಸ್’ನ ಸಿನಿಮಾಗಳು ತೀವ್ರವಾಗಿ ಸೆಳೆಯಲು ಶುರು ಮಾಡಿದವು. ಎಷ್ಟೆಂದರೇ, ನಿಮ್ಮಿಬ್ಬರ ಸಿನಿಮಾಗಳ ನೋಡುತ್ತಾ ಮೈಮರೆತವನಿಗೆ ಅದರ ನಿರ್ದೇಶಕರ ಹೆಸರುಗಳೆ ನೆನಪಿಗೆ ಬರಲೊಲ್ಲವು. ಆ ಪರಿ ಸಿನಿಮಾದುದ್ದಕ್ಕೂ ಆವರಿಸಿಕೊಳ್ಳುವ ನಿಮ್ಮಿಬ್ಬರ ದೈತ್ಯ ಪ್ರತಿಭೆಯನ್ನು ಹತ್ತಾರು ಸಲ ಖುದ್ದು ಕಂಡು ಬೆಚ್ಚಿ ಬೆರಗಾಗಿದ್ದೇನೆ. 

ಸುಲಭದ ಲೆಕ್ಕಕ್ಕೆ ಸಿಗದಷ್ಟು ಸಲ ನೋಡಿರುವ ನಿನ್ನ ‘ತ್ರೀ ಈಡಿಯಟ್ಸ್’, ‘ಮನ್’, ಸರ್ಫ್ರ್’ರೋಶ್’, ‘ರಂಗೀಲಾ’ ‘ತಾರೇ ಝಮೀನ್ ಪರ್’, ‘ಲಗಾನ್’, ‘ಪೀಕೆ’, ‘ದಂಗಲ್’ ಮತ್ತು ಈಚಿನ ‘ಸೀಕ್ರೆಟ್ ಸೂಪರಸ್ಟಾರ್’ ನಿನ್ನನ್ನು ಜಗತ್ತಿನ ಯಾವುದೇ ಸಾರ್ವಕಾಲಿಕ ಶ್ರೇಷ್ಠ ನಟರ ಸಾಲಿನಲ್ಲಿ ನಿಲ್ಲಿಸಬಲ್ಲವು. ಅನೇಕ ಸಲ ನಿನ್ನ ‘ತಾರೇ ಝಮೀನ್ ಪರ್’, ‘ಲಗಾನ್’, ‘ತ್ರೀ ಈಡಿಯಟ್ಸ್’, ‘ದಂಗಲ್’ ಸಿನಿಮಾಗಳ ನಿನ್ನ ಪಾತ್ರಗಳು ನನ್ನ ತರಗತಿಯ ಅಧಿಕೃತ ಪಠ್ಯಗಳಾಗಿವೆ. ಗೆಳೆಯರೊಂದಿಗಿನ ಚರ್ಚೆಯಲ್ಲಿ ನೀನು ಮತ್ತು ನಿನ್ನ ಸಿನಿಮಾ ಹತ್ತಾರು ಸಂಪುಟಗಳಿಗಾಗುವಷ್ಟು ವಸ್ತುವಾಗಿದೆ. 

‘ಭರವಸೆ’ ಎಂಬ ಪದಕ್ಕೆ ಹೊಸ ಅರ್ಥ ತಂದುಕೊಟ್ಟವನು ನೀನು. ಮನೆಗೊಬ್ಬ ಅಣ್ಣನಿದ್ದಂತೆ ನಿನ್ನ ಸಿನಿಮಾಗಳು ನನ್ನಂತವರನ್ನು ಸದಾ ಪೊರೆಯುತ್ತಲೇ ಇರುತ್ತವೆ. ಧೋ ಸುರಿವ ಮಳೆಯಲ್ಲಿ, ದೊಡ್ಡ ಮೈದಾನದಲ್ಲಿ ನಿಲ್ಲಲು ತಾವಿಲ್ಲದೆ ಇಡೀ ದೇಹ ತೊಯ್ದು ತೊಪ್ಪೆಯಾಗುವ ಮುನ್ನ ದೂರದಲ್ಲಿ ಕಂಡ ಒಂಟಿ ಅರಳಿಮರದಂತವನು ನೀನು. ನಿನ್ನದೊಂದು ದಂಗಲ್, ಲಗಾನ್, ‘ತ್ರೀ ಈಡಿಯಟ್ಸ್’, ತಾರೇ ಝಮೀನ್ ಪರ್… ಕೊಡುವಷ್ಟು ಆತ್ಮವಿಶ್ವಾಸವನ್ನು ಈಗ ದುಡ್ಡಿಗೆ ಆಧ್ಯಾತ್ಮವನ್ನು, ಧ್ಯಾನವನ್ನು ಮಾರಲು ಹೊರಟಿರುವ ಜಗತ್ತಿನ ಯಾವ ಸಂತನು ಕೊಡಲಾರ.

ಈ ಬದುಕು ತೀರಿಹೋಗುವ ಮುನ್ನ ಒಂದೇ ಒಂದು ಸಲ ಖುದ್ದು ಮುಟ್ಟಿ ನೋಡಿ ಮಾತಾಡಿಸಲೇಬೇಕೆಂದು ಪಟ್ಟಿ ಮಾಡಿಕೊಂಡಿರುವ ಈ ಜಗತ್ತಿನ ಕೆಲವೇ ಕೆಲವು ನಟರಲ್ಲಿ ನೀನು ಒಬ್ಬ. 
ಬದುಕು ಮುಗಿದುಹೋಗಬಾರದಷ್ಟೇ. 

ಇಂತಿ ನಿನ್ನವನು 
ಕೆ.ಎಲ್. ಚಂದ್ರಶೇಖರ್ ಐಜೂರ್

share
ಕೆ.ಎಲ್. ಚಂದ್ರಶೇಖರ್ ಐಜೂರ್
ಕೆ.ಎಲ್. ಚಂದ್ರಶೇಖರ್ ಐಜೂರ್
Next Story
X