ಮಡಿಕೇರಿ: ಮೂರು ಕಾಡಾನೆಗಳ ಸಾವು
![ಮಡಿಕೇರಿ: ಮೂರು ಕಾಡಾನೆಗಳ ಸಾವು ಮಡಿಕೇರಿ: ಮೂರು ಕಾಡಾನೆಗಳ ಸಾವು](https://www.varthabharati.in/sites/default/files/images/articles/2018/03/15/Z ELEPHENT 2.jpg)
ಮಡಿಕೇರಿ ಮಾ.15: ಆಹಾರ ಅರಸಿ ನಾಡಿಗೆ ಬಂದ ಮೂರು ಕಾಡಾನೆಗಳು ಸಾವನ್ನಪ್ಪಿರುವ ಘಟನೆ ನಾಗರಹೊಳೆ ಅಭಯಾರಣ್ಯ ಪ್ರದೇಶದ ಬಳಿಯ ಕಾಫಿ ತೋಟವೊಂದರಲ್ಲಿ ನಡೆದಿದೆ.
40 ವರ್ಷದ ಹೆಣ್ಣಾನೆ ಹಾಗೂ 6 ತಿಂಗಳ ಮರಿಯಾನೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರೆ, ಮತ್ತೊಂದು ಆನೆ ಕೆರೆಯಲ್ಲಿ ಬಿದ್ದು ಮೃತಪಟ್ಟಿದೆ.
ವಿರಾಜಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆ ನಂತರವೂ ಮರಿಯಾನೆ ಮತ್ತು ಹೆಣ್ಣಾನೆಯ ಸಾವಿಗೆ ಕಾರಣ ತಿಳಿದು ಬಂದಿಲ್ಲ.
ಹೃದಯಾಘಾತದಿಂದ ಹೆಣ್ಣಾನೆ ಕುಸಿದು ಬೀಳುವ ಸಂದರ್ಭ ಮರಿಯಾನೆ ಸಿಲುಕಿ ಸಾವನ್ನಪ್ಪಿರಬಹುದೆಂದು ಅಂದಾಜಿಸಲಾಗಿದೆ. ನೀರು ಕುಡಿಯಲು ಕೆರೆಗಿಳಿದ ಮತ್ತೊಂದು ಆನೆ ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿರುವುದು ಧೃಡಪಟ್ಟಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಚ್ಚಿನ ತನಿಖೆಗಾಗಿ ಮೃತ ಆನೆಗಳ ಅಂಗಾಂಗಗಳನ್ನು ಲ್ಯಾಬ್ ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story