ಮೈಸೂರು: ಫುಟ್ಪಾತ್ ಕಲ್ಲಿಗೆ ತಲೆ ಚಚ್ಚಿ ಮೃತಪಟ್ಟ ಮಾನಸಿಕ ಅಸ್ವಸ್ಥ
![ಮೈಸೂರು: ಫುಟ್ಪಾತ್ ಕಲ್ಲಿಗೆ ತಲೆ ಚಚ್ಚಿ ಮೃತಪಟ್ಟ ಮಾನಸಿಕ ಅಸ್ವಸ್ಥ ಮೈಸೂರು: ಫುಟ್ಪಾತ್ ಕಲ್ಲಿಗೆ ತಲೆ ಚಚ್ಚಿ ಮೃತಪಟ್ಟ ಮಾನಸಿಕ ಅಸ್ವಸ್ಥ](https://www.varthabharati.in/sites/default/files/images/articles/2018/03/15/suicide.jpg)
ಮೈಸೂರು,ಮಾ.15: ಸಾವಿನ ಬಗ್ಗೆ ಕನವರಿಸುತ್ತಿದ್ದ ಮಾನಸಿಕ ಅಸ್ವಸ್ಥನೋರ್ವ ಫುಟ್ಪಾತ್ಗೆ ತಲೆ ಚಚ್ಚಿಕೊಂಡು ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.
ಒಂಟಿಕೊಪ್ಪಲಿನ ನಿವಾಸಿಯಾಗಿದ್ದ ಸೇಠು ಸಾವನಿ ಕನವರಿಕೆಯಲ್ಲಿಯೇ ಮೃತಪಟ್ಟ್ ವ್ಯಕ್ತಿ. ಈತ ಮಾನಸಿಕವಾಗಿ ಅಸ್ವಸ್ಥನಾಗಿದ್ದು ಬೀದಿಯಲ್ಲಿ ತಿರುಗಾಡುವಾಗ ನಾನು ಸಾಯಬೇಕು ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಎನ್ನಲಾಗಿದೆ.
ಒಂಟಿಕೊಪ್ಪಲಿನ ಶ್ರೀರಾಮ ಮಂದಿರದ ಸಮೀಪದ ಫುಟ್ಪಾತ್ನಲ್ಲಿ ಈತ ಕಲ್ಲಿಗೆ ತಲೆ ಚಚ್ಚಿಕೊಂಡು ಬಿದ್ದಿದ್ದಾನೆ. ಇದನ್ನು ಗಮನಿಸಿದ ಸಾರ್ವಜನಿಕರು ವಿವಿ ಪುರಂ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಪೊಲಿಸರು ಆತನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.
Next Story