ಪೆರಿಯಾರ್, ಎಂಜಿಆರ್ ಮೂರ್ತಿಗಳಿಗೆ ಕೇಸರಿ ಬಟ್ಟೆ ಸುತ್ತಿದ ದುಷ್ಕರ್ಮಿಗಳು
ಚೆನ್ನೈ, ಮಾ.16: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸಿ.ಎನ್.ಅಣ್ಣಾದುರೈ ಹಾಗು ಎಂ.ಜಿ.ರಾಮಚಂದ್ರನ್ ಮತ್ತು ದ್ರಾವಿಡ ಕಳಗಂ ಸ್ಥಾಪಕ ಪೆರಿಯಾರ್ ಮೂರ್ತಿಗಳಿಗೆ ದುಷ್ಕರ್ಮಿಗಳು ಕೇಸರಿ ಬಟ್ಟೆ ಸುತ್ತಿರುವ ಘಟನೆ ಇಲ್ಲಿನ ನಮಕ್ಕಲ್ ನಲ್ಲಿ ನಡೆದಿದೆ.
ನಂತರ ಕೇಸರಿ ಬಟ್ಟೆಯನ್ನು ತೆಗೆಯಲಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ತ್ರಿಪುರಾದಲ್ಲಿ ವ್ಲಾದಿಮರ್ ಲೆನಿನ್ ಪ್ರತಿಮೆಯನ್ನು ಉರುಳಿಸಿದ್ದ ನಂತರ ದೇಶಾದ್ಯಂತ ಹಲವೆಡೆಗಳಲ್ಲಿ ಇಂತಹ ಘಟನೆಗಳು ನಡೆದಿತ್ತು. ಬಿಜೆಪಿ ನಾಯಕ ಎಚ್. ರಾಜಾರ ಫೇಸ್ ಬುಕ್ ಪೋಸ್ಟ್ ಬಳಿಕ ದುಷ್ಕರ್ಮಿಗಳು ಪೆರಿಯಾರ್ ಪ್ರತಿಮೆಯನ್ನು ವಿರೂಪಗೊಳಿಸಿದ್ದು. ಈ ಘಟನೆ ವೆಲ್ಲೂರ್ ನಲ್ಲಿ ನಡೆದಿತ್ತು.
Next Story