ಬಾಗೇಪಲ್ಲಿ: ಪ್ರಗತಿ ಪರಿಶೀಲನಾ ಸಭೆ
![ಬಾಗೇಪಲ್ಲಿ: ಪ್ರಗತಿ ಪರಿಶೀಲನಾ ಸಭೆ ಬಾಗೇಪಲ್ಲಿ: ಪ್ರಗತಿ ಪರಿಶೀಲನಾ ಸಭೆ](https://www.varthabharati.in/sites/default/files/images/articles/2018/03/16/bgpphoto-1.jpg)
ಬಾಗೇಪಲ್ಲಿ,ಮಾ.16: ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಭೂ ಅಭಿವೃದ್ದಿ ಸೇನಾ ವತಿಯಿಂದ ನಿರ್ಮಾಣಗೊಂಡಿರುವ ಶುದ್ದ ಕುಡಿಯುವ ನೀರಿನ ಘಟಕಗಳು ಕೆಲಸ ಮಾಡುತ್ತಿಲ್ಲ. ಇವುಗಳ ನಿರ್ವಹಣೆ ಸರಿಯಾಗಿ ಕಾಣುತ್ತಿಲ್ಲ, ನಿವೇನು ಮಾಡುತ್ತಿದ್ದೀರಿ ಎಂದು ತಾ.ಪಂ.ಅಧ್ಯಕ್ಷ ಕೆ.ಆರ್.ನರೇಂದ್ರ ಬಾಬು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ರಾಮಲಿಂಗಾರೆಡ್ಡಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ತಾ.ಪಂ.ಅಧ್ಯಕ್ಷ ಕೆ.ಆರ್.ನರೇಂದ್ರಬಾಬು ಆವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ತಾಲೂಕಿನ ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ರಾಮಲಿಂಗಾರೆಡ್ಡಿಯನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಸಿಂಗನಕುದರೆ, ಬತ್ತಲವಾರಪಲ್ಲಿ, ಮುಂತಾದ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ, ಅಲ್ಲಿ ಖಾಸಗಿ ಕೊಳವೆಬಾವಿಗಳಲ್ಲಿ ಗ್ರಾಮಸ್ತರಿಗೆ ನೀರಿ ಸರಬರಾಜು ಮಾಡಲಾಗುತ್ತಿದೆ ಎಂದರು.
ನಂತರ ಅಧ್ಯಕ್ಷರು ತಾಲೂಕಿನ ಬಹುತೇಕ ಕಡೆಗಳಲ್ಲಿ ಆರ್.ಓ.ಪ್ಲಾಂಟುಗಳಲ್ಲಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿತ್ತಿಲ್ಲ, ಅಲ್ಲಲ್ಲಿ ರಿಫೇರಿಯಿಂದ ಕೂಡಿವೆ. ನೀವು ಅಲ್ಲಿಗೆ ಹೋಗಿಲ್ಲವೇ ? ಏನು ಮಾಡುತ್ತಿದ್ದೀರಾ ಎಂದು ಅಸಮಾದಾನ ವ್ಯಕ್ತಪಡಿಸಿ, ಈಗ ಬೇಸಿಗೆ ಕಾಲ ಆರಂಭವಾಗಿದೆ. ಯಾವುದೇ ಕಾರಣಕ್ಕೂ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ.ಮಂಜುನಾಥ, 10ನೇ ತರಗತಿಯ ತಾಲೂಕಿನ ಆರು ಪರಿಕ್ಷಾ ಕೇಂದ್ರಗಳ ಬಳಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿ ಪರೀಕ್ಷಾ ಕೇಂದ್ರಗಳು ಯಾವುದೇ ಮೂಲಭೂತ ಸೌಲಭ್ಯಗಳ ಕೊರತೆಯಾಗದಂತೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ. ಈ ಹಿಂದೆಗಿಂತ ಈ ವರ್ಷದಲ್ಲಿ ಫಲಿತಾಂಶ ಪ್ರಮಾಣ ಹೆಚ್ಚಿಸಿ ಶಿಕ್ಷಣ ಕ್ರಾಂತಿಯಲ್ಲಿ ಹೊಸ ಹೆಜ್ಜೆ ಹಾಕಬೇಕಾಗಿದೆ ಎಂದು ಶಿಕ್ಷಣ ಇಲಾಖೆಯ ಬಿಆರ್ಸಿ ಬೈರಡ್ಡಿ ಅವರಿಗೆ ಸೂಚಿಸಿದರು.
ನಿಮ್ಮ ಇಲಾಖೆಯಿಂದ ಸಿಕ್ಕ ಸಿಕ್ಕವರಿಗೆ ಕೋರೆ ನಡೆಸಲು ಅನುಮತಿ ನೀಡಿ ಆ ಕೋರೆ ಮಾಲಿಕರು ನಡೆಸುತ್ತಿರುವ ಅಕ್ರಮ ದಂದೆಯಿಂದ ತಾಲೂಕಿನ ಬಹುತೇಕ ರಸ್ತೆಗಳನ್ನು ಹಾಳು ಮಾಡುತ್ತಿದ್ದಾರೆ. ರಸ್ತೆಗಳಲ್ಲಿ ಬೃಹತ್ ಟ್ರಕ್ಗಳಲ್ಲಿ ದೊಡ್ಡ ದೊಡ್ಡ ದಿಮ್ಮಿಗಳನ್ನು ನಗರ ಪ್ರದೇಶಗಳಿಗೆ ಸಾಗಾಣೆ ಮಾಡಲಾಗುತ್ತಿದೆ. ಇದರಿಂದ ರಸ್ತೆಗಳು ಹಾಳಾಗುವುದರ ಜೊತೆಗೆ ಮೋರಿಗಳು ಕುಸಿಯುತ್ತಿವೆ. ನಿಮ್ಮ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ತಾಲೂಕಿನ ಪರಿಸರ ಹಾಳಾಗಿತ್ತಿದೆ ಎಂದು ಅದ್ಯಕ್ಷರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ದ ಅಕ್ರೋಶ ವ್ಯಕ್ತ ಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಲಾಖೆಯ ಅಧಿಕಾರಿ ಆಶಾ, ತಾಲೂಕಿನಲಿ ಸರ್ಕಾರದಿಂದ 11 ಕಡೆ ಅನುಮತಿ ನೀಡಿದ್ದು, ಆ ಸ್ಥಳಗಳಲ್ಲಿ ಮಾತ್ರ ಗಣಿಗಾರಿಕೆ ನಡೆಯುತ್ತಿದೆ. ಅದು ಬಿಟ್ಟರೆ ಎಲ್ಲಿಯೂ ನಡೆಯುತ್ತಿಲ್ಲ ಎಂದಾಗ, ಅಧ್ಯಕ್ಷರು 'ನಿಮ್ಮ ಕೆಲಸ ಪ್ರಾಮಾಣಿಕವಾಗಿ ನಿರ್ವಹಿಸಿದರೆ ಇಷ್ಟೊಂದು ಸಮಸ್ಯೆಗಳು ಬರುವುದಿಲ್ಲ. ವಿವಿಧ ಇಲಾಖೆಗಳ ಅನುದಾನ ಯಾವುದೇ ಕಾರಣಕ್ಕೂ ವಾಪಸ್ ಹೋಗಬರದು. ಒಂದು ವೇಳೆ ಅನುದಾನ ವಾಪಸ್ ಹೋದರೆ ಅದಕ್ಕೆ ನೀಮ್ಮನ್ನೇ ಹೊಣೆಗಾರರಾನ್ನಾಗಿ ಮಾಡಲಾಗುತ್ತದೆ; ಎಂದರು.
ಈ ಸಂದರ್ಭದಲ್ಲಿ ತಾ.ಪಂ ಇಓ ಕೆ.ವಿ.ರೆಡ್ಡಪ್ಪ, ಉಪಾಧ್ಯಕ್ಷೆ ಸರಸ್ಪತಮ್ಮ,ಕೃಷಿ ಇಲಾಖೆಯ ಸಹಾಯ ನಿದೇರ್ಶಕ ಚಂದ್ರಶೇಖರ್, ತಾಲೂಕು ಮಟ್ಟದ ಅಧಿಕಾರಿಗಳಾದ ರೆಹಮಾನ್, ರವೀಂದ್ರ ,ಅಮರನಾಥ್, ಶೇಷಾಧ್ರಿ, ಗೋವಿಂದರಾಜು, ರಫೀಕ್ ಮತ್ತಿತರರು ಹಾಜರಿದ್ದರು.