ವೃದ್ಧರ ತಲೆ ಕಡಿದ ಪ್ರಕರಣ: ಭೂ ವಿವಾದದ ದ್ವೇಷದ ಕೃತ್ಯ ಎಂದ ಸುಶೀಲ್ ಕುಮಾರ್ ಮೋದಿ
ಹೊಸದಿಲ್ಲಿ, ಮಾ.17: ಬಿಹಾರದ ದರ್ಭಾಂಗದಲ್ಲಿ ದುಷ್ಕರ್ಮಿಗಳ ತಂಡವೊಂದು ವೃದ್ಧರೊಬ್ಬರ ತಲೆ ಕಡಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ಭೂ ವಿವಾದಕ್ಕೆ ಸಂಬಂಧಿಸಿ ಈ ಹತ್ಯೆಗೈಯಲಾಗಿದೆ. ನಗರದ ವೃತ್ತಕ್ಕೆ ನರೇಂದ್ರ ಮೋದಿ ಹೆಸರಿಟ್ಟದ್ದರಿಂದ ತಲೆ ಕಡಿಯಲಾಗಿದೆ ಎನ್ನುವ ಸುದ್ದಿ ಸುಳ್ಳು ಎಂದಿದ್ದಾರೆ.
“ಮೋದಿ ಚೌಕ್ ಎಂದು ನಾಮಕರಣ ಮಾಡಿದ್ದಕ್ಕಾಗಿ ಕೊಲೆ ನಡೆದಿದೆ ಎನ್ನುವುದು ಶುದ್ಧ ಸುಳ್ಳು. ಭೂಮಿಗೆ ಸಂಬಂಧಿಸಿದ ಜಗಳ ಇದಾಗಿತ್ತು” ಎಂದವರು ಹೇಳಿದ್ದಾರೆ.
ಸುಮಾರು 40ರಿಂದ 50 ಮಂದಿಯ ತಂಡ ಬಿಜೆಪಿ ಕಾರ್ಯಕರ್ತ ರಾಮಚಂದ್ರ ಯಾದವ್ ಎಂಬವರ ಮೇಲೆ ದಾಳಿ ನಡೆಸಿತ್ತು. ವೃತ್ತಕ್ಕೆ ಮೋದಿ ಹೆಸರಿಟ್ಟಿದ್ದರಿಂದ ತನ್ನ ತಂದೆಯನ್ನು ಹತ್ಯೆಗೈಯಲಾಗಿದೆ ಎಂದು ಅವರ ಪುತ್ರ ತೇಜ್ ನಾರಾಯಣ್ ಆರೋಪಿಸಿದ್ದರು.
Next Story