Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ವಿಜ್ಞಾನದಲ್ಲಿನ ಒಳ್ಳೆಯ ಗುಣಗಳನ್ನು...

ವಿಜ್ಞಾನದಲ್ಲಿನ ಒಳ್ಳೆಯ ಗುಣಗಳನ್ನು ಆರಿಸಿಕೊಳ್ಳಬೇಕು: ವಿಜ್ಞಾನಿ ಸಿ.ಆರ್.ಸತ್ಯ

ವಾರ್ತಾಭಾರತಿವಾರ್ತಾಭಾರತಿ19 March 2018 10:13 PM IST
share
ವಿಜ್ಞಾನದಲ್ಲಿನ ಒಳ್ಳೆಯ ಗುಣಗಳನ್ನು ಆರಿಸಿಕೊಳ್ಳಬೇಕು: ವಿಜ್ಞಾನಿ ಸಿ.ಆರ್.ಸತ್ಯ

ಮೈಸೂರು,ಮಾ.19: ವಿಜ್ಞಾನ ಇಂದು ನಾಗಾಲೋಟದಲ್ಲಿ ಓಡುತ್ತಿದ್ದು, ಅದು ಸರಿಯಲ್ಲ. ಏಕೆಂದರೆ ಅದರಿಂದ ಕೆಡುಕೇ ಹೆಚ್ಚು ಎಂಬುದು ಕೆಲವರ ವಾದ. ಆದರೆ ಅದಕ್ಕೆ ಕಡಿವಾಣ ಹಾಕುವುದು ಸರಿಯಲ್ಲ. ಎಲ್ಲದಕ್ಕೂ ಒಳ್ಳೆಯ ಮತ್ತು ಕೆಟ್ಟ ಮುಖಗಳಿರುವಂತೆ ವಿಜ್ಞಾನಕ್ಕೂಇದೆ. ಅದರಲ್ಲಿನ ಒಳ್ಳೆಯ ಗುಣಗಳನ್ನು  ಆರಿಸಿಕೊಳ್ಳಬೇಕು ಎಂದು ಇಸ್ರೋನ ವಿಶ್ರಾಂತ ವಿಜ್ಞಾನಿ ಸಿ.ಆರ್.ಸತ್ಯ ಅಭಿಪ್ರಾಯಪಟ್ಟರು.

ನಿನ್ನೆ ಮೈಸೂರ್ ಸೈನ್ಸ್ ಫೌಂಡೇಷನ್ ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಹಮ್ಮಿಕೊಂಡಿದ್ದ 60ನೇ ತಿಂಗಳ ವಿಜ್ಞಾನ ಉಪನ್ಯಾಸ ಮಾಲಿಕೆಯಲ್ಲಿ ‘ಭವಿಷ್ಯದಲ್ಲಿ ಮಾನವ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. 

ಮನುಷ್ಯ ಭೂಮಿಯ ಮೇಲೆ ಉಗಮವಾಗಿ ಎಂದು ಬೆಂಕಿಯನ್ನುಕಂಡು ಹಿಡಿದನೋ ಅಲ್ಲಿಂದಲೇ ಅವನಿಗೆ ಸಂಶೋಧನಾ ಪ್ರವೃತ್ತಿ ಬೆಳೆದಿದೆ. ಅದನ್ನು ತಡೆಯಲು ಸಾಧ್ಯವಿಲ್ಲ. ಈ ಸಂಶೋಧನಾ ಮನೋಭಾವವೇ ವಿಜ್ಞಾನದ ಬೆಳವಣಿಗೆಗೆ ಸಾಧ್ಯವಾಗಿ ಇಂದು ಅದರ ವೇಗ ಹೇಗಿದೆಯೆಂದರೆ ಯಾರಿಂದಲೂ ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಬೆಂಕಿಯ ನಂತರ, ಮನೆ ನಿರ್ಮಾಣ, ಚಕ್ರದ ಆವಿಷ್ಕಾರ, ವಾಹನಗಳು, ಭಾಷೆಗಳ ಉಗಮ, ನಾಗರೀಕತೆ, ವಿದ್ಯುತ್, ರೇಡಿಯೋ, ಟಿ.ವಿ ಹೀಗೆ ಒಂದರ ಹಿಂದೆ ಒಂದು ನಿಧಾನಗತಿಯಲ್ಲಿ ವಿಜ್ಞಾನ ಬೆಳೆಯುತ್ತಾ ಬಂತು. ಆದರೆ ಇಂದು ತಂತ್ರಜ್ಞಾನ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಇಂದು ಖರೀದಿಸುವ ಎಲೆಕ್ಟ್ರಾನಿಕ್ ಉಪಕರಣಗಳು ನಾಳೆಗೆ ಹಳೆಯ ತಂತ್ರಜ್ಞಾನದ ವಸ್ತುಗಳಾಗಿ ಬಿಡುತ್ತಿವೆ. ತಂತ್ರಜ್ಞಾನದ ಬೆಳವಣಿಗೆ ಮನುಕುಲದ ಒಳಿತಿಗಾಗೇ ಮಾಡಲಾಯಿತು. ರೇಡಿಯೋ, ಟಿ.ವಿ ಮತ್ತು ಅಂತರ್ಜಾಲಗಳಿಂದಾಗಿ ವಿಶ್ವದಲ್ಲಿನ ಮಾಹಿತಿಗಳನ್ನು ಮನೆಯಲ್ಲೇ ಕುಳಿತು ಪಡೆದುಕೊಳ್ಳುವಂತಾಯಿತು. ಮಿಕ್ಸಿ, ವಾಷಿಂಗ್ ಮೆಷಿನ್, ಪ್ರಿಡ್ಜ್, ಫ್ಯಾನ್ ಗಳು ಮನೆಯಲ್ಲಿನ ಕೆಲಸಗಳನ್ನು ಕಡಿಮೆಮಾಡಿದವು. ಕೈಗಾರಿಕಾ ಯಂತ್ರಗಳ ಆವಿಷ್ಕಾರ ಅನೇಕ ಉತ್ಪಾದನೆಗಳನ್ನು ಸುಲಭವಾಗಿ ಮಾಡಲು ನೆರವಾದವು. ಹೀಗೆ ತಂತ್ರಜ್ಞಾನ ಮನುಷ್ಯನ ಕೆಲಸ ಕಡಿಮೆ ಮಾಡುವುದಲ್ಲದೇ, ವೇಗವಾಗಿ ಮಾಡಲು ಸಹಕರಿಸಿತು ಮತ್ತು ಹೊಸ ಹೊಸ ಯಂತ್ರಗಳನ್ನು ಕೊಡುಗೆಯಾಗಿ ನೀಡಿತು ಎಂದು ಹೇಳಿದರು.

ತಂತ್ರಜ್ಞಾನ ಬೆಳೆಯಿತು ಹತ್ತುಜನ ಮಾಡುವ ಕೆಲಸವನ್ನು ಒಂದೇ ಯಂತ್ರ ಮಾಡಿತು, ಮನುಷ್ಯನ ಕೆಲಸ ಕಸಿದುಕೊಂಡಿತು. ಈಗಂತೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಬಳಸಿ ತಯಾರಿಸಿದ ರೋಬಾಟ್ ಗಳು ಮನುಷ್ಯ ಮಾಡುವ ಎಲ್ಲಾ ಕೆಲಸವನ್ನು ಮಾಡುತ್ತಿವೆ. ಈಗಾಗಲೇ ಅಮೇರಿಕಾ, ಚೈನಾ ದಂತಹ ರಾಷ್ಟ್ರಗಳಲ್ಲಿ ಕಾರು, ಸ್ಕೂಟರ್ ಗಳ ತಯಾರಿಕೆಗೂ ಕೂಡ ರೋಬಾಟ್ ಗಳನ್ನು ಬಳಸಲಾಗುತ್ತಿದೆ. ಈ ರೀತಿಯಾಗಿ ವೈದ್ಯಕೀಯ, ರಕ್ಷಣಾ, ಕಾರ್ಖಾನೆ ಮತ್ತು ಸಂಶೋಧನಾ ಇತರೆ ಎಲ್ಲಾ ಕ್ಷೇತ್ರಗಳಲ್ಲೂ ಇಂದು ರೋಬಾಟ್ ಗಳು ಕೆಲಸ ನಿರ್ವಹಿಸುತ್ತಿವೆ. ಇದೇ ಕಾರಣಕ್ಕೆ ಮುಂದೊಂದು ದಿನ ಮನುಷ್ಯನ ದೊಡ್ಡ ವೈರಿಯಾಗಿ ಯಂತ್ರಗಳು ನಿಂತರೆ ಆಶ್ಚರ್ಯವಿಲ್ಲ ಎಂದರು.

ತಂತ್ರಜ್ಞಾನ ಮನುಷ್ಯನನ್ನು ಭೂಮಿಯಿಂದ ಆಚೆ ನೋಡುವಂತೆ ಮಾಡಿದೆ. ಈಗಾಗಲೇ ಭೂಮಿಯನ್ನು ಹಾಳುಮಾಡಿರುವ ಮಾನವ ಮಂಗಳನಲ್ಲಿ ಮನೆ ಮಾಡಲು ಹೊರಟಿದ್ದಾನೆ. ನಾಸ ಈಗಾಗಲೇ ಮಂಗಳನಲ್ಲಿ ರೋವರ್ ಇಳಿಸಿ ಸಂಶೋಧನೆ ನಡೆಸಿದೆ ಮತ್ತು 2020 ಕ್ಕೆ ಮಾನವನನ್ನು ಕಳುಹಿಸಲು ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಭಾರತವೂ ಮಂಗಳನ ಅಧ್ಯಯನಕ್ಕಾಗಿ ಮಾಮ್ ಉಪಗ್ರಹ ಉಡಾವಣೆ ಮಾಡಿದೆ. ಇರುವ ಸುಂದರ ಭೂಮಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೇ ಇನ್ನೊಂದು ಗ್ರಹದತ್ತ ಓಡುತ್ತಿರುವುದು ವಿಪರ್ಯಾಸವೇ ಸರಿ ಎಂದರು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X