Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬಾಯಾರಿರುವ ಉಡುಪಿಗೆ ವಾರಾಹಿಯಿಂದ ‘ಪವರ್...

ಬಾಯಾರಿರುವ ಉಡುಪಿಗೆ ವಾರಾಹಿಯಿಂದ ‘ಪವರ್ ಶಾಕ್’

ಕಂತು 1

ವಾರ್ತಾಭಾರತಿವಾರ್ತಾಭಾರತಿ19 March 2018 10:35 PM IST
share
ಬಾಯಾರಿರುವ ಉಡುಪಿಗೆ ವಾರಾಹಿಯಿಂದ ‘ಪವರ್ ಶಾಕ್’

ಉಡುಪಿ ನಗರಸಭೆಯ ವ್ಯಾಪ್ತಿಯಲ್ಲಿ ಬೇಸಿಗೆಯ ಹೊತ್ತಿಗೆ ನೀರಿನ ಕೊರತೆ ತೀವ್ರವಾಗಿ ಕಾಡುತ್ತಿದೆ. ಉಡುಪಿ ನಗರಕ್ಕೆ ನೀರುಣಿಸುವ ಸ್ವರ್ಣೆಯ ಒಡಲಲ್ಲಿರುವ ನೀರು, ಬೆಳೆಯುತ್ತಿರುವ ಜಿಲ್ಲಾಕೇಂದ್ರ ಉಡುಪಿಯ ಗಾತ್ರಕ್ಕೆ ಏನೇನೂ ಸಾಲದು. ಉಡುಪಿಗೆ ಕಡಿಮೆ ಬಿದ್ದಿರುವ ನೀರನ್ನು ಆಸುಪಾಸಿನಲ್ಲೇ ಇರುವ ಸೀತಾ ಅಥವಾ ಮಡಿಸಾಲು ನದಿಗಳ ಬದಲು ದೂರದ ವಾರಾಹಿಯಿಂದಲೇ ತರಬೇಕೆಂಬ ಹಠದ ಹಿಂದಿರುವ ವಾಸ್ತವಗಳು ಯಾರನ್ನೂ ಬೆಚ್ಚಿಬೀಳಿಸಬಲ್ಲವು. ಖಾಸಗಿ ಜಲ ವಿದ್ಯುತ್ ಉತ್ಪಾದಕ ಲಾಬಿಗೆ ವರ್ಷಪೂರ್ತಿ ವಿದ್ಯುತ್ ಉತ್ಪಾದನೆ ಮಾಡಿ ಲಾಭ ಗಳಿಸಿಕೊಳ್ಳಲು ಸರಕಾರದ ವತಿಯಿಂದ ಅಂದಾಜು 122.50 ಕೋಟಿ ರೂಪಾಯಿ ಸಾರ್ವಜನಿಕ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಯೋಜನೆ ಇದಾಗಿದೆ ಎನ್ನುವುದು ಜನಸಾಮಾನ್ಯರ ಆರೋಪ, ಮೊನ್ನೆ ಜನವರಿ 8ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಯೋಜನೆಗೆ ಅಡಿಗಲ್ಲು ಹಾಕಿದ್ದಾರೆ. ಒಟ್ಟು 300.27 ಕೋಟಿ ರೂ. ವೆಚ್ಚದ ಈ ಮೂರು ಹಂತಗಳ ಯೋಜನೆಯ ಕಾಮಗಾರಿಗಳು ಈಗ ಟೆಂಡರಿನ ವಿವಿಧ ಹಂತಗಳಲ್ಲಿವೆ.

ಕೇಂದ್ರ ಸರಕಾರದ ನಗರಗಳ ಪುನರುಜ್ಜೀವನ ಮತ್ತು ಪರಿವರ್ತನೆಗೆ ಅಟಲ್ ಮಿಷನ್ ಯೋಜನೆಯಡಿ, ಏಶ್ಯನ್ ಡೆವಲಪ್ ಮೆಂಟ್ ಬ್ಯಾಂಕಿನ ನೆರವಿನೊಂದಿಗೆ ನಡೆದಿರುವ ಈ ಕಾಮಗಾರಿಯನ್ನು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿರ್ವಹಿಸುತ್ತಿದೆ. ಹಾಲಿ ನೀರಿನ ವ್ಯವಸ್ಥೆ: ಸ್ವರ್ಣಾ ನದಿಯಿಂದ ಎರಡು ಹಂತಗಳಲ್ಲಿ ಉಡುಪಿಗೆ ನೀರು ಸರಬರಾಜಾಗುತ್ತಿದೆ. 1971ರಲ್ಲಿ ಮೊದಲ ಹಂತದಲ್ಲಿ ಪ್ರತಿದಿನ 9.00 ದಶಲಕ್ಷ ಲೀಟರ್ ನೀರು ಸರಬರಾಜು ಯೋಜನೆ ಆಗಿ ದ್ದರೆ, ಮುಂದೆ 2006ರಲ್ಲಿ ಆರಂಭ ಗೊಂಡ ಸ್ವರ್ಣಾ ಎರಡನೇ ಹಂತದ ಯೋಜನೆಯಲ್ಲಿ ಉಡುಪಿಗೆ ಪ್ರತಿದಿನ 27.24 ದಶಲಕ್ಷ ಲೀಟರ್ ನೀರು ಸರ ಬರಾಜು ಆಗಬೇಕಿದೆ. ಆದರೆ ಸುಡು ಬೇಸಿಗೆಯ (ಫೆಬ್ರವರಿ - ಮೇ ನಡು ವಿನ) ಅಂದಾಜು 101ದಿನಗಳಲ್ಲಿ ಸ್ವರ್ಣಾ ನದಿಯಲ್ಲಿ ನೀರಿನ ಹರಿವು ಏನೇನೂ ಇರುವುದಿಲ್ಲ ಎಂದು ದಾಖಲೆಗಳು ಹೇಳುತ್ತಿವೆ.

ಹಾಲಿ ಇರುವ ಎರಡು ಹಂತದ ಯೋಜನೆಗಳಲ್ಲಿ ಉಡುಪಿಯಿಂದ 15 ಕಿ.ಮೀ. ದೂರದ ಬಜೆಯಲ್ಲಿ ಹಾಗೂ ಅಲ್ಲಿಂದ 7.1ಕಿ.ಮೀ. ದೂರದ ಶೀರೂರು ಮಠದ ಬಳಿ (ಉಡುಪಿಗೆ 25 ಕಿ.ಮೀ. ದೂರ) ಸ್ವರ್ಣಾ ನದಿಗೆ ಒಡ್ಡು ಕಟ್ಟಿ (ವೆಂಟೆಡ್ ಡ್ಯಾಮ್) ನೀರನ್ನು ಹಿಡಿದಿಡಲಾಗುತ್ತಿದೆ. ಬಜೆ ಬಳಿ ಜಾಕ್ ವೆಲ್ ಮೂಲಕ ನದಿಯ ನೀರನ್ನು ಹಿಡಿದು ಮಣಿಪಾಲದ ಬಳಿ ಶುದ್ಧೀಕರಿಸಿ ನಗರಕ್ಕೆ ವಿತರಿಸಲಾಗುತ್ತಿದೆ. ಉಡುಪಿಯಲ್ಲಿ ಹಾಲೀ ಜನಸಂಖ್ಯೆ 1.36ಲಕ್ಷ ಇದ್ದು, ಅದು 2046ರ ಹೊತ್ತಿಗೆ 1.94ಲಕ್ಷಕ್ಕೆ ಏರುವ ನಿರೀಕ್ಷೆ ಇದೆ. (ವಿವರಗಳಿಗೆ ಬಾಕ್ಸ್ ನೋಡಿ) ಈ ವಾ ಸ್ತವಗಳನ್ನು ಗಮನದಲ್ಲಿರಿಸಿಕೊಂಡು ವಾರಾಹಿ ನದಿಯಿಂದ ನೀರನ್ನು ತರಲಾಗುವುದು ಎಂದು ಹಾಲೀ ಯೋಜನಾವರದಿ ವಿವರಿಸುತ್ತದೆ.

ವಾಸ್ತವ ಏನು?

 ಉಡುಪಿಗೆ ಹತ್ತಿರದಲ್ಲೇ ಇರುವ ಸೀತಾ ಅಥವಾ ಮಡಿಸಾಲು ನದಿಗಳಿಂದ ನೀರು ತರುವ ಬದಲು 38.5 ಕಿಮೀ. ದೂರದಲ್ಲಿರುವ ವಾರಾಹಿ ನದಿಯಿಂದ ನೀರು ತರುತ್ತಿರುವ ಉದ್ದೇಶ ಏನೆಂಬುದು ಹಲವು ಅನುಮಾನಗಳನ್ನು ಹುಟ್ಟಿಸಿದೆ.

ಸ್ವರ್ಣಾ ನದಿಯಲ್ಲಿ 96.11 Tmc ಸೀತಾ ನದಿಯಲ್ಲಿ 103. 94 Tmc ಮತ್ತು ಮಡಿಸಾಲು ನದಿಯಲ್ಲಿ 34.42 Tmc ನೀರು ಲಭ್ಯವಿದೆ. ಇವುಗಳಲ್ಲಿ ಸ್ವರ್ಣಾ ಹೊರತುಪಡಿಸಿದರೆ, ಉಳಿದೆರಡು ನದಿಗಳಲ್ಲಿನ ನೀರನ್ನು ಈ ತನಕ ಈ ರೀತಿಯ ಯೋಜನೆಗಳಿಗೆ ಬಳಕೆ ಮಾಡಲಾಗಿಲ್ಲ. ಹತ್ತಿರದಲ್ಲೇ ಇರುವ ಆ ನದಿಗಳನ್ನು ಬಿಟ್ಟು ಈಗಾಗಲೇ ಸಾಕಷ್ಟು ಒತ್ತಡಗಳನ್ನು ಹೊಂದಿರುವ ದೂರದ ವಾರಾಹಿಯತ್ತ ಕಣ್ಣು ಹಾಕಲಾಗಿದೆ.

 1979ರಲ್ಲಿ ಗುಂಡೂರಾವ್ ಸರಕಾರ ನೀರಾವರಿ ಯೋಜನೆಗೆಂದು ವಾರಾಹಿ ನದಿಯತ್ತ ಕಣ್ಣು ಹಾಕಿದ ದಿನದಿಂದಲೇ ವಾರಾಹಿ ನದಿ ಮತ್ತು ಅದರ ಅಚ್ಚುಕಟ್ಟು ಪ್ರದೇಶದ ರೈತಸಮುದಾಯ ಶಾಪಗ್ರಸ್ತಗೊಂಡಿದೆ. ವಾರಾಹಿ ನದಿಯಲ್ಲಿ 119.79 Tmc ನೀರಿನ ಲಭ್ಯತೆ ಇದೆಯಾದರೂ, ಅದನ್ನು ನೀರಾವರಿಗೆ ಬಳಸಲು ಸ್ಥಳೀಯರು ಸುದೀರ್ಘ ಹೋರಾಟವನ್ನೇ ನಡೆಸಬೇಕಾಯಿತು. ಖಾಸಗಿ ವಿದ್ಯುತ್ ಉತ್ಪಾದಕರ, ಗುತ್ತಿಗೆದಾರರ ಲಾಬಿಯಿಂದ ಎದುರಾದ ನೂರಾರು ಅಡೆತಡೆಗಳನ್ನು ನಿವಾರಿಸಿಕೊಂಡು ಮೂವತ್ತ್ತು ವರ್ಷಗಳ ಬಳಿಕ ರೈತರಿಗೆ ನೀರು ಇನ್ನೇನು ದೊರಕಿತೆನ್ನುವಾಗಲೇ, ಖಾಸಗಿ ವಿದ್ಯುತ್ ಉತ್ಪಾದಕರ ‘ಲಾಬಿ ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಿಂದ’ ಎಂಬಂತೆ ಬಹಳ ಚಾಣಾಕ್ಷತೆಯಿಂದ ಹೊಸ ರೂಪದಲ್ಲಿ ವಕ್ಕರಿಸಿಕೊಂಡಿದೆ.

(ಮುಂದುವರಿಯುವುದು)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X