Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಹತ್ತು ಮತ್ತರ ಭೂಮಿ

ಹತ್ತು ಮತ್ತರ ಭೂಮಿ

ರಂಜಾನ್ ದರ್ಗಾರಂಜಾನ್ ದರ್ಗಾ20 March 2018 12:23 AM IST
share
ಹತ್ತು ಮತ್ತರ ಭೂಮಿ

ಹತ್ತು ಮತ್ತರ ಭೂಮಿ, ಬತ್ತದ ಹಯನು, ನಂದಾದೀವಿಗೆಯ

ನಡೆಸಿಹೆವೆಂಬವರ ಮುಖವ ನೋಡಲಾಗದು.

ಅವರ ನುಡಿಯ ಕೇಳಲಾಗದು.

ಅಂಡಜ, ಸ್ವೇದಜ, ಉದ್ಭಿಜ, ಜರಾಯುಜವೆಂಬ ಪ್ರಾಣಿಗಳಿಗೆ

ಭವಿತವ್ಯವ ಕೊಟ್ಟವರಾರೊ?

ಒಡೆಯರಿಗೆ ಉಂಡಲಿಗೆಯ ಮುರಿದಿಕ್ಕಿದಂತೆ

ಎನ್ನಿಂದಲೇ ಆಯಿತ್ತು, ಎನ್ನಿಂದಲೇ ಹೋಯಿತ್ತು ಎಂಬವನ ಬಾಯಲ್ಲಿ

ಮೆಟ್ಟಿ ಹುಡಿಯ ಹೊಯ್ಯದೆ ಮಾಬನೆ

ಕೂಡಲಸಂಗಮದೇವ?

-ಬಸವಣ್ಣ

ಹತ್ತು ಮತ್ತರ (ನಾಲ್ಕು ಮೊಳ ಎಂದರೆ ಒಂದು ಮಾರು. ನೂರು ಮಾರು ಎಂದರೆ ಒಂದು ಮತ್ತರ) ಭೂಮಿ, ಎಲ್ಲ ಕಾಲದಲ್ಲೂ ಒಂದಿಲ್ಲೊಂದು ಹಸು ಹಾಲು ಹಿಂಡುತ್ತಲೇ ಇರುವ ರೀತಿಯಲ್ಲಿ ಗೋದಾನ, ನಿರಂತರ ಬೆಳಗುವ ದೀವಿಗೆಗೆ ಬೇಕಾದ ಎಣ್ಣೆ ತುಪ್ಪಗಳ ಪೂರೈಕೆ, ಹೀಗೆ ದೇವಕಾರ್ಯಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡಿರುವುದಾಗಿ ಜಂಭ ಕೊಚ್ಚಿಕೊಳ್ಳುವ ಧಣಿಗಳ ಮುಖ ನೋಡಲು ಹೇಸಿಗೆಯಾಗುವುದು. ಅವರ ಮಾತು ಕೇಳಲು ಅಸಹ್ಯವಾಗುವುದು. ಏಕೆಂದರೆ ಈ ಧನವಂತರು ದೇವಕಾರ್ಯಕ್ಕಾಗಿ ಕೊಡುವ ದಾನ ಆ ದೇವರೇ ಕೊಟ್ಟ ದ್ರವ್ಯವಾಗಿದೆ. ಹೀಗೆ ದಾನ ಮಾಡಿ ಶಾಸನ ಕೆತ್ತಿಸುವ ಮೂಲಕ ಅಮರರಾಗುವ ಬಯಕೆ ಅವರದಾಗಿದೆ. ದಾಸೋಹ ಭಾವದ ಬಸವಣ್ಣನವರಿಗೆ ಈ ದಾನದ ಪರಿಕಲ್ಪನೆ ವಾಕರಿಕೆ ಹುಟ್ಟಿಸುವಂಥದ್ದಾಗಿದೆ. ಜಗತ್ತಿನಲ್ಲಿ ಕ್ರಿಮಿಕೀಟಕ, ಪಶು, ಪಕ್ಷಿ ಮತ್ತು ಮಾನವರೆಲ್ಲ ಬದುಕುವುದು ಯಾರಿಂದ ಎಂದು ಅವರು ಪ್ರಶ್ನಿಸುತ್ತಾರೆ.

ನಾಲ್ಕು ರೀತಿಯ ಜೀವಿಗಳು ಈ ಜಗತ್ತಿನಲ್ಲಿವೆ. ಮೊಟ್ಟೆಯಿಂದ ಹುಟ್ಟುವ ಹಾವು, ಮೀನು, ಆಮೆ, ಮೊಸಳೆಯಂಥ ಪ್ರಾಣಿಗಳು ಮತ್ತು ಪಕ್ಷಿಗಳು; ಬೆವರಿನಿಂದ ಹುಟ್ಟುವ ಹೇನು, ಕೂರಿನಂಥ ಜೀವಿಗಳು; ಭೂಮಿಯ ತಂಪಿನಿಂದ ಸೃಷ್ಟಿಯಾಗುವ ಕ್ರಿಮಿಗಳು ಹಾಗೂ ಗರ್ಭದಿಂದ ಜನ್ಮತಾಳುವ ಪ್ರಾಣಿಗಳು ಮತ್ತು ಮಾನವರನ್ನು ಯಾರು ಸಲಹುತ್ತಾರೆ ಎಂದು ಪ್ರಶ್ನಿಸುವುದರ ಮೂಲಕ ದೇವರೇ ಸಲಹುತ್ತಾನೆ ಎಂಬುದನ್ನು ತಿಳಿಹೇಳುತ್ತಾರೆ.

ಇಡೀ ಜಗತ್ತನ್ನೇ ತಮ್ಮ ಮನದಲ್ಲಿ ತುಂಬಿಕೊಂಡು, ಮನೆ ಮಠ ಬಿಟ್ಟು ಪರಿವ್ರಾಜಕರಾಗಿ, ಹಸಿವು ನೀರಡಿಕೆಗಳನ್ನು ಲೆಕ್ಕಿಸದೆ ಊರೂರು ಸುತ್ತುತ್ತಾ ಸರ್ವಸಮತ್ವದ ಶರಣಧರ್ಮವನ್ನು ಪ್ರಸಾರ ಮಾಡುವ ಜಂಗಮೋತ್ತಮರೇ ಬಸವಣ್ಣನವರ ದೃಷ್ಟಿಯಲ್ಲಿ ಒಡೆಯರು. ‘ತಿರುಕರೆನ್ನದಿರಿಂ ಭೋ! ಎನ್ನ ಒಡೆಯರನು’ ಎಂದು ಅವರು ಬೇರೊಂದು ವಚನದಲ್ಲಿ ಇವರ ಬಗ್ಗೆ ಹೇಳಿದ್ದಾರೆ. ಇಂಥ ಒಡೆಯರಿಗೆ ಉಂಡಿ, ಚಕ್ಕುಲಿ ಮುಂತಾದ ತಿಂಡಿತಿನಿಸುಗಳನ್ನು ಕೃತ್ರಿಮ ವಿನಯದಿಂದ ಪೂರೈಸುತ್ತ, ‘‘ಇವರ ಆಗುಹೋಗುಗಳಿಗೆ ನಾನೇ ಕಾರಣ’’ ಎಂದು ಹೇಳಿಕೊಳ್ಳುವ ಗರ್ವಿಷ್ಠನ ಬಾಯನ್ನು ಮೆಟ್ಟಿ ಮಣ್ಣು ಹಾಕದೆ ಬಿಡುವನೇ ನಮ್ಮ ಕೂಡಲಸಂಗಮದೇವ ಎಂದು ಬಸವಣ್ಣನವರು ಎಚ್ಚರಿಸುತ್ತಾರೆ.

share
ರಂಜಾನ್ ದರ್ಗಾ
ರಂಜಾನ್ ದರ್ಗಾ
Next Story
X