ಗೌರಿ ಲಂಕೇಶ್ ಹತ್ಯೆ ಪ್ರಕರಣ: ತಪ್ಪೊಪ್ಪಿಕೊಂಡ ಬಂಧಿತ ನವೀನ್?
ಬೆಂಗಳೂರು, ಮಾ.20: ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಪ್ರಮುಖ ಆರೋಪಿ ಕೆ.ಟಿ. ನವೀನ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎಸ್ ಐಟಿ ಹೇಳಿರುವುದಾಗಿ news18.com ವರದಿ ಮಾಡಿದೆ.
ನವೀನ್ ಹಾಗು ಆತನ ಸಹವರ್ತಿ ಪ್ರವೀಣ್ ವಿಜಯನಗರದಲ್ಲಿ ಆದಿ ಚುಂಚನಗಿರಿ ಕಾಂಪ್ಲೆಕ್ಸ್ ನಲ್ಲಿ ಕೊಲೆಗೆ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ವಿಚಾರಣೆ ಸಂದರ್ಭ ಆತ ಪೊಲೀಸರನ್ನು ಕೊಲೆ ನಡೆದ ಹಾಗು ಸಂಚು ರೂಪಿಸಿದ ಸ್ಥಳಕ್ಕೆ ಕರೆದೊಯ್ದಿದ್ದ ಎನ್ನಲಾಗಿದೆ.
ತನಿಖಾಧಿಕಾರಿಯ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಲಾಗಿದೆಯೇ ಹೊರತು, ನ್ಯಾಯಾಧೀಶರ ಮುಂದೆಯಲ್ಲ. ಸುಳ್ಳು ತಪಾಸಣೆ ಪರೀಕ್ಷೆಗೆ ಆತ ಒಪ್ಪಿಕೊಂಡಿದ್ದು, ಕೊಲೆ ನಡೆದ ರಾತ್ರಿ ಆತ ಬಳಸಿದ್ದ ದಾರಿಯಲ್ಲೇ ಪೊಲೀಸರನ್ನು ಕರೆದೊಯ್ದಿದ್ದಾನೆ ಎಂದು news18.com ವರದಿ ಮಾಡಿದೆ.
ಇತ್ತೀಚೆಗಷ್ಟೇ ಪೊಲೀಸರು ನವೀನ್ ಕುಮಾರ್ ನನ್ನು ಬಂಧಿಸಿದ್ದರು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನವನಾದ ನವೀನ್ ಕುಮಾರ್ ಬೀರೂರಿನಲ್ಲಿ ವಾಸಿಸುತ್ತಿದ್ದ. 2017ರ ಸೆಪ್ಟಂಬರ್ 5ರಂದು ನಡೆದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಿಂದ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು.