Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮಕ್ಕಾದ ಮಸೀದಿಯನ್ನು ಮಕ್ಕೇಶ್ವರ ಮಂದಿರ...

ಮಕ್ಕಾದ ಮಸೀದಿಯನ್ನು ಮಕ್ಕೇಶ್ವರ ಮಂದಿರ ಎಂದ ಹಿಂದೂ ಮಹಾಸಭಾ!

ವಾರ್ತಾಭಾರತಿವಾರ್ತಾಭಾರತಿ20 March 2018 10:13 PM IST
share
ಮಕ್ಕಾದ ಮಸೀದಿಯನ್ನು ಮಕ್ಕೇಶ್ವರ ಮಂದಿರ ಎಂದ ಹಿಂದೂ ಮಹಾಸಭಾ!

ಆಗ್ರಾ,ಮಾ.20: ಅಲಿಗಡ ಹಿಂದೂ ಮಹಾಸಭಾ ಇತ್ತೀಚಿಗೆ ಬಿಡುಗಡೆಗೊಳಿಸಿರುವ ವಿವಾದಾತ್ಮಕ ಹಿಂದೂ  ಹೊಸವರ್ಷದ ಕ್ಯಾಲೆಂಡರ್‌ನಲ್ಲಿ ತಾಜ್‌ಮಹಲ್ ಸೇರಿದಂತೆ ಮುಘಲರ ಕಾಲದ ಏಳು ಮಸೀದಿಗಳು ಮತ್ತು ಸ್ಮಾರಕಗಳನ್ನು ಹಾಗೂ ಮುಸ್ಲಿಮರ ಪವಿತ್ರ ಯಾತ್ರಾಸ್ಥಳ ಮಕ್ಕಾದ ಮಸೀದಿಯನ್ನು ಹಿಂದು ದೇಗುಲಗಳು ಎಂದು ಉಲ್ಲೇಖಿಸಲಾಗಿದೆ.

 ತಾಜ್‌ಮಹಲ್‌ನ್ನು ‘ತೇಜೋಮಹಾಲಯಮಂದಿರ’ ವೆಂದು ಉಲ್ಲೇಖಿಸಿದ್ದರೆ, ಮಕ್ಕಾದ ಮಸೀದಿಯನ್ನು ‘ಮಕ್ಕೇಶ್ವರಮಹಾದೇವಮಂದಿರ’ವೆಂದು ಬಣ್ಣಿಸಲಾಗಿದೆ. ಇದೇರೀತಿ ಮಧ್ಯಪ್ರದೇಶದ ಕಮಲ್ ವೌಲಾಮಸೀದಿಯನ್ನು ‘ಭೋಜಶಾಲಾ’ ಮತ್ತು ಕಾಶಿಯ ಜ್ಞಾನವ್ಯಾಪಿ ಮಸೀದಿಯನ್ನು ‘ವಿಶ್ವನಾಥ ಮಂದಿರ‘ವೆಂದು ಉಲ್ಲೇಖಿಸಲಾಗಿದೆ. ದಿಲ್ಲಿಯ ಕುತುಬ್ ಮಿನಾರ್ ‘ವಿಷ್ಣು ಸ್ತಂಭ’ವಾದರೆ, ಜಾನಪುರದ ಅತಾಲಾಮಸೀದಿಯು ‘ಅತ್ಲಾ ದೇವಿಮಂದಿರ’ವಾಗಿದೆ. ಅಯೋಧ್ಯೆಯ ಬಾಬರಿ ಮಸೀದಿ ‘ರಾಮ ಜನ್ಮಭೂಮಿ’ಯ ಹಣೆಪಟ್ಟಿಯನ್ನು ಹಚ್ಚಲಾಗಿದೆ.

 ಹಿಂದೂ ಹೊಸವರ್ಷದ ಆರಂಭವಾದ ಯುಗಾದಿಯಂದು ನಾವು ಹವನ ವಿಧಿಗಳನ್ನು ನಡೆಸಿದ್ದೇವೆಮತ್ತು ಈ ದೇಶವನ್ನು ಹಿಂದುರಾಷ್ಟ್ರವನ್ನಾಗಿಸುವ ನಿರ್ಣಯವನ್ನು ಕೈಗೊಂಡಿದ್ದೇವೆ ಎಂದು ಸುದ್ದಿಗಾರರಿಗೆ ತಿಳಿಸಿದ ಹಿಂದೂಮಹಾಸಭಾದ ರಾಷ್ಟ್ರೀಯಕಾರ್ಯದರ್ಶಿ ಪೂಜಾಶಕುನ್ ಪಾಂಡೆಅವರು, ಸರಕಾರವು ನಮ್ಮ ಬೇಡಿಕೆಯನ್ನು ಒಪ್ಪಿಕೊಳ್ಳುತ್ತದೆ ಮತ್ತು ಭಾರತವನ್ನು ಹಿಂದೂರಾಷ್ಟ್ರವನ್ನಾಗಿಘೋಷಿಸುತ್ತದೆ ಎಂದು ಆಶಿಸಿರುವುದಾಗಿ ತಿಳಿಸಿದರು.

ಹಿಂದು ಧಾರ್ಮಿಕ ಸ್ಥಳಗಳನ್ನು ಕೊಳ್ಳೆಹೊಡೆದ ಮುಸ್ಲಿಮರು ಅವುಗಳ ಹೆಸರುಗಳನ್ನು ಬದಲಿಸಿ ಮಸೀದಿಗಳನ್ನಾಗಿ ಪರಿವರ್ತಿಸಿದ್ದರು.ಅವರು ಅವುಗಳನ್ನು ಈಗ ಹಿಂದೂಗಳಿಗೆ ಮರಳಿಸಬೇಕು ಮತ್ತು ಹೊಸಕ್ಯಾಲೆಂಡರ್‌ನಲ್ಲಿ ಉಲ್ಲೇಖಿಸಿರುವಂತೆ ಅವುಗಳ ಮೂಲಹೆಸರುಗಳನ್ನು ಮರುನಾಮಕರಣ ಮಾಡಲಾಗುವುದು ಎಂದರು.

ಈ ಏಳು ಧಾರ್ಮಿಕಸ್ಥಳಗಳು ಹಿಂದುಗಳಿಗೆಸೇರಿದ್ದು ಎನ್ನುವುದನ್ನು ವಾಸ್ತವಾಂಶಗಳುಶಂಕೆಗೆಎಡೆಇಲ್ಲದಂತೆ ಸಾಬೀತುಗೊಳಿಸಬಲ್ಲವು.ಯಾವುದೇ ವಿವಾದವಿದ್ದರೆ ರಾಮಮಂದಿರ ಪ್ರಕರಣದಲ್ಲಿಯಂತೆ ಉತ್ಖನನಗಳನ್ನು ನಡೆಸಬೇಕುಮತ್ತು ಆಗ ಸಾಕ್ಷಾಧಾರಗಳು ದೊರೆಯಲಿವೆ ಎಂದು ಅಲಿಗಡದ ಕಾಲೇಜಿನ ಇತಿಹಾಸ ವಿಭಾಗದ ನಿವೃತ್ತ ಪ್ರೊಫೆಸರ್, ಇತಿಹಾಸ ತಜ್ಞ ಬಿ.ಪಿ.ಸಕ್ಸೇನಾ ಹೇಳಿದರು.

ಹಿಂದೂಮಹಾಸಭಾದ ಈ ಹೇಳಿಕೆಗೆಮುಸ್ಲಿಮರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇವೆಲ್ಲ ನಿರಾಧಾರ ಹೇಳಿಕೆಗಳು.ಮಕ್ಕಾದ ಪವಿತ್ರತಾಣವನ್ನು ಹಿಂದೂಮಂದಿರ ಎಂದು ಬಣ್ಣಿಸುವುದರ ಉದ್ದೇಶ ಮುಸ್ಲಿಮರ ಭಾವನೆಗಳಿಗೆ ನೋವನ್ನುಂಟುಮಾಡುವುದಾಗಿದೆ ಮತ್ತು ಇದು ಜಾತ್ಯತೀತತೆಯ ಸ್ಫೂರ್ತಿಗೆ ವಿರುದ್ಧವಾಗಿದೆ ಎಂದು ಅಖಿಲಭಾರತ ಮುಸ್ಲಿಂ ವೈಯಕ್ತಿಕ ಕಾನೂನುಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿರುವ ಇಮಾಮ್-ಎ-ಈದ್ಗಾ ಮೌಲಾನಾ ಖಾಲಿದ್ ರಶೀದ್ ಫಿರಂಗಿಮಹ್ಲಿ ಅವರು ಹೇಳಿದರು.ಈ ಜನರು ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಕೋಮುಸೌಹಾರ್ದವನ್ನು ಅನಗತ್ಯವಾಗಿ ಹಾಳುಮಾಡುತ್ತಿದ್ದಾರೆ ಮತ್ತು ದ್ವೇಷವನ್ನು ಹರಡುತ್ತಿರುವುದಕ್ಕಾಗಿ ಅವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಪಾಕಿಸ್ತಾನದ ಹಫೀಝ್ ಮುಹಮ್ಮದ್ ಸಯೀದ್‌ಗೂ ಮತ್ತು ದೇಶವನ್ನು ಹಾಳುಮಾಡುವಉದ್ದೇಶವನ್ನು ಮಾತ್ರಹೊಂದಿರುವ ಈ ಜನರಿಗೂ ಯಾವುದೇವ್ಯತ್ಯಾಸವಿಲ್ಲ.ಇದುಎರಡುಸಮುದಾಯಗಳಮಧ್ಯೆ ಬಿರುಕನ್ನು ಮೂಡಿಸುವ ಪ್ರಯತ್ನವಾಗಿದೆಎಂದುಹೇಳಿದಅಲಿಗಡದಮಾಜಿ ಶಾಸಕ ಝಮೀರುಲ್ಲಾ ಖಾನ್ ಅವರು, ಒಡೆದುಆಳುವ ನೀತಿಯನ್ನು ನಂಬಿರುವ ಸರಕಾರದ ನಿರ್ದೇಶದಮೇರೆಗೆಇದೆಲ್ಲ ನಡೆಯುತ್ತಿದೆ ಎಂದು ಆರೋಪಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X