ಮಾ.22 ರಂದು ಎಸ್.ಎಂ. ಕೃಷ್ಣನಗರ ಬಡಾವಣೆ ಉದ್ಘಾಟನೆ: ಹೆಚ್.ಆರ್. ಕೃಷ್ಣಕುಮಾರ್
![ಮಾ.22 ರಂದು ಎಸ್.ಎಂ. ಕೃಷ್ಣನಗರ ಬಡಾವಣೆ ಉದ್ಘಾಟನೆ: ಹೆಚ್.ಆರ್. ಕೃಷ್ಣಕುಮಾರ್ ಮಾ.22 ರಂದು ಎಸ್.ಎಂ. ಕೃಷ್ಣನಗರ ಬಡಾವಣೆ ಉದ್ಘಾಟನೆ: ಹೆಚ್.ಆರ್. ಕೃಷ್ಣಕುಮಾರ್](https://www.varthabharati.in/sites/default/files/images/articles/2018/03/20/H.R. KRISHNASWAMI- press meet (6).jpg)
ಹಾಸನ, ಮಾ. 20: ನಗರದ ಅರಸೀಕೆರೆ ರಸ್ತೆ ಬಳಿ ಇರುವ ನೂತನ ಎಸ್.ಎಂ. ಕೃಷ್ಣನಗರ ಬಡಾವಣೆಯ ಉದ್ಘಾಟನೆ ಕಾರ್ಯಕ್ರಮವನ್ನು ಮಾರ್ಚ್.22 ರ ಗುರುವಾರ ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ ಎಂದು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಆರ್. ಕೃಷ್ಣಕುಮಾರ್ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಯುವ ಸಬಲಿಕರಣ ಕ್ರೀಡಾಇಲಾಖೆ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 453 ಎಕರೆ ಪ್ರದೇಶದಲ್ಲಿ ಬಡಾವಣೆಯನ್ನು ಅಭಿವೃದ್ದಿಪಡಿಸಿದ್ದು, ವಿವಿಧ ಅಳತೆಯ 6,335 ನಿವೇಶನಗಳನ್ನು ರಚಿಸಲಾಗಿದೆ. ಇದರಲ್ಲಿ 2,459 ನಿವೇಶನಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗಿದ್ದು, 2,645 ನಿವೇಶನಗಳನ್ನು ಬಡಾವಣೆಗೆ ಭೂಮಿ ನೀಡಿದ ರೈತರಿಗೆ ನೀಡಲಾಗಿದೆ ಎಂದರು.
ಸಮರ್ಪಕ ಕುಡಿಯುವ ನೀರು, ಒಳಚರಂಡಿ, ವಿದ್ಯುತ್, ಪಾರ್ಕ್, ಆಟದ ಮೈದಾನ ಹಾಗೂ ಎಲ್ಲಾ ರೀತಿಯ ಮೂಲಭೂತ ಸೌಲಭ್ಯ ಗಳಿದ್ದು, ಏಷ್ಯಾದಲ್ಲಿಯೇ ನಂ.1 ಬಡಾವಣೆಯಾಗಿದೆ. ಬಡಾವಣೆಯನ್ನು ಗುರುವಾರ ಬೆಳೀಗ್ಗೆೆ 11 ಗಂಟೆಗೆ ನಗರಾಭಿವೃದ್ದಿ ಸಚಿವ ರೋಷನ್ ಬೇಗ್ ಬಡಾವಣೆಯನ್ನು ಉದ್ಘಾಟಿಸಲಿದ್ದು, ಇದೇ ವೇಳೆ 14 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಗುದ್ದಲಿ ಪೂಜೆ ನೆರವೇರಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು, ಕ್ರಿಕೆಟ್ ಆಟಗಾರರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಉಳಿದ ಸಿಎ ನಿವೇಶನ ಖಾಲಿಇದ್ದು, 300 ಮೂಲೆ ನಿವೇಶನಗಳು ಕೂಡ ಇದೆ ಎಂದರು.
ಈ ಸಂದರ್ಭದಲ್ಲಿ ಹುಡಾ ನಿದೇರ್ಶಕರಾದ ಮೋಹನ್ಕುಮಾರ್, ತಾರಾಚಂದನ್, ಶಂಕರರಾಜು ಇದ್ದರು.