ಹೊತ್ತಿ ಉರಿದ ತೈಲ ಟ್ಯಾಂಕರನ್ನು ಪೆಟ್ರೋಲ್ ಬಂಕ್ ನಿಂದ ದೂರ ಸಾಗಿಸಿದ ಸಾಹಸಿ: ತಪ್ಪಿದ ಭಾರೀ ಅನಾಹುತ
ಸಾಜಿದ್ ಸಮಯಪ್ರಜ್ಞೆಗೆ ವ್ಯಾಪಕ ಪ್ರಶಂಸೆ
ಮಧ್ಯಪ್ರದೇಶ, ಮಾ.26: ಹೊತ್ತಿ ಉರಿಯುತ್ತಿದ್ದ ತೈಲ ಟ್ಯಾಂಕರನ್ನು ಪೆಟ್ರೋಲ್ ಬಂಕ್ ವೊಂದರಿಂದ ದೂರ ಸಾಗಿಸಿ ಹಲವು ಜನರ ಪ್ರಾಣ ಉಳಿಸಿದ ಚಾಲಕರೊಬ್ಬರ ಧೈರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ಮಧ್ಯಪ್ರದೇಶದ ನರಸಿಂಗ್ ಪುರದಲ್ಲಿ ಈ ಘಟನೆ ನಡೆದಿದ್ದು, ಸಾಜಿದ್ ಎಂಬವರೇ ಸಮಯಪ್ರಜ್ಞೆ ಮೆರೆದ ಚಾಲಕ. ಇದೇ ಬಂಕ್ ನಲ್ಲಿ ಹಲವು ವಾಹನಗಳ ತೈಲ ತುಂಬಿಸಿಕೊಳ್ಳು ಸಾಲುಗಟ್ಟಿ ನಿಂತಿತ್ತು.
ತೈಲ ಟ್ಯಾಂಕರೊಂದು ಹೊತ್ತಿ ಉರಿಯುತ್ತಿದ್ದುದನ್ನು ನಾನು ನೋಡಿದೆ. ಪೆಟ್ರೋಲ್ ಬಂಕ್ ನಿಂದ ಹೇಗಾದರೂ ಮಾಡಿ ಟ್ಯಾಂಕರನ್ನು ದೂರ ಸಾಗಿಸಬೇಕು ಎಂದು ನಾನು ಆಲೋಚಿಸಿದೆ. ತೈಲ ಸಂಗ್ರಹಣಾ ಪ್ರದೇಶಕ್ಕೆ ಬೆಂಕಿ ಹರಡಿದ್ದರೆ ಭಾರೀ ಅಪಾಯ ಎದುರಾಗುತ್ತಿತ್ತು ಎಂದು ಸಾಜಿದ್ ಹೇಳಿದ್ದಾರೆ.
ಸಾಜಿದ್ ಅವರ ಕೈಗಳಿಗೆ ಸುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೈಲ ಟ್ಯಾಂಕರ್ ಗೆ ಬೆಂಕಿ ತಗಲಿದ ಕಾರಣ ಇನ್ನೂ ಸ್ಪಷ್ಟಗೊಂಡಿಲ್ಲ. ದಾರಿಹೋಕರು ಸಾಜಿದ್ ಹೊತ್ತಿ ಉರಿಯುತ್ತಿದ್ದ ಟ್ಯಾಂಕರ್ ಚಲಾಯಿಸುತ್ತಿರುವುದನ್ನು ವಿಡಿಯೋ ಮಾಡಿದ್ದು, ವೈರಲ್ ಆಗಿದೆ.
#WATCH A petrol tanker caught fire while it was being emptied at a petrol pump in MP's Narsinghpur. In an attempt to save lives, the truck driver drove the burning truck to a location away from the petrol pump. Truck driver suffered burns, admitted to hospital (25 March) pic.twitter.com/YBchJ5YsZh
— ANI (@ANI) March 26, 2018
#WATCH Truck driver Sajid who drove a burning petrol tanker truck away from a petrol pump in an attempt to save lives on 25th March, in Madhya Pradesh's Narsignhpur (Mobile phone footage, quality as incoming) pic.twitter.com/LfhZenBulW
— ANI (@ANI) March 26, 2018