Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಬಡಹಾರುವ

ಬಡಹಾರುವ

ವಾರ್ತಾಭಾರತಿವಾರ್ತಾಭಾರತಿ27 March 2018 12:01 AM IST
share
ಬಡಹಾರುವ

ಬಡಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ!
ಮಾಲೆಗಾರನೇಸು ಭಕ್ತನಾದಡೆಯೂ ಬಾವಿಯ ಬೊಮ್ಮನ ಹಂಗ ಬಿಡ!
ಬಣಜಿಗನೇಸು ಭಕ್ತನಾದಡೆಯೂ ಒಟ್ಟಿಲ ಬೆನಕನ ಹಂಗ ಬಿಡ!
ಕಂಚುಗಾರನೇಸು ಭಕ್ತನಾದಡೆಯೂ ಕಾಳಿಕಾದೇವಿಯ ಹಂಗ ಬಿಡ!
ನಾನಾ ಹಂಗಿನವನಲ್ಲ, ನಿಮ್ಮ ಶರಣರ ಹಂಗಿನವನಯ್ಯ
                                          ಕೂಡಲಸಂಗಮದೇವಾ. -ಬಸವಣ್ಣ

ಬಸವಣ್ಣನವರು ಹೊಸ ಬದುಕಿಗಾಗಿ ಪ್ರಾರಂಭಿಸಿದ ಚಳವಳಿಯಲ್ಲಿ ಎಲ್ಲ ಜಾತಿಗಳ ಜನರು ಜೊತೆಗೂಡಿದರು. ಜಾತಿ ಸಂಕರಗೊಂಡ ಶರಣಸಂಕುಲದಲ್ಲಿ ಗುರುತಿಸಿಕೊಂಡರು. ಇಷ್ಟಲಿಂಗದ ಮೂಲಕ ಏಕದೇವೋಪಾಸನೆಯನ್ನು ಒಪ್ಪಿಕೊಂಡರು. ಆದರೆ ಅವರಲ್ಲಿನ ಅನೇಕರು ತಮ್ಮ ಹಿಂದಿನ ಜಾತಿ ವ್ಯವಸ್ಥೆಯ ದೌರ್ಬಲ್ಯಗಳಿಂದ ಹೊರಬರದೆ ಹಳೆಯ ದೇವರುಗಳ ಹಂಗಿನಲ್ಲೇ ಬದುಕುವುದನ್ನು ಮುಂದುವರಿಸಿದರು. ಅವರ ಈ ಧರ್ಮಸಂಕಟವನ್ನು ಬಸವಣ್ಣನವರು ಗಮನಿಸಿದ್ದಾರೆ. ಹಳೆಯ ಮೂಢನಂಬಿಕೆಗಳ ಜಡಸಂಸ್ಕೃತಿಯನ್ನು ಬಿಟ್ಟು, ವೈಚಾರಿಕ ಮನೋಭಾವದಿಂದ ಕೂಡಿದ ಹೊಸ ಚೈತನ್ಯಶೀಲ ಸಂಸ್ಕೃತಿಯನ್ನು ಅಪ್ಪಿಕೊಂಡವರು ಆ ಸಂಕ್ರಮಣ ಘಟ್ಟದಲ್ಲಿ ಮಾನಸಿಕ ತೊಳಲಾಟಕ್ಕೆ ಒಳಗಾದರು. ಭಯವೇ ಧರ್ಮದ ಮೂಲವಾಗಿದ್ದ ಸಂದರ್ಭದ ಹಳೆಯ ದೇವರನ್ನು ಬಿಡಲಿಕ್ಕಾಗಲಿಲ್ಲ. ದಯವೇ ಧರ್ಮದ ಮೂಲವಾದ ಹೊಸ ವಾತಾವರಣದಲ್ಲಿ ಅಗಮ್ಯ, ಅಗೋಚರ, ಅಪ್ರತಿಮ ದೇವರ ಕುರುಹು ಆದ ಇಷ್ಟಲಿಂಗವನ್ನು ಪೂಜಿಸುತ್ತಲೇ ಹಳೆಯ ದೇವರುಗಳ ಪೂಜೆ ಮಾಡುವುದನ್ನೂ ಮುಂದುವರಿಸಿದರು.
ಬಡ ಬ್ರಾಹ್ಮಣರನೇಕರು ಶರಣಧರ್ಮ ಸ್ವೀಕರಿಸಿದರು. ಜೀವಾತ್ಮನನ್ನು ಪರಮಾತ್ಮನಲ್ಲಿ ಒಂದಾಗಿಸುವುದರ ಮೂಲಕ ಲಿಂಗಾಂಗಸಾಮರಸ್ಯದ ಅನುಭಾವ ಪಡೆಯ ಬಯಸಿದರು. ಅದೇ ಸಂದರ್ಭದಲ್ಲಿ ಜನಿವಾರದ ಹಂಗಿನೊಳಗೆ ಇರತೊಡಗಿದರು. ಆ ಹಂಗು ಹರಿದುಕೊಳ್ಳಲು ಅವರು ಮುಂದಾಗಲಿಲ್ಲ. ಹೂವಾಡಿಗರು ಭಕ್ತರಾಗಿ ಹೊಸ ಜೀವನವಿಧಾನ ಸ್ವೀಕರಿಸಿದರೂ ಬಾವಿಯ ಬೊಮ್ಮನ ಋಣದಿಂದ ಹೊರಬರಲಿಕ್ಕೆ ಸಾಧ್ಯವಾಗಲಿಲ್ಲ. ತಮ್ಮ ಹೂದೋಟದ ಬಾವಿಯ ಮಾಡಿನಲ್ಲಿರುವ ಬ್ರಹ್ಮನ ಮೂರ್ತಿಗೆ ಹೂ ಹಾಕಿ, ಹೂದೋಟದ ರಕ್ಷಣೆ ಮಾಡೆಂದು ಪ್ರಾರ್ಥಿಸದೆ ಬಿಡಲಿಲ್ಲ. ವ್ಯಾಪಾರಿಗಳು ಭಕ್ತವರ್ಗಕ್ಕೆ ಸೇರಿ ಇಷ್ಟಲಿಂಗ ಆರಾಧಕರಾದರು. ಆದರೆ ಧಾನ್ಯದ ರಾಶಿಯ ಮೇಲೆ ಗಣಪತಿಯ ಮೂರ್ತಿಯನ್ನಿಟ್ಟು ‘ವ್ಯಾಪಾರಕ್ಕೆ ವಿಘ್ನ ಬರದಂತೆ ನೋಡಿಕೊಳ್ಳು’ ಎಂದು ಪ್ರಾರ್ಥಿಸುವುದನ್ನು ಬಿಡಲಿಲ್ಲ. (ಒಟ್ಟಿಲ ಬೆನಕ ಎಂದರೆ ತೂಕದ ಕಲ್ಲುಗಳ ರಾಶಿ ಎಂದೂ ಅರ್ಥವಾಗುತ್ತದೆ. ಬಣಜಿಗರು ತೂಕದ ಕಲ್ಲುಗಳ ಪೂಜೆಯನ್ನೂ ಮಾಡುತ್ತಾರೆ.) ಕಂಚುಗಾರರು ಹೊಸಧರ್ಮ ಸ್ವೀಕರಿಸಿದರೂ ತಮ್ಮ ಹಳೆಯ ಕುಲದೇವತೆಯಾದ ಕಾಳಿಕಾದೇವಿಯ ಆರಾಧನೆಯನ್ನು ನಿಲ್ಲಿಸಲಿಲ್ಲ.
ಆದರೆ ಬಸವಣ್ಣನವರು ಬ್ರಾಹ್ಮಣ್ಯದಿಂದ ಸಂಪೂರ್ಣವಾಗಿ ಮುಕ್ತರಾಗಿದ್ದಾರೆ. ನವಸಮಾಜ ನಿರ್ಮಾಣದಲ್ಲಿ ತಲ್ಲೀನರಾದ ಶರಣರಿಗೆ ಮಾರ್ಗದರ್ಶಿಯಾಗಿ ಮುನ್ನಡೆಯುತ್ತಿದ್ದಾರೆ. ಅಂತೆಯೆ ‘ನಾನಾ ಹಂಗಿನವನಲ್ಲ, ನಿಮ್ಮ ಶರಣರ ಹಂಗಿನವನಯ್ಯಾ’ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X