"ಯಡಿಯೂರಪ್ಪ ಸರಕಾರ ನಂ.1 ಭ್ರಷ್ಟ ಸರಕಾರ"
ಅಮಿತ್ ಶಾ ಎಡವಟ್ಟು
![ಯಡಿಯೂರಪ್ಪ ಸರಕಾರ ನಂ.1 ಭ್ರಷ್ಟ ಸರಕಾರ ಯಡಿಯೂರಪ್ಪ ಸರಕಾರ ನಂ.1 ಭ್ರಷ್ಟ ಸರಕಾರ](https://www.varthabharati.in/sites/default/files/images/articles/2018/03/27/amit-shah-7593.jpg)
ದಾವಣಗೆರೆ, ಮಾ.27: ಯಡಿಯೂರಪ್ಪ ಸರಕಾರ ನಂ.1 ಭ್ರಷ್ಟ ಸರಕಾರ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಶಾ, ಸಿದ್ದರಾಮಯ್ಯನೇತೃತ್ವದ ರಾಜ್ಯ ಸರಕಾರವನ್ನು ಟೀಕಿಸುವ ಭರದಲ್ಲಿ ಸಿದ್ದರಾಮಯ್ಯ ಎಂದು ಹೇಳುವ ಬದಲಿಗೆ ಬಾಯ್ತಪ್ಪಿ ಯಡಿಯೂರಪ್ಪ ಸರಕಾರ ಭ್ರಷ್ಟ ಸರಕಾರ ಎಂದು ಹೇಳಿದ್ದಾರೆ. ಪಕ್ಕದಲ್ಲಿದ್ದ ಸಂಸದ ಪ್ರಹ್ಲಾದ್ ಜೋಶಿ ತಪ್ಪನ್ನು ತಿದ್ದಿದರು. ಶಾ ಅವರ ಎಡವಟ್ಟಿನ ಮಾತಿನಿಂದ ಪತ್ರಕರ್ತರು, ಅಕ್ಕಪಕ್ಕದಲ್ಲಿದ್ದ ಬಿಜೆಪಿ ನಾಯಕರು ಒಂದು ಕ್ಷಣ ಅವಕ್ಕಾದರು. ಆದರೆ, ಶಾ ತನ್ನ ತಪ್ಪಿಗೆ ಕ್ಷಮೆ ಕೇಳದೆ ತಮ್ಮ ಮಾತನ್ನು ಮುಂದುವರಿಸಿದರು. ಏನೂ ಆಗಿಲ್ಲವೆಂಬಂತೆ ನಡೆದುಕೊಂಡರು.
ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಜೆಡಿಎಸ್ನೊಂದಿಗೆ ಹೊಂದಾಣಿಕೆಯ ರಾಜಕೀಯ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Next Story