ಎಪ್ರಿಲ್ ಒಳಗಡೆ ಎಐಎಡಿಎಂಕೆ ಬಣ ವಿವಾದ ಪರಿಹರಿಸಿ: ಹೈಕೋರ್ಟ್ಗೆ ಸುಪ್ರೀಂ ಸೂಚನೆ
ಹೊಸದಿಲ್ಲಿ, ಮಾ. 28: ಟಿಟಿವಿ ದಿನಕರ್ನ ನೇತೃತ್ವದ ಎಐಎಡಿಎಂಕೆ ಬಣಕ್ಕೆ ‘ಪ್ರೆಶರ್ ಕುಕ್ಕರ್’ ಚಿಹ್ನೆ ನೀಡುವಂತೆ ಚುನಾವಣಾ ಆಯೋಗಕ್ಕೆ ದಿಲ್ಲಿ ಉಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ರದ್ದುಗೊಳಿಸಿದೆ.
ಪಕ್ಷದ ಕುರಿತಂತೆ ಅವರ ವೈರಿಗಳ ಪ್ರತಿಪಾದನೆ ಹಾಗೂ ‘ಎರಡು ಎಲೆಗಳು’ ಚಿಹ್ನೆ ಕುರಿತಂತೆ ತಮಿಳುನಾಡು ಮುಖ್ಯಮಂತ್ರಿ ಇ.ಕೆ. ಪಳನಿಸ್ವಾಮಿ ಹಾಗೂ ದಿನಕರನ್ ನೇತೃತ್ವದ ಎಐಎಡಿಎಂಕೆಯ ಎರಡು ಬಣಗಳ ನಡುವಿನ ವಿವಾದವನ್ನು ಎಪ್ರಿಲ್ ಅಂತ್ಯದ ಒಳಗಡೆ ನಿರ್ಧರಿಸಲು ದ್ವಿಸದಸ್ಯ ಪೀಠ ರೂಪಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯದ ಪ್ರಭಾರಿ ನ್ಯಾಯಮೂರ್ತಿ ಅವರಿಗೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಹಾಗೂ ಎ.ಎಂ. ಖಾನ್ವಿಲ್ಕರ್ ಅವರನ್ನು ಒಳಗೊಂಡ ಪೀಠ ಸೂಚಿಸಿದೆ. ದಿನಕರನ್ ನೇತೃತ್ವದ ಬಣಕ್ಕೆ ಎಐಎಡಿಎಂಕೆ (ಅಮ್ಮಾ) ಎಂದು ಹೆಸರು ಹಾಗೂ ಚುನಾವಣಾ ಚಿಹ್ನೆಯಾಗಿ ಆದ್ಯತೆಯಾಗಿ ‘ಪ್ರೆಶರ್ ಕುಕ್ಕರ್’ ನೀಡುವಂತೆ ದಿಲ್ಲಿ ಉಚ್ಚ ನ್ಯಾಯಾಲಯ ಮಾರ್ಚ್ 9ರಂದು ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತ್ತು.
Next Story