ಚಾಮರಾಜನಗರ: ಮತದಾರರಿಗೆ ಹಂಚಲು ತಂದಿದ್ದ ಗಡಿಯಾರ ವಶ
ನೀತಿ ಸಂಹಿತೆ ಉಲ್ಲಂಘನೆ
![ಚಾಮರಾಜನಗರ: ಮತದಾರರಿಗೆ ಹಂಚಲು ತಂದಿದ್ದ ಗಡಿಯಾರ ವಶ ಚಾಮರಾಜನಗರ: ಮತದಾರರಿಗೆ ಹಂಚಲು ತಂದಿದ್ದ ಗಡಿಯಾರ ವಶ](/images/placeholder.jpg)
ಚಾಮರಾಜನಗರ,ಮಾ.29: ರಾಜ್ಯದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಬಿಜೆಪಿ ಆಕಾಂಕ್ಷಿಯೊಬ್ಬರ ಭಾವಚಿತ್ರದೊಂದಿಗೆ ಕಮಲದ ಗುರುತು ಇರುವ ಗೋಡೆ ಗಡಿಯಾರವನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ವಿಧಾನ ಸಭಾ ಕ್ಷೇತ್ರದ ಮಧುವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ವಿಧಾನ ಸಭಾ ಕ್ಷೇತ್ರದ ಮಧುವನಹಳ್ಳಿ ಗ್ರಾಮದ ಶಿವರಾಜ್ರವರ ಅಂಗಡಿ ಮೇಲೆ ಸೆಕ್ಟರ್ ಮ್ಯಾಜಸ್ಟ್ರೇಟ್ ಸವಿತಾಕುಮಾರಿ ದಾಳಿ ನಡೆಸಿದಾಗ, ಅಲ್ಲಿದ್ದ 142 ಗೋಡೆ ಗಡಿಯಾರದಲ್ಲಿ ಬಿಜೆಪಿ ಟಿಕೇಟ್ ಆಕಾಂಕ್ಷಿ ಮಂಜುನಾಥ್ ಮತ್ತು ಕಮಲದ ಭಾವಚಿತ್ರ ಕಂಡು ಬಂದಿದ್ದು, ಅವುಗಳನ್ನು ತಕ್ಷಣವೇ ವಶಪಡಿಸಿಕೊಳ್ಳಲಾಯಿತು.
ಪ್ರಕರಣ ದಾಖಲಿಸಿಕೊಂಡ ಚುನಾವಣಾ ಸಿಬ್ಬಂದಿ ಸವಿತಾ ಕುಮಾರಿ, ಶಿವರಾಜ್, ಬಸವಶೆಟ್ಟಿ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಂಜುನಾಥ್ ಮೇಲೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Next Story