Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನಮ್ಮ ಸಾಧನಗಳು ಸಾವಿಗೆ ಕಾರಣವಾಗಬಹುದು...

ನಮ್ಮ ಸಾಧನಗಳು ಸಾವಿಗೆ ಕಾರಣವಾಗಬಹುದು ಎಂದಿದ್ದ ಫೇಸ್ ಬುಕ್ ಉಪಾಧ್ಯಕ್ಷ!

ವಾರ್ತಾಭಾರತಿವಾರ್ತಾಭಾರತಿ30 March 2018 3:37 PM IST
share
ನಮ್ಮ ಸಾಧನಗಳು ಸಾವಿಗೆ ಕಾರಣವಾಗಬಹುದು ಎಂದಿದ್ದ ಫೇಸ್ ಬುಕ್ ಉಪಾಧ್ಯಕ್ಷ!

''ನಮ್ಮ ಸಾಧನಗಳು ಸಾವಿಗೆ ಕಾರಣವಾಗಬಹುದು. ಆದರೂ ನಾವು ಜನರ ನಡುವೆ ಸಂಪರ್ಕದ ಸಾಧನವಾಗಿದ್ದೇವೆ'' ಎಂದು ಇತ್ತೀಚೆಗೆ ಬಿಡುಗಡೆಗೊಂಡ ಮೆಮೋದಲ್ಲಿ ಫೇಸ್ ಬುಕ್ ಉಪಾಧ್ಯಕ್ಷ ಆ್ಯಂಡ್ರೂ ಬೋಸ್ವರ್ಥ್ ಉಲ್ಲೇಖಿಸಿದ್ದಾರೆಂದು www.bloomberg.com ವೆಬ್ ಸೈಟ್ ವರದಿ ಮಾಡಿದೆ. 

 ‘‘ನಮ್ಮ ಸಾಧನಗಳ ಮೂಲಕ ಸಂಘಟಿಸಲ್ಪಟ್ಟ ಉಗ್ರ ದಾಳಿಯೊಂದರಲ್ಲಿ ಯಾರಾದರೂ ಸಾಯಬಹುದು. ಆದರೂ ನಾವು ಜನರ ನಡುವೆ ಸಂಪರ್ಕದ ಸಾಧನವಾಗಿದ್ದೇವೆ’’ ಎಂದು 2016ರಲ್ಲಿ ಬರೆಯಲಾಗಿತ್ತೆನ್ನಲಾದ ಮೆಮೋದಲ್ಲಿ ಫೇಸ್ ಬುಕ್ ಉಪಾಧ್ಯಕ್ಷ ಆ್ಯಂಡ್ರೂ ಬೋಸ್ವರ್ಥ್ ಹೇಳಿದ್ದಾರೆ. ‘‘ಕಹಿ ಸತ್ಯವೆಂದರೆ ನಾವು ಜನರ ನಡುವೆ ಸಂಪರ್ಕ ಸಾಧನವಾಗುತ್ತೇವೆಂದು ನಂಬಿದ್ದೇವೆ, ಅದೆಷ್ಟೆಂದರೆ ಹೆಚ್ಚು ಜನರನ್ನು ಸಂಪರ್ಕಿಸುವ ಸಾಧನವು ವಸ್ತುಶಃ ಒಳ್ಳೆಯದು ಎಂದು ನಂಬಿದ್ದೇವೆ’’ ಎಂದು ಅವರು ಬರೆದಿರುವುದಾಗಿ 'ಬ್ಲೂಂಬರ್ಗ್' ವರದಿ ಮಾಡಿದೆ.

ಯಾವುದೇ ಬೆಲೆ ತೆತ್ತಾದರೂ ಅಭಿವೃದ್ಧಿ ಸಾಧಿಸಬೇಕೆಂಬ ಫೇಸ್ ಬುಕ್ ಉದ್ದೇಶವನ್ನು ಈ ಮೆಮೋ ವಿವರಿಸುತ್ತದೆಯಲ್ಲದೆ, ಸೋಶಿಯಲ್ ನೆಟ್ವರ್ಕ್ ನ ಕೆಟ್ಟ ಪರಿಣಾಮಗಳು, ಸಾವುಗಳು ಹಾಗೂ ಉಗ್ರ ದಾಳಿಗಳು ಕೂಡ ಅದು ಜನರ ನಡುವೆ ಸಂಪರ್ಕ ಸೇತುವಾಗುವುದನ್ನು ತಪ್ಪಿಸಲು ಕಾರಣವಾಗದು ಎಂದು ವಿವರಿಸಲಾಗಿದೆ.

ತಪ್ಪು ಮಾಹಿತಿ, ಹಿಂಸಾತ್ಮಕ ವೀಡಿಯೋಗಳು, ಜನಾಂಗೀಯ ನಿಂದನೆಗೈಯ್ಯುವ ಜಾಹೀರಾತುಗಳು ಹಾಗೂ ಕಳೆದ ವಾರ ಖಾಸಗಿತನದ ವಿಚಾರದ ಹಗರಣ ಫೇಸ್ ಬುಕ್ ಅನ್ನು ಬೆಂಬಿಡದೆ ಕಾಡಿತ್ತು.

‘ದಿ ಅಗ್ಲಿ’ ಎಂಬ ಶೀರ್ಷಿಕೆಯ ಮೆಮೋದಲ್ಲಿ ಫೇಸ್ ಬುಕ್ ಉಪಾಧ್ಯಕ್ಷ ಆ್ಯಂಡ್ರೂ, ತಮ್ಮ ಸಂಸ್ಥೆ ಪ್ರಗತಿ ಸಾಧಿಸಲು ತೆಗೆದುಕೊಳ್ಳಬೇಕಾದ ರಿಸ್ಕ್ ಗಳು ಭವಿಷ್ಯದ ದೊಡ್ಡ ಉದ್ದೇಶ ಈಡೇರಿಸಲು ಅಗತ್ಯ ಎಂದಿದ್ದಾರೆ.

‘‘ಇದೇ ಕಾರಣಕ್ಕೆ ಅಭಿವೃದ್ಧಿಗಾಗಿ ನಾವು ಮಾಡುವ ಕೆಲಸಗಳೆಲ್ಲಾ ಸಮರ್ಥನೀಯ. ಎಲ್ಲಾ ಪ್ರಶ್ನಾರ್ಹ ಕಾಂಟಾಕ್ಟ್ ಇಂಪೋರ್ಟಿಂಗ್ ಪದ್ಧತಿಗಳು, ಜನರಿಗೆ ಪರಸ್ಪರ ಸಂಪರ್ಕದಲ್ಲಿರುವಂತಹ ಸಾಧನಗಳು, ಇವುಗಳನ್ನೆಲ್ಲಾ ಸಮರ್ಥಿಸಬೇಕಾಗಿದೆ’’ ಎಂದು ಅವರು ಬರೆದಿದ್ದಾರೆ.

ಈ ಮೆಮೋ ಬಗ್ಗೆ ಟ್ವಿಟ್ಟರ್ ನಲ್ಲಿ ಗುರುವಾರ ಪ್ರತಿಕ್ರಿಯಿಸಿದ ಬೋಸ್ವರ್ಥ್, ಅದರಲ್ಲಿ ಬರೆದಿದ್ದನ್ನು ತಾವು ಈಗ ಸಂಪೂರ್ಣವಾಗಿ ಒಪ್ಪುವುದಿಲ್ಲ ಎಂದಿದ್ದಾರೆ. ‘‘ಅದನ್ನು ಬರೆದಿದ್ದಾಗಲೂ ನಾನು ಅದನ್ನು ಒಪ್ಪಿರಲಿಲ್ಲ’’ ಎಂದು ಅವರು ಹೇಳಿದ್ದಾರೆ. ‘‘ಇದನ್ನು ಗಮನಿಸಿದರೆ ನಾನು ಹೊಂದಿರುವ ಅಥಾ ಕಂಪೆನಿ ಹೊಂದಿರುವ ಧೋರಣೆ ಇದೆಂದು ಯಾರಿಗಾದರೂ ಅನಿಸಬಹುದು. ನಮ್ಮ ಸಾಧನಗಳು ಜನರನ್ನು ಹೇಗೆ ಬಾಧಿಸುತ್ತವೆ ಎಂಬ ಬಗ್ಗೆ ನಮಗೆ ಕಾಳಜಿಯಿದೆ’’ ಎಂದು ಅವರು ಟ್ವೀಟ್ ಮಾಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X